ಈರುಳ್ಳಿ ಬೆಳೆಗಾರರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!

By Web DeskFirst Published Dec 28, 2018, 10:00 PM IST
Highlights

ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ| ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯ| ಈರುಳ್ಳಿ  ರಫ್ತು ಪ್ರೋತ್ಸಾಹಧನ ದ್ವಿಗುಣಗೊಳಿಸಿದ ಕೇಂದ್ರ| ಶೇ.5 ರ ಬದಲಿಗೆ ಶೇ.10ಕ್ಕೆ ಪ್ರೋತ್ಸಾಹಧನ ಏರಿಕೆ

ನವದೆಹಲಿ(ಡಿ.28): ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ,  ಈರುಳ್ಳಿ  ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ.

ಪ್ರಸ್ತುತ, ಈರುಳ್ಳಿ ವ್ಯಾಪಾರಿಗಳು ಭಾರತದ ವ್ಯಾಪಾರಿಗಳ ರಫ್ತು ಯೋಜನೆಯಡಿಯಲ್ಲಿ ತಾಜಾ ಬೆಳೆಗೆ ಶೇ. 5 ರಫ್ತು ಪ್ರೋತ್ಸಾಹಧನ ಪಡೆಯುತ್ತಿದ್ದಾರೆ.

ಇದೀಗ ರೈತರ ಹಿತಾಸಕ್ತಿಯಿಂದ ಈ ಪ್ರೋತ್ಸಾಹಧನವನ್ನು ಶೇ.10ಕ್ಕೆ ಏರಿಸಲಾಗಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಸಹಾಯ ಮಾಡಲಿದೆ.
 

click me!