
ನವದೆಹಲಿ(ಮಾ.30): ಕೊರೋನಾ ವೈರಸ್ ಭಾರತಕ್ಕೆ ಅಪಾಯದ ಸೂಚನೆ ನೀಡಿದಾಗಲೇ ಹಿಂದೂ ದೇಗುಲಗಳು ಭಕ್ತರಲ್ಲಿ ಮನವಿ ಮಾಡಿತ್ತು. ಭಕ್ತಾದಿಗಳು ಗಮನಹರಿಸಬೇಕಾಗಿ ಸೂಚಿಸಿತ್ತು. ಸರ್ಕಾರ ದಿಢೀರ್ ಲಾಕ್ಡೌನ್ ಘೋಷಣೆ ಮಾಡಿದಾಗಲೂ ದೇಗಲುಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದೀಗ ಹಿಂದೂ ದೇಗುಲಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದೆ.
ಕೊರೋನಾ ಎದುರಿಸಲು ದೇವಸ್ಥಾನ ಬಳಕೆಗೆ ಮುಂದಾದ ಸರ್ಕಾರ !..
ಈಗಾಗಲೇ ಹಲವು ದೇವಸ್ಥಾನಗಳು ಸರ್ಕಾರದ ಪರಿಹಾರ ನಿಧಿಗೆ ಕೋಟಿ ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಜನರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಇಷ್ಟೇ ಅಲ್ಲ ಆದಷ್ಟೂ ಬೇಗ ಕೊರೋನಾ ವೈರಸ್ ತೊಲಗಿಸಲು ಪಣತೊಟ್ಟಿದೆ. ಹಲವು ದೇವಸ್ಥಾನಗಳು ಸರ್ಕಾರಕ್ಕೆ ದೇಣಿಗೆ, ಸೋಂಕಿತರ ಚಿಕಿತ್ಸೆಗೆ, ಕ್ವಾರಂಟೈನ್ಗೆ ದೇವಸ್ಥಾನಗಳ ವಸತಿ ಗೃಹಗಳನ್ನು, ನಿರ್ಗತಿಕರಿಗೆ, ಬಡವರಿಗೆ ಆಹಾರವನ್ನು ನೀಡುತ್ತಿದೆ.
ಹೀಗೆ ಸರ್ಕಾರಕ್ಕೇ ದೇಣಿಗೆ ನೀಡಿದ ಪ್ರಮುಖ ದೇವಸ್ಥಾನಗಳ ವಿವರ ಇಲ್ಲಿದೆ.
ಇದರ ಜೊತೆಗೆ ಹಲವು ದೇಗುಲಗಳು ಈಗಾಗಲೇ ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ನೀಡಿದೆ.