ಲಂಕಾ ಎದುರಿನ ಅಭ್ಯಾಸ ಪಂದ್ಯ: ಮೊದಲ ದಿನವೇ ಟೀಂ ಇಂಡಿಯಾ ಬೌಲರ್ಸ್‌ ಥಂಡಾ!

Kannadaprabha News   | Kannada Prabha
Published : Aug 08, 2026, 09:46 AM IST
Ravindra Jadeja

ಸಾರಾಂಶ

ಶ್ರೀಲಂಕಾ ಪ್ರವಾಸದ ಅಭ್ಯಾಸ ಪಂದ್ಯದ ಮೊದಲ ದಿನ, ಶ್ರೀಲಂಕಾ ಕ್ರಿಕೆಟ್‌ ಇಲೆವೆನ್ ತಂಡ ಭಾರತದ ಬೌಲರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿ 8 ವಿಕೆಟ್‌ಗೆ 363 ರನ್ ಗಳಿಸಿತು. ಲಂಕಾ ಪರ ನಿಶಾನ್ ಫೆರ್ನಾಂಡೋ, ರವಿಂದು ರಸಾಂತ ಮತ್ತು ಸೊನಲ್‌ ದಿನುಶಾ ಅರ್ಧಶತಕ ಬಾರಿಸಿದರೆ, ಭಾರತದ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದರು.

ಕೊಲಂಬೊ: ಶ್ರೀಲಂಕಾ ಪ್ರವಾಸದ ಮೊದಲ ದಿನವೇ ಭಾರತೀಯ ಬೌಲರ್‌ಗಳು ದಣಿದಿದ್ದಾರೆ. ಲಂಕಾದ ಭವಿಷ್ಯದ ತಾರೆಯರು ಎನಿಸಿರುವ ಆಟಗಾರರ ವಿರುದ್ಧ ಭಾರತೀಯ ಬೌಲರ್‌ಗಳು 3 ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಸಾಧಾರಣ ಪ್ರದರ್ಶನ ತೋರಿದರು. ಭಾರತದ ಅನುಭವಿ ಬೌಲಿಂಗ್‌ ಪಡೆ ಎದುರು, ಶ್ರೀಲಂಕಾ ಕ್ರಿಕೆಟ್‌ ಇಲೆವೆನ್ ತಂಡ ಮೊದಲ ದಿನ 8 ವಿಕೆಟ್‌ಗೆ 363 ರನ್‌ ಕಲೆಹಾಕಿತು.

ಈ ಪಂದ್ಯ ಪ್ರಥಮ ದರ್ಜೆ ಪಂದ್ಯವಾಗಿ ಪರಿಗಣಿಸಲ್ಪಡದೆ ಇರುವ ಕಾರಣ, ಉಭಯ ತಂಡಗಳು ಮೊದಲ ಹಾಗೂ 2ನೇ ದಿನ 90 ಓವರ್‌ ಬ್ಯಾಟ್‌ ಮಾಡಲಿವೆ. 3ನೇ ದಿನ ಎರಡೂ ತಂಡಗಳು ತಲಾ 45 ಓವರ್‌ ಬ್ಯಾಟಿಂಗ್‌ ನಡೆಸಲಿವೆ. ಆದರೆ, ಕೋಚ್‌ ಗೌತಮ್‌ ಗಂಭೀರ್‌ ಹಾಗೂ ನಾಯಕ ಶುಭ್‌ಮನ್‌ ಗಿಲ್‌ ಮುಂದೆ ಮೊದಲ ದಿನವೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತ ಮೊದಲ ದಿನವೇ ಫೇಲ್

