
ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್ ನಡುವಿನ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಲಿಲ್ಲ.
ಟಾಸ್ ವೇಳೆ ಭಾರತದ ನಾಯಕ ಜಿತೇಶ್ ಶರ್ಮಾ ಅವರು ಪಾಕ್ನ ನಾಯಕ ಇರ್ಫಾನ್ ಖಾನ್ಗೆ ಶೇಕ್ಹ್ಯಾಂಡ್ ಮಾಡದೆ ಪೆವಿಲಿಯನ್ ಕಡೆ ತೆರಳಿದರು. ರಾಷ್ಟ್ರಗೀತೆಯ ಬಳಿಕವೂ ಉಭಯ ತಂಡಗಳ ಆಟಗಾರರು ಪರಸ್ಪರ ಮಾತನಾಡದೆ ಪ್ರತ್ಯೇಕವಾಗಿ ನಡೆದರು. ಪಂದ್ಯದ ಸಂದರ್ಭದಲ್ಲೂ 2 ತಂಡಗಳ ಆಟಗಾರರು ಮಾತುಕತೆ ನಡೆಸುವ ಗೋಜಿಗೆ ಹೋಗಲಿಲ್ಲ.
ಇತ್ತೀಚೆಗೆ ಏಷ್ಯಾಕಪ್ನಲ್ಲಿ ಭಾರತ ಹಿರಿಯರ ತಂಡ ಪಾಕ್ ಕ್ರಿಕೆಟಿಗರಿಗೆ ಹಸ್ತಲಾಘವ ನಿರಾಕರಿಸಿತ್ತು. ಅದು ಈಗ ಕಿರಿಯರ ಟೂರ್ನಿಯಲ್ಲೂ ಮುಂದುವರಿದಿದೆ.
ಇನ್ನು ಭಾರತ ಎ ಹಾಗೂ ಪಾಕಿಸ್ತಾನ ಎ ತಂಡಗಳ ನಡುವಿನ ಮಹತ್ವದ ಪಂದ್ಯದಲ್ಲಿ ನೆರೆಯ ಪಾಕಿಸ್ತಾನ ತಂಡವು 8 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 'ಎ' ತಂಡವು ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಆ ಬಳಿಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪರಿಣಾಮ ಭಾರತ 'ಎ' ತಂಡವು 19 ಓವರ್ಗೆ ಕೇವಲ 136 ರನ್ ಗಳಿಸಿ ಸರ್ವಪತನ ಕಂಡಿತು.
ಭಾರತ 'ಎ' ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಸಿಡಿಸಿದರೆ, ನಮನ್ ಧೀರ್ 35 ರನ್ ಗಳಿಸಿದರು. ಇನ್ಯಾವ ಬ್ಯಾಟರ್ಗಳು ಕನಿಷ್ಠ 20 ರನ್ ದಾಖಲಿಸಲು ಸಾಧ್ಯವಾಗಲಿಲ್ಲ.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಮಾಝ್ ಸಾಧಖತ್ ಅವರ ಅಜೇಯ ಅರ್ಧಶತಕ(79)ದ ನೆರವಿನಿಂದ ಪಾಕಿಸ್ತಾನ 'ಎ' ತಂಡವು ಇನ್ನೂ 8 ವಿಕೆಟ್ ಬಾಕಿ ಇರುವಂತೆಯೇ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.