ಹಸುಗೂಸಿನ ಶವ ಸಂಸ್ಕಾರಕ್ಕೂ ತಟ್ಟಿದ ಲಾಕ್‌ಡೌನ್‌ ಬಿಸಿ

Kannadaprabha News   | Asianet News
Published : Apr 03, 2020, 04:09 PM IST
ಹಸುಗೂಸಿನ ಶವ ಸಂಸ್ಕಾರಕ್ಕೂ ತಟ್ಟಿದ ಲಾಕ್‌ಡೌನ್‌ ಬಿಸಿ

ಸಾರಾಂಶ

ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  

ಮಡಿಕೇರಿ(ಏ.03): ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕು ದಿನ​ಗಳ ಹಿಂದೆ ಈ ಘಟನೆ ನಡೆ​ದಿದ್ದು, ರಾಯಚೂರು ಜಿಲ್ಲೆ ಜಾಕಿನ್ಗೊಡು ಗ್ರಾಮದ ದಂಪತಿ ದೇವರಾಜ್‌ ಹಾಗೂ ಸರೋಜಾ ಕೂಲಿ ಕೆಲಸಕ್ಕೆಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದರು.

ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ

ಗರ್ಭಿಣಿಯಾಗಿದ್ದ ಸರೋಜಾ ಹೆರಿಗೆ ವೇಳೆ ಮಗು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ದಂಪತಿ ಅಸಹಾಯಕ ಸ್ಥಿತಿಯಲ್ಲಿದ್ದರು. ಈ ವೇಳೆ ಮಡಿಕೇರಿ ಯೂತ್‌ ಕಮಿಟಿ ಸಹಾಯಕ್ಕೆ ನಿಂತು ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು. ಬಳಿಕ ವಾಹನದ ಮೂಲಕ ದಂಪತಿಯನ್ನು ಬೆಂಗಳೂರಿಗೆ ಕಳುಹಿಸಿ ಯುತ್‌ ಕಮಿಟಿ ಸದಸ್ಯರು ಮಾನೀಯತೆ ಮೆರೆದರು.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?