
ನವದೆಹಲಿ: ನಾವು 22 ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ ಹಾಗೂ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯಷ್ಟೇ ಆಡಳಿತದಲ್ಲಿಲ್ಲ ಎಂದು ವಿಶ್ವದ ಮೂರನೇ ಶ್ರೀಮಂತ ಗೌತಮ್ ಅದಾನಿ ಹೇಳಿದ್ದಾರೆ. ಇಂಡಿಯಾ ಟೀವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅದಾನಿ, ಈ ಮೂಲಕ ತಾವು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ನಿಕಟವಾಗಿರುವ ಮೂಲಕ ಉತ್ತಮ ಬಿಸಿನೆಸ್ ಮಾಡುತ್ತಿದ್ದಾರೆ ಎಂಬ ಟೀಕೆಗೆಗಳನ್ನು ಅಲ್ಲಗಳೆದಿದ್ದಾರೆ.
ಯಾವುದೇ ಸರ್ಕಾರದೊಂದಿಗೂ ನಮಗೆ ಯಾವುದೇ ತೊಂದರೆಯಿಲ್ಲ. ನಾವು ಎಡಪಂಥೀಯ ಆಡಳಿತವಿರುವ ಕೇರಳ, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಅಲ್ಲದೇ ಜಗನ್ಮೋಹನ ರೆಡ್ಡಿ, ಕೆಸಿಆರ್ ಆಡಳಿತ ಇರುವ ರಾಜ್ಯಗಳು ಸೇರಿದಂತೆ ಒಟ್ಟು 22 ರಾಜ್ಯಗಳಲ್ಲಿ ಗರಿಷ್ಠ ಬಂಡವಾಳ ಹೂಡಿಕೆ ಮಾಡಿದ್ದೇವೆ. ಅದಾನಿ ಗ್ರೂಪ್ ಅಲ್ಲೆಲ್ಲ ವ್ಯಾಪಾರ ನಡೆಸುತ್ತಿರುವುದು ನಮಗೆ ಖುಷಿ ಇದೆ ಎಂದಿದ್ದಾರೆ.
Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ
ದೇಶದ ನಂ. 1 ಶ್ರೀಮಂತ ಗೌತಮ್ ಅದಾನಿ ಪತ್ನಿಯ ಲೈಫ್ಸ್ಟೈಲ್ ಹೇಗಿದೆ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.