ಕೊರೋನಾ ತಡೆಗೆ ದೊಡ್ಡ ದೇಣಿಗೆ ನೀಡಿದ ಧಾರವಾಡದ ಅನ್ನದಾತ

By Suvarna NewsFirst Published Mar 31, 2020, 5:46 PM IST
Highlights

ಕೊರೋನಾ ತಡೆಗೆ ರೈತರಿಂದಲೂ ದೇಣೀಗೆ/ ಒಂದು ಲಕ್ಷ ರೂ. ದೇಣಿಗೆ ನೀಡಿದ ಧಾರವಾಡದ ಪ್ರಗತಿಪರ ರೈತ/ ಮಾದರಿ ಕೆಲಸಕ್ಕೆ ಅಭಿನಂದನೆ

ಧಾರವಾಡ(ಮಾ. 31) ಧಾರವಾಡದ ಪ್ರಗತಿಪರ ಕೃಷಿಕ  ಶಿವಳ್ಳಿ ಕೊರೋನಾ ತಡೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.  ರೈತರೇ ನಿಜವಾದ ಅನ್ನದಾತರು. ಅವರು ಯಾರು ಎಷ್ಟೇ ತೊಂದರೆ ನೀಡಿದರು ಸಹ ತಮ್ಮ ಕಾಯಕದಲ್ಲಿ ಸದಾ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದರಲ್ಲೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ಅಂತಹ ಪ್ರಗತಿಪರ ರೈತರಲ್ಲಿ ಒಬ್ಬರಾದ ಗುಲಗಂಜಿಕೊಪ್ಪದ ರೈತರಾದ ಸದಾನಂದ ಶಿವಳ್ಳಿ ನೆರವು ನೀಡಿ ಮಾದರಿಯಾಗಿದ್ದಾರೆ.

ತಪಾಸಣೆ ಇಲ್ಲದ ಬಂದ ವ್ಯಕ್ತಿಗಳ ಮಾಹಿತಿ ಕೊಟ್ಟವನ ಹತ್ಯೆ!

 ರಾಜ್ಯದ ಕಾರ್ಮಿಕರು, ನಿರಾಶ್ರಿತರು, ನದಿನಗೂಲಿ ನೌಕರು ಹಾಗೂ ಅನೇಕರು ಹಸಿವಿನಿಂದ ಬಳಲುವವರಿಗೆ ಆಸರೆಯಾಗಲಿ ಅನ್ನು ದೃಷ್ಠಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ  ಒಂದು ಲಕ್ಷ ರೂಪಾಯಿಗಳ ಚೆಕ್ಕನ್ನು ಜಿಲ್ಲಾಅಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಕವಿವ ಸಂಘದ ಎಸ್.ಐ ಭಾವಿಕಟ್ಟಿ,ಮಾರ್ತಾಂಡಪ್ಪ ಎಮ್ ಕತ್ತಿ, ಅಧಿಕಾರಿಗಳಾದ  ಜಿಲ್ಲಾ ಯೋಜನಾಧಿಕಾರಿ ದೀಪಕ,ಲಕ್ಷಣ್ಣ ಬಕ್ಕಾಯಿ
ಇದ್ದರು.

click me!