ಬೆಂಗಳೂರಿನಲ್ಲಿ ಸಾಮಾನ್ಯ ಜನರಂತೆ ಓಡಾಡುತ್ತಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್..!

Published : Mar 30, 2025, 07:53 PM ISTUpdated : Mar 30, 2025, 10:40 PM IST
ಬೆಂಗಳೂರಿನಲ್ಲಿ ಸಾಮಾನ್ಯ ಜನರಂತೆ ಓಡಾಡುತ್ತಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್..!

ಸಾರಾಂಶ

ದಿನೇಶ್ ಕಾರ್ತಿಕ್ ಅವರ ಬೆಂಗಳೂರಿನ ಓಡಾಟ ಹಲವರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಅದೂ ಕೂಡ ಒಂದೇ  ರಸ್ತೆಯಲ್ಲಿ, ಒಂದೇ ಕೆಫೆಗೆ ಪದೇಪದೇ ಬರುತ್ತಿದ್ದಾರೆ ದಿನೇಶ್ ಕಾರ್ತಿಕ್. ಅವರ ಹಲವು ಅಭಿಮಾನಿಗಳು ಇದೀಗ ಆ ಕೆಫೆಯ ಬಳಿ ..

ಹೌದು, ಈ ಸುದ್ದಿ ನಿಜ... ನೀವು ನಂಬಲೇಬೇಕು.. ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಅವರು ಬೆಂಗಳೂರಿನ ರಸ್ತೆಯಲ್ಲಿ ಓಡಾಡುತ್ತಿರೋದನ್ನ ನೋಡಿದವರು ಇದ್ದಾರೆ. ಬೆಂಗಳೂರಿನ ನೆರಳು ಕೆಫೆಗೆ ಬಂದು ಕಾಫಿ ಕುಡಿದು ಹೋಗಿದ್ದಾರೆ ದಿನೇಶ್ ಕಾರ್ತಿಕ್. ಜೊತೆಯಲ್ಲಿ ಇಬ್ಬರು ಸಹ-ಆಟಗಾರರು ಹಾಗೂ ಗನ್ ಮ್ಯಾನ್ ಸಹ ಇದ್ದಾರೆ. ಮೊನ್ನೆ ಕೂಡ ಅದೇ ಸ್ಥಳದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ನೋಡಿದವರಿದ್ದಾರೆ. ಈ ಸುದ್ದಿಯೀಗ ಭಾರೀ ವೈರಲ್ ಆಗುತ್ತಿದೆ. 

ಹೌದು, ದಿನೇಶ್ ಕಾರ್ತಿಕ್ ಅವರ ಬೆಂಗಳೂರಿನ ಓಡಾಟ ಹಲವರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಅದೂ ಕೂಡ ಒಂದೇ  ರಸ್ತೆಯಲ್ಲಿ, ಒಂದೇ ಕೆಫೆಗೆ ಪದೇಪದೇ ಬರುತ್ತಿದ್ದಾರೆ ದಿನೇಶ್ ಕಾರ್ತಿಕ್. ಅವರ ಹಲವು ಅಭಿಮಾನಿಗಳು ಇದೀಗ ಆ ಕೆಫೆಯ ಬಳಿ ಸುಳಿಯತೊಡಗಿದ್ದಾರಂತೆ. ಕ್ರಿಕೆಟರ್ ದಿನೇಶ್ ಕಾರ್ತಿಕ್ ನೆಕ್ಸ್ಟ್ ಯಾವಾಗ ಬರ್ತಾರೆ? ಯಾವ ಟೈಮ್ ಅಂತೆಲ್ಲ ವಿಚಾರಿಸತೊಡಗಿದ್ದಾರೆ. ಜೊತೆಯಲ್ಲಿ ಬರುತ್ತಿರುವ ಸಹ ಆಟಗಾರರ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡತೊಡಗಿದೆ.

ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್! 

