ಎಲ್ಲಾ ಟೂರ್ನಿ ನಡೆಸಲು ಬಿಸಿಸಿಐಗೆ ಕೆಎಸ್‌ಸಿಎ ಸಲಹೆ

Kannadaprabha News   | Asianet News
Published : Dec 02, 2020, 04:01 PM IST
ಎಲ್ಲಾ ಟೂರ್ನಿ ನಡೆಸಲು ಬಿಸಿಸಿಐಗೆ ಕೆಎಸ್‌ಸಿಎ ಸಲಹೆ

ಸಾರಾಂಶ

ಎಲ್ಲಾ ದೇಸಿ ಟೂರ್ನಿಗಳನ್ನು ನಡೆಸಲು ಬಿಸಿಸಿಐಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಲಹೆ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಡಿ.02): ದೇಶೀಯವಾಗಿ ನಡೆಯಲಿರುವ ಎಲ್ಲಾ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಸ್‌ಸಿಎ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐಗೆ ಸಲಹೆ ನೀಡಿದೆ. ಕೊರೋನಾ ಕಾಲದಲ್ಲಿ ದೇಶೀಯ ಟೂರ್ನಿ ಆಯೋಜನೆಗೆ ಇತ್ತೀಚೆಗಷ್ಟೇ ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸಲಹೆ ಕೇಳಿತ್ತು. ಈ ಪ್ರಕಾರ ಕೆಎಸ್‌ಸಿಎ ಮಂಗಳವಾರ ಬಿಸಿಸಿಐಗೆ ಸಲಹಾ ಸೂಚನೆಗಳ ಪಟ್ಟಿಯನ್ನು ರವಾನಿಸಿದೆ.

ಟಿ20 ಮತ್ತು ರಣಜಿ ಟ್ರೋಫಿಯನ್ನು ಮೊದಲು ಆಯೋಜಿಸಬಹುದಾಗಿದೆ. ಆ ಬಳಿಕ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯನ್ನು ನಡೆಸಬಹುದು. ಹಾಗೆ ಎಲ್ಲಾ ವಯೋಮಾನದ ಪುರುಷ ಮತ್ತು ಮಹಿಳಾ ಟೂರ್ನಿಗಳನ್ನು ನಡೆಸಬಹುದಾಗಿದೆ ಎಂದು ಕೆಎಸ್‌ಸಿಎ ಹೇಳಿದೆ. ಇದರಲ್ಲಿ ದುಲೀಪ್‌ ಟ್ರೋಫಿ. ಇರಾನಿ ಟ್ರೋಫಿ ಮತ್ತು ದೇವಧರ್‌ ಟ್ರೋಫಿಗಳನ್ನು ಕೈ ಬಿಡಬಹುದಾಗಿದೆ ಎನ್ನಲಾಗಿದೆ.

ಆರಂಭದಲ್ಲಿ ಸೂಚಿಸಿರುವ ಎಲ್ಲಾ ಟೂರ್ನಿಗಳನ್ನು ನಡೆಸಲೇಬೇಕಿದೆ. ಒಂದೊಮ್ಮೆ ಟೂರ್ನಿ ಆಯೋಜನೆ ಸಾಧ್ಯವಾಗದಿದ್ದರೆ, ಆಟಗಾರರು, ವಯೋಮಾನದ ಕ್ರಿಕೆಟಿಗರು, ಅಂಪೈರ್‌ಗಳು, ಸ್ಕೋರರ್‌ಗಳು, ವಿಡಿಯೋ ಅನಾಲಿಸ್ಟ್‌, ತರಬೇತುದಾರರು, ಸಹಾಯಕ ಸಿಬ್ಬಂದಿಗಳು ಮತ್ತು ಇತರರಿಗೆ ಹೆಚ್ಚಿನ ನಷ್ಟ ಉಂಟಾಗಲಿದೆ ಎಂದು ಕೆಎಸ್‌ಸಿಎ ಖಜಾಂಚಿ ಮತ್ತು ವಕ್ತಾರ ವಿನಯ್‌ ಮೃತ್ಯುಂಜಯ ಹೇಳಿದ್ದಾರೆ.

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಸಚಿನ್ ವಿಶ್ವದಾಖಲೆ ವಿರಾಟ್ ಪಾಲು..!

ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ಉತ್ಸುಕವಾಗಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 8 ರಿಂದ 10 ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!