ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್‌ ಮೇಲೆ ಕಿಡಿಕಾರಿದ ಗವಾಸ್ಕರ್

Suvarna News   | Asianet News
Published : Sep 07, 2021, 04:24 PM IST
ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್‌ ಮೇಲೆ ಕಿಡಿಕಾರಿದ ಗವಾಸ್ಕರ್

ಸಾರಾಂಶ

* ಇಂಗ್ಲೆಂಡ್ ಎದುರು 4ನೇ ಟೆಸ್ಟ್‌ ಪಂದ್ಯವನ್ನು ಜಯಿಸಿದ ಟೀಂ ಇಂಡಿಯಾ * ಭಾರತ ಪರ ಚಿಯರ್ ಅಪ್‌ ಮಾಡುವ ಭರದಲ್ಲಿ ಅಭಿಮಾನಿಗಳ ಎಡವಟ್ಟು * ಭಾರತೀಯ ಫ್ಯಾನ್ಸ್‌ ಕಿವಿಹಿಂಡಿದ ಸುನಿಲ್ ಗವಾಸ್ಕರ್

ನವದೆಹಲಿ(ಸೆ.07): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 50 ವರ್ಷಗಳ ಬಳಿಕ ಓವಲ್‌ ಮೈದಾನದಲ್ಲಿ ಟೆಸ್ಟ್‌ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ಎದುರಿನ 4ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್‌ ಅಂತರದ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1ರ ಮುನ್ನೆಡೆ ಸಾಧಿಸಿದೆ. ಗೆಲುವಿನ ಖುಷಿಯಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾಡಿದ ಒಂದು ಎಡವಟ್ಟಿಗೆ ಮಾಜಿ ದಿಗ್ಗಜ ಕ್ರಿಕೆಟಿಗ ಸುನಿಲ್‌ ಗವಾಸ್ಕರ್ ಕಿಡಿಕಾರಿದ್ದಾರೆ.

ಗೆಲುವಿನ ಖುಷಿಯಲ್ಲಿ ಅಭಿಮಾನಿಗಳು ಕೆಲವೊಮ್ಮೆ ನೈತಿಕ ನೆಲಗಟ್ಟಿನಲ್ಲಿ ಮಿತಿಮೀರಿ ವರ್ತಿಸಿದ ಸನ್ನಿವೇಷಗಳಿಗೂ ಸಾಕ್ಷಿಯಾಗಿದ್ದೇವೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರರ ಕಾರ್ಯ ನಿರ್ವಹಿಸುತ್ತಿರುವ ಸುನಿಲ್‌ ಗವಾಸ್ಕರ್, ಭಾರತೀಯ ಅಭಿಮಾನಿಗಳು ರಾಷ್ಟ್ರಧ್ವಜಕ್ಕೆ ತೋರಿದ ಅಗೌರವದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಓವಲ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ಅಭಿಮಾನಿಗಳ ಗುಂಪೊಂದು ದೊಡ್ಡ ರಾಷ್ಟ್ರಧ್ವಜವೊಂದನ್ನು ಮೈದಾನಕ್ಕೆ ತಂದು ಅದರ ಮೇಲೆ We Bleed Blue ಎಂದು ಬರೆದಿದ್ದರು. ದೇಶದ ಮೇಲೆ ಅಭಿಮಾನ ತೋರಿಸುವ ಭರದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬೇಡಿ ಎಂದು ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ನೀವೆಷ್ಟೇ ದೊಡ್ಡ ಅಭಿಮಾನಿಯಾಗಿರಬಹುದು, ಆದರೆ ರಾಷ್ಟ್ರಧ್ವಜಕ್ಕೆ ಯಾವತ್ತೂ ಅಗೌರವ ತೋರಬೇಡಿ. ಅದು ಹೇಗಿರಬೇಕೋ ಹಾಗೆಯೇ ಇರಲಿ ಎಂದು ಗವಾಸ್ಕರ್ ನೇರ ಪ್ರಸಾರದ ವೀಕ್ಷಕ ವಿವರಣೆಯಲ್ಲೇ ಕಿಡಿಕಾರಿದ್ದಾರೆ.

Ind vs Eng ನೀವು ನೋಡಿರದ ಟೀಂ ಇಂಡಿಯಾ ಗೆಲುವಿನ ಸಂಭ್ರಮಾಚರಣೆಯಿದು..!

ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ರಾಷ್ಟ್ರಧ್ವಜ ಸಂಹಿತೆ 1971ರ ಪ್ರಕಾರ ಅಪರಾಧವಾಗಿದೆ. ಈ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಒಂದು ವೇಳೆ ಇಂತಹ ಘಟನೆ ಭಾರತದಲ್ಲೇ ನಡೆದಿದ್ದರೆ ಬಹುಶಃ ಪರಿಸ್ಥಿತಿ ಬೇರೆಯದ್ದೇ ಆಗಿರುತ್ತಿತ್ತು. ಭಾರತದಲ್ಲಿ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಪಾವಿತ್ರ್ಯತೆ ಹಾಗೂ ಗೌರವವಿದೆ. ರಾಷ್ಟ್ರಧ್ವಜಕ್ಕೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅಭಿಮಾನದ ಭರದಲ್ಲಿ ನಮ್ಮ ಕರ್ತವ್ಯ ಮರೆಯದಿರೋಣ. ನೀವೇನಂತೀರಾ..?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಿನಿ ಹರಾಜು: ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತಕ್ಕೆ ಬಿಡ್ ಆಗಿ ದಾಖಲೆ ಬರೆದ ಕ್ಯಾಮರೋನ್ ಗ್ರೀನ್
ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