ಸಾಮಾನ್ಯ ಜನರಲ್ಲಿ ನಟನಟಿಯರು, ಸೆಲೆಬ್ರಟಿಗಳು, ಕ್ರಿಕೆಟರ್ಸ್ ಹಾಗೂ ವಿಐಪಿಗಳ ಸಹಜ ಕುತೂಹಲ ಇರುತ್ತದೆ. ಇಲ್ಲಿ ಕೂಡ ಅದೇ ಕೆಲಸ ಮಾಡುತ್ತಿದೆ. ಜನಸಾಮಾನ್ಯರಂತೆ ಅವರೂ ಸಹ ಎಂಬುದು ಗೊತ್ತಿದ್ದರೂ ಕೂಡ ಅದೇನೋ ಕುತೂಹಲ, ನೋಡಬೇಕೆಂಬ ಕಾತುರ ಹಾಗೂ ಆತುರ ಇದ್ದೇ ಇರುತ್ತೆ. ಇದೀಗ ದಿನೇಶ್ ಕಾರ್ತಿಕ್ ಅವರನ್ನು ಅಲ್ಲಿ ನೋಡಲು, ಮಾತನಾಡಿಸಲು ಹಲವು ಜನರು ಕಾದುಕೊಂಡಿದ್ದಾರೆ. ಈ ಸಂಗತಿಯೀಗ ಹಲವರ ಪಾಲಿಗೆ ಹಬ್ಬಕ್ಕೆ ಹೋಳಿಗೆ ಎಂಬಂತಾಗಿದೆ.

 

ಅಂದಹಾಗೆ, ಏಪ್ರಿಲ್ 02 ರಿಂದ (02 April 2025) ಬೆಂಗಳೂರಿನಲ್ಲಿ ಆರ್‌ಸಿಬಿ (RCB) ಮ್ಯಾಚ್ ಆರಂಭವಾಗಲಿದೆ. ಈ ಕಾರಣಕ್ಕೆ ದಿನೇಶ್ ಕಾರ್ತಿಕ್ ಬೆಂಗಳೂರಿಗೆ ಬಂದಿದ್ದಾರೆ. ರಿಹರ್ಸಲ್ ಇರುತ್ತೆ, ಬೇರೆ ಏನೇನೋ ಪ್ರಿಪರೇಶನ್ಸ್ ಇರುತ್ತೆ, ಅದರ ಮಧ್ಯೆ ಅವರು ಕಾಫಿ ಕುಡಿಯೋದು ಬೇಡ್ವಾ? ಅದಕ್ಕೇ ನೆರಳು ಕೆಫೆ ಕಡೆ ಮುಖ ಮಾಡುತ್ತಿದ್ದಾರೆ. ಅದರಲ್ಲೇನು ತಪ್ಪಿದೆ? ಹೀಗೆ ಹತ್ತು ಹಲವು ಯೋಚನೆಗಳಲ್ಲಿ ಹಲವರು ಮುಳುಗಿದ್ದಾರೆ. ಆದರೆ ಅದ್ಯಾವುದರ ಪರಿವೆ ಇಲ್ಲದೇ ಆ ಕ್ರಿಕಟರ್ ದಿನೇಶ್ ಕಾರ್ತಿಕ್ ತಮ್ಮ ಪಾಡಿಗೆ ತಾವು ಕಾಫಿ ಕುಡಿದು ಹೋಗುತ್ತಿದ್ದಾರೆ. ಜಗತ್ತು ಎಂಥ ವಿಚಿತ್ರವಾಗಿದೆ ಅಂತೀರಾ ಹೇಗೆ? ನೋಡಿ, ಥಿಂಕ್ ಮಾಡಿ..!

ಶೇನ್ ವಾರ್ನ್ ಸಾವಿನ ಹಿಂದಿದೆ ಕಾಣದ ಕೈ; ಕೊನೆಗೂ ಬಯಲಾಯ್ತು ಬೆಚ್ಚಿಬೀಳಿಸೋ ಸುದ್ದಿ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್