Coronavirus Karnataka
ಲಾಕ್ಡೌನ್ ಉಲ್ಲಂಘಿಸಿ ಹೊರಗೆ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಹಾಗೂ ಕೊರೋನಾವೈರಸ್ ಕುರಿತು ಸುಳ್ಳುಸುದ್ದಿ ಹರಡುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸು ದಾಖಲಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ನವದೆಹಲಿ(ಏ.03): ಲಾಕ್ಡೌನ್ ಉಲ್ಲಂಘಿಸಿ ಹೊರಗೆ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಹಾಗೂ ಕೊರೋನಾವೈರಸ್ ಕುರಿತು ಸುಳ್ಳುಸುದ್ದಿ ಹರಡುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸು ದಾಖಲಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
‘ಯಾವುದೇ ವ್ಯಕ್ತಿ ಲಾಕ್ಡೌನ್ ಉಲ್ಲಂಘಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 51ರಿಂದ 60 ನಡುವಿನ ನಿಯಮಗಳ ಪ್ರಕಾರ ಕೇಸು ದಾಖಲಿಸಬೇಕು. ಜೊತೆಗೆ ಐಪಿಸಿ 188ರ ಅಡಿಯೂ ಕೇಸು ದಾಖಲಿಸಬೇಕು.
ವಿಶ್ವದಲ್ಲಿ 10 ಲಕ್ಷ ಸೋಂಕಿತರು, 50 ಸಾವಿರಕ್ಕೂ ಹೆಚ್ಚು ಸಾವು
ಈ ಎರಡೂ ಕೇಸುಗಳಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಸುಳ್ಳುಸುದ್ದಿ ಹರಡುವವರಿಗೂ 2 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದು’ ಎಂದು ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ನಮೂದಿಸಲಾಗಿದೆ.