ಬೆಂಗಳೂರಿನಿಂದ ಮತ್ತೊಂದು ವಿಶೇಷ ರೈಲು ಸಂಚಾರ ಆರಂಭ

Published : Nov 04, 2019, 08:16 AM IST
ಬೆಂಗಳೂರಿನಿಂದ ಮತ್ತೊಂದು ವಿಶೇಷ ರೈಲು ಸಂಚಾರ ಆರಂಭ

ಸಾರಾಂಶ

ಬೆಂಗಳೂರಿನಿಂದ ವಿಶೇಷ ರೈಲು ಸೇವೆ ಆರಂಭ ಮಾಡಲಾಗಿದೆ. ನವೆಂಬರ್ 1 ರಿಂದಲೇ ರೈಲು ಸಂಚಾರ ಆರಮಭವಾಗಿದ್ದು, ಪ್ರಯಾಣಿಕರು ಅನುಕೂಲ ಪಡೆಯಬಹುದಾಗಿದೆ. 

ಬೆಂಗಳೂರು [ನ.04]: ನೈಋುತ್ಯ ರೈಲ್ವೆಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಹಿಂದೂಪುರಕ್ಕೆ ನ.1ರಿಂದ ಮೆಮು ವಿಶೇಷ ರೈಲು ಸಂಚಾರ ಆರಂಭಿಸಿದೆ.

ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಈ ರೈಲು (ಸಂಖ್ಯೆ 06565/06566) ಸಂಚರಿಸಲಿದೆ. ಪ್ರತಿ ದಿನ ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಹಿಂದೂಪುರ ರೈಲು ನಿಲ್ದಾಣ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಹಿಂದೂಪುರದಿಂದ ಹೊರಟು ಸಂಜೆ 4.10ಕ್ಕೆ ಕೆಎಸ್‌ಆರ್‌ ರೈಲು ನಿಲ್ದಾಣ ತಲುಪಲಿದೆ.

2 ದಶಕಗಳ ಕನಸು ನನಸು: ದಾಂಡೇಲಿ-ಧಾರವಾಡ ನಡುವೆ ಚುಕುಬುಕು ರೈಲು...

ಕಂಟೋನ್ಮೆಂಟ್‌, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ, ವಡ್ಡರಹಳ್ಳಿ, ಮಾಕಳಿದುರ್ಗಾ, ತೊಂಡೆಬಾವಿ, ಸೋಮೇಶ್ವರ, ಗೌರಿಬಿದನೂರು, ವಿದುರಾಶ್ವತ್ಥ, ದೇವರಪಲ್ಲೆ ಮಾರ್ಗದಲ್ಲಿ ಹಿಂದೂಪುರ ತಲುಪಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

PREV
click me!

Recommended Stories

ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ! ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ! ಯಾರನ್ನು ಕೇಳುವುದು?
Naxal: ನಕ್ಸಲ್ಸರಿಗೆ ₹92 ಕೋಟಿ ದೇಣಿಗೆ: ರಾಜ್ಯದ ಈ ನಾಲ್ವರು ಸೇರಿ 7 ಮಂದಿ ವಿರುದ್ಧ FIR!