ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

Suvarna News   | Asianet News
Published : Nov 25, 2020, 10:55 AM IST
ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

ಸಾರಾಂಶ

ಆಸ್ಟ್ರೇಲಿಯಾದ ನಂಬಿಕಸ್ಥ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಔಟ್ ಮಾಡುವುದು ಹೇಗೆ ಎನ್ನುವ ಸಲಹೆಯನ್ನು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತೀಯ ಬೌಲರ್‌ಗಳಿಗೆ ಕಿವಿ ಮಾತು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ನ.25): ಮುಂಬರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಾರಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಅವರನ್ನು ಔಟ್‌ ಮಾಡಲು ಭಾರತೀಯ ಬೌಲರ್‌ಗಳು 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಸಲಹೆ ನೀಡಿದ್ದಾರೆ. 

‘ಸ್ಮಿತ್‌ ಬ್ಯಾಟಿಂಗ್‌ ಶೈಲಿ ಅಸಾಂಪ್ರದಾಯಿಕವಾಗಿದೆ. ಟೆಸ್ಟ್‌ ಪಂದ್ಯಗಳಲ್ಲಿ ಸಾಮಾನ್ಯವಾಗಿ ನಾವು ಬೌಲರ್‌ಗಳಿಗೆ ಆಫ್‌ಸ್ಟಂಪ್‌ನಿಂದ ಆಚೆ ಇಲ್ಲವೇ 4ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಲು ಹೇಳುತ್ತೇವೆ. ಆದರೆ ಸ್ಮಿತ್‌ ಕ್ರೀಸ್‌ನಲ್ಲಿ ಹೆಚ್ಚು ಓಡಾಡುವ ಕಾರಣ, ಅವರಿಗೆ 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಿದರೆ ಔಟ್‌ ಮಾಡಬಹುದು. ಮಾನಸಿಕವಾಗಿ ಬೌಲರ್‌ಗಳು ಸಿದ್ಧರಾಗಬೇಕು’ ಎಂದು ಸಚಿನ್‌ ಹೇಳಿದ್ದಾರೆ.

ಡಿಸೆಂಬರ್ 17ರಿಂದ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಸರಿಯಾದ ಸಮಯದಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದು ಮಹತ್ವದ್ದಾಗುತ್ತದೆ ಎಂದು ಹೇಳಿದ್ದಾರೆ. ನಸುಬೆಳಕಿನಲ್ಲಿ ಬೌಲರ್‌ಗಳಿಗೆ ಪಿಚ್ ಹೆಚ್ಚು ನೆರವಾಗುವ ಸಾಧ್ಯತೆಯಿದೆ. ಎದುರಾಳಿ ತಂಡವನ್ನು ಸಂಜೆ ಬ್ಯಾಟಿಂಗ್‌ ಮಾಡಲು ಅನುವು ಮಾಡಿಕೊಟ್ಟು 2-3 ವಿಕೆಟ್ ಪಡೆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ 

ವಿರಾಟ್ ಕೊಹ್ಲಿ ಪಡೆಗೆ 92ರ ವಿಶ್ವಕಪ್‌ ಮಾದರಿ ಜೆರ್ಸಿ!

ಟೀಂ ಇಂಡಿಯಾ ಹಿಂದೆಂದಿಗಿಂತಲೂ ಬಲಿಷ್ಠ ಹಾಗೂ ಸಮತೋಲಿತ ಬೌಲಿಂಗ್ ಪಡೆಯನ್ನು ಹೊಂದಿದ್ದು, ಟೆಸ್ಟ್‌ ಸರಣಿಯಲ್ಲಿ ಅಸ್ಟ್ರೇಲಿಯಾದ 20 ವಿಕೆಟ್‌ಗಳನ್ನು ಕಬಳಿಸುವ ಸಾಮರ್ಥ್ಯವನ್ನು ಹೊಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