‘ಆ.15ನೇ ತಾರೀಖು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ. ಎಲ್ಲದ್ದಕ್ಕೂ ಉತ್ತರ ಕಂಡುಕೊಂಡಿದ್ದೇವೆ’ ಎಂದು ಗಂಭೀರ್‌ ಪ್ರವಾಸದ ಆರಂಭದಲ್ಲಿ ಹೇಳಿದ್ದರು. ಆದರೆ, ಇದೀಗ ಕೆಲ ಹೊಸ ಪ್ರಶ್ನೆಗಳು ಹುಟ್ಟಿಕೊಂಡಂತೆ ಕಾಣುತ್ತಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಲಂಕಾ ಇಲೆವೆನ್‌ ತಂಡದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮೊದಲ ವಿಕೆಟ್‌ಗೆ ನಿಶಾನ್‌ ಫೆರ್ನಾಂಡೋ ಹಾಗೂ ರವಿಂದು ರಸಾಂತ 110 ರನ್‌ ಜೊತೆಯಾಟವಾಡಿದರು. ಈ ಇಬ್ಬರೂ ಔಟಾಗುವ ಮುನ್ನ ಅರ್ಧಶತಕ ಗಳಿಸಿದರು. ಅಗ್ರ-8 ಬ್ಯಾಟರ್‌ಗಳ ಪೈಕಿ 7 ಮಂದಿ 30ಕ್ಕಿಂತ ಹೆಚ್ಚು ರನ್‌ ಗಳಿಸಿದರು. ರವಿಂದು 71, ನಿಶಾನ್‌ 66 ಜೊತೆಗೆ ನಾಯಕ ಸೊನಲ್‌ ದಿನುಶಾ 52 ರನ್‌ ಕಲೆಹಾಕಿದರು.

ಭಾರತದ ಪರ ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ ತಲಾ 2, ಮಾನವ್‌ ಸುಥಾರ್‌ 1 ವಿಕೆಟ್‌ ಕಿತ್ತರು. ಸಾರಾಂಶ್‌ ಜೈನ್‌ 11 ಓವರಲ್ಲಿ 54 ರನ್‌ ಬಿಟ್ಟುಕೊಟ್ಟು ವಿಕೆಟ್‌ ಪಡೆಯಲು ವಿಫಲರಾದರು. ವೇಗಿಗಳಾದ ಮೊಹಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಗುರ್ನೂರ್‌ ಬ್ರಾರ್‌ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಶನಿವಾರ ಭಾರತಕ್ಕೆ ಬ್ಯಾಟಿಂಗ್‌ ಅವಕಾಶ ಸಿಗಲಿದ್ದು, ಎಷ್ಟು ಪರಿಣಾಮಕಾರಿಯಾಗಿ ಆಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.

ಗಾಯ: 1ನೇ ದಿನ ಕಣಕ್ಕಿಳಿಯದ ಗಿಲ್‌

ಫೀಲ್ಡಿಂಗ್‌ ಅಭ್ಯಾಸ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾದ ಭಾರತದ ನಾಯಕ ಶುಭ್‌ಮನ್‌ ಗಿಲ್‌ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ದಿನ ಮೈದಾನಕ್ಕಿಳಿಯಲಿಲ್ಲ. ಅವರು ಶನಿವಾರ ಬ್ಯಾಟಿಂಗ್‌ ಮಾಡುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಿಫ್ಟ್‌ ಕೊಡುವಂತೆ ಮಧ್ಯರಾತ್ರಿ CMಗೆ ಕ್ವಾಟ್ಲೆ ಕೊಟ್ಟ ಪಂತ್; ಸ್ಟಾರ್‌ ಕ್ರಿಕೆಟರ್‌ ಕೇಳಿದ ಆ ವಿಶೇಷ ವಸ್ತು ಯಾವುದು?
Rehane: ಗಾವಸ್ಕರ್ Vs ತೆಂಡೂಲ್ಕರ್; ಯಾರು ಗ್ರೇಟ್? ಕ್ಷಣಕಾಲ ಮೌನಕ್ಕೆ ಜಾರಿದ ರಹಾನೆ ಕೊಟ್ಟ 'ಮಾಸ್‌' ಉತ್ತರ ಹೀಗಿತ್ತು!