ಕೊರೋನಾ ಸಮರಕ್ಕೆ 25 ಕೋಟಿ ರು. ದೇಣಿಗೆ ನೀಡಿದ ಅಕ್ಷಯ್, ಪತ್ನಿಯ ರಿಯಾಕ್ಷನ್ ಹೀಗಿತ್ತು!

By Kannadaprabha NewsFirst Published Mar 29, 2020, 11:34 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್‌ ಘೋಷಣೆ ಮಾಡಿದ ಬೆನ್ನಲ್ಲೇ ನಟ ಅಕ್ಷಯ್ ಬಹುದೊಡ್ಡ ನಿರ್ಧಾರ| ಕೊರೋನಾ ವಿರುದ್ಧದ ದೇಶದ ಯುದ್ಧಕ್ಕೆ ನಟ ಅಕ್ಷಯ್‌ 25 ಕೋಟಿ ರು. ದೇಣಿಗೆ

ಮುಂಬೈ(ಮಾ.29): ಸಾಂಕ್ರಮಿಕ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್‌ ಘೋಷಣೆ ಮಾಡಿದ ಬೆನ್ನಲ್ಲೇ, ಕೊರೋನಾ ವಿರುದ್ಧದ ಈ ಹೋರಾಟಕ್ಕಾಗಿ ನಟ ಅಕ್ಷಯ್‌ ಕುಮಾರ್‌ ಭರ್ಜರಿ 25 ಕೋಟಿ ರು. ದೇಣಿಗೆ ಘೋಷಣೆ ಮಾಡಿದ್ದಾರೆ.

This is that time when all that matters is the lives of our people. And we need to do anything and everything it takes. I pledge to contribute Rs 25 crores from my savings to ji’s PM-CARES Fund. Let’s save lives, Jaan hai toh jahaan hai. 🙏🏻 https://t.co/dKbxiLXFLS

— Akshay Kumar (@akshaykumar)

ಈ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಅಕ್ಷಯ್‌, ‘ಪ್ರಸ್ತುತ ಸಂದರ್ಭದಲ್ಲಿ ಜನರನ್ನು ರಕ್ಷಿಸಿಕೊಳ್ಳುವುದೇ ನಮ್ಮ ಬಹುಮುಖ್ಯ ಕಾರ್ಯವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪಿಎಂ-ಕೇರ್ಸ್‌ ನಿಧಿಗೆ 25 ಕೋಟಿ ರು. ದೇಣಿಗೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

The man makes me proud. When I asked him if he was sure as it was such a massive amount and we needed to liquidate funds, he just said, ‘ I had nothing when I started and now that I am in this position, how can I hold back from doing whatever I can for those who have nothing.’ https://t.co/R9hEin8KF1

— Twinkle Khanna (@mrsfunnybones)

ಇನ್ನು ಈ ಬೆಳವಣಿಗೆ ಕುರಿತು ಅಕ್ಷಯ್‌ ಅವರ ಪತ್ನಿ ಟ್ವಿಂಕಲ್‌ ಖನ್ನಾ, ‘ಈ ಮನುಷ್ಯ ನನ್ನನ್ನು ಹೆಮ್ಮೆಪಡಿಸುತ್ತಾನೆ. ಇಷ್ಟು ದೊಡ್ಡ ಪ್ರಮಾಣದ ಹಣ ದೇಣಿಗೆ ನೀಡುವುದು ಔಚಿತ್ಯವೇ ಎಂದು ನಾನು ಕೇಳಿದೆ. ಈ ವೇಳೆ, ನಾನು ಜೀವನ ಆರಂಭಿಸುವಾಗ ನನ್ನಲ್ಲಿ ಏನೂ ಇರಲಿಲ್ಲ. ಇದೀಗ ಈ ಹಂತಕ್ಕೆ ಬೆಳೆದಿದ್ದೇನೆ. ಇದನ್ನು ನಾನೊಬ್ಬನೇ ಇಟ್ಟುಕೊಳ್ಳುವುದು ಹೇಗೆ? ಇದಕ್ಕಾಗಿ ಏನೂ ಇಲ್ಲದವರಿಗೆ ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದರು’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

click me!