ಹಸುಗೂಸಿನ ಶವ ಸಂಸ್ಕಾರಕ್ಕೂ ತಟ್ಟಿದ ಲಾಕ್‌ಡೌನ್‌ ಬಿಸಿ

By Kannadaprabha NewsFirst Published Apr 3, 2020, 4:09 PM IST
Highlights

ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಡಿಕೇರಿ(ಏ.03): ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕು ದಿನ​ಗಳ ಹಿಂದೆ ಈ ಘಟನೆ ನಡೆ​ದಿದ್ದು, ರಾಯಚೂರು ಜಿಲ್ಲೆ ಜಾಕಿನ್ಗೊಡು ಗ್ರಾಮದ ದಂಪತಿ ದೇವರಾಜ್‌ ಹಾಗೂ ಸರೋಜಾ ಕೂಲಿ ಕೆಲಸಕ್ಕೆಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದರು.

ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ

ಗರ್ಭಿಣಿಯಾಗಿದ್ದ ಸರೋಜಾ ಹೆರಿಗೆ ವೇಳೆ ಮಗು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ದಂಪತಿ ಅಸಹಾಯಕ ಸ್ಥಿತಿಯಲ್ಲಿದ್ದರು. ಈ ವೇಳೆ ಮಡಿಕೇರಿ ಯೂತ್‌ ಕಮಿಟಿ ಸಹಾಯಕ್ಕೆ ನಿಂತು ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು. ಬಳಿಕ ವಾಹನದ ಮೂಲಕ ದಂಪತಿಯನ್ನು ಬೆಂಗಳೂರಿಗೆ ಕಳುಹಿಸಿ ಯುತ್‌ ಕಮಿಟಿ ಸದಸ್ಯರು ಮಾನೀಯತೆ ಮೆರೆದರು.

click me!