ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

Suvarna News   | Asianet News
Published : Jun 16, 2021, 04:40 PM ISTUpdated : Jun 16, 2021, 04:41 PM IST
ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

ಸಾರಾಂಶ

* ಸ್ಪಾಟ್‌ ಫಿಕ್ಸರ್ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯಗೊಳಿಸಿದ ಬಿಸಿಸಿಐ * 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿದ್ದ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ * ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಕನಸು ಕಾಣುತ್ತಿದ್ದಾರೆ ಎಡಗೈ ಸ್ಪಿನ್ನರ್

ಮುಂಬೈ(ಜೂ.16): 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡು ಬಿಸಿಸಿಐನಿಂದ ನಿಷೇಧಕ್ಕೆ ಗುರಿಯಾಗಿದ್ದ ಎಡಗೈ ಸ್ಪಿನ್ನರ್ ಅಂಕಿತ್ ಚೌವಾಣ್ ವನವಾಸ ಅಂತ್ಯವಾಗಿದೆ. ಚೌವಾಣ್ ಮೇಲಿನ ನಿಷೇಧ ಶಿಕ್ಷೆಯನ್ನು ಬಿಸಿಸಿಐ ತೆರವುಗೊಳಿಸಿದೆ.

ಹೌದು, ಐಪಿಎಲ್ ಟೂರ್ನಿಯ ವೇಳೆ ಚೌವಾಣ್ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ತನಿಖೆಯ ವೇಳೆ ದೃಢವಾಗುತ್ತಿದ್ದಂತೆಯೇ 2013ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮೂಲದ ಸ್ಪಿನ್ನರ್ ಮೇಲೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಇನ್ನು ಕಳೆದ ತಿಂಗಳು ಬಿಸಿಸಿಐ ನೈತಿಕ ಅಧಿಕಾರಿಗಳು ಆಜೀವ ಶಿಕ್ಷೆಯ ಬದಲು 7 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ಮಾಜಿ ಬೌಲರ್ ಬಿಸಿಸಿಐ ನಿರಾಪೇಕ್ಷಣ ಪತ್ರಕ್ಕೆ ಎದುರು ನೋಡುತ್ತಿದ್ದಾರೆ.

ಲಂಕಾ ಪ್ರವಾಸಕ್ಕೆ ದ್ರಾವಿಡ್‌ ಕೋಚ್‌: ಗೊಂದಲಗಳಿಗೆ ಸೌರವ್ ತೆರೆ

ಬಿಸಿಸಿಐನಿಂದ ಈ ಔಪಾಚಾರಿಕ ಮಾತುಕತೆಯ ಬಳಿಕ ನಾನು ಹಾಗೂ ನನ್ನ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಹಾಗೂ ನನ್ನ ತವರು ಸಂಸ್ಥೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಕೋವಿಡ್ ಪಿಡುಗು ದೂರವಾದ ಬಳಿಕ ಮೈದಾನಕ್ಕಿಳಿಯಲು ಎದುರು ನೋಡುತ್ತಿರುವುದಾಗಿ ಸ್ಪೋರ್ಟ್ಸ್‌ಸ್ಟಾರ್‌ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿಸಿಐ ನೈತಿಕ ಅಧಿಕಾರಿಗಳು ಕಳೆದು ತಿಂಗಳು ಸಭೆ ಸೇರಿ ಚೌವಾಣ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಪರಿಷ್ಕರಿಸಿ 7 ವರ್ಷಕ್ಕೆ ಇಳಿಸಲಾಯಿತು. ಜೂನ್ 15ಕ್ಕೆ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಕೊನೆಯಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?