LPG ಗ್ಯಾಸ್ ಬೆಲೆ ಕಡಿಮೆಯಾದರೂ ಆಹಾರದ ಬೆಲೆ ಇಳಿಸದ ಹೋಟೆಲ್‌ಗಳಿಂದ ಪುನಃ ಟೀ-ಕಾಫಿ ಬೆಲೆ ₹2-3 ಹೆಚ್ಚಳ!

Published : Sep 10, 2026, 08:59 AM IST
Tea Coffee Price hike

ಸಾರಾಂಶ

ರಾಜ್ಯದ ಹೋಟೆಲ್‌ಗಳಲ್ಲಿ ಶೀಘ್ರದಲ್ಲೇ ಕಾಫಿ ಮತ್ತು ಟೀ ದರವನ್ನು ₹2 ರಿಂದ ₹3 ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಸಕ್ಕರೆ, ಹಾಲು ಮತ್ತು ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗಿದ್ದು, ಸಾರ್ವಜನಿಕರು ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ.10): ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಹೋಟೆಲ್ ಮಾಲೀಕರು ಮತ್ತೊಂದು ಆಘಾತ ನೀಡಲು ಸಜ್ಜಾಗಿದ್ದಾರೆ. ಸಕ್ಕರೆ, ಬೆಲ್ಲ, ಹಾಲು ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳದ ನೆಪವೊಡ್ಡಿ, ರಾಜ್ಯದ ಪ್ರಮುಖ ನಗರಗಳ ಹೋಟೆಲ್‌ಗಳು ಹಾಗೂ ದರ್ಶಿನಿಗಳಲ್ಲಿ ಶೀಘ್ರದಲ್ಲೇ ಕಾಫಿ ಮತ್ತು ಟೀ ದರವನ್ನು ಕಪ್‌ಗೆ ₹2 ರಿಂದ ₹3 ವರೆಗೆ ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ.

ಕೇವಲ ಕಾಫಿ, ಟೀ ಮಾತ್ರವಲ್ಲದೆ ಬಾದಾಮಿ ಹಾಲು, ಹಾರ್ಲಿಕ್ಸ್ ಸೇರಿದಂತೆ ಬಿಸಿ ಪಾನೀಯಗಳ ದರದಲ್ಲೂ ಏರಿಕೆಯಾಗಲಿದ್ದು, ಆಯಾ ಪ್ರದೇಶಗಳಿಗೆ (ಏರಿಯಾ) ಅನುಗುಣವಾಗಿ ನೂತನ ದರಗಳು ಜಾರಿಗೆ ಬರಲಿವೆ.

ಪರಿಷ್ಕೃತ ದರಪಟ್ಟಿ ಹೇಗಿರಲಿದೆ?

ಪಾನೀಯ ಹಾಲಿ ದರ (ರೂ.) ಪರಿಷ್ಕೃತ ನೂತನ ದರ (ರೂ.) ಏರಿಕೆಯಾಗುವ ಮೊತ್ತ

ಕಾಫಿ ₹15 – ₹20 ₹17 – ₹22 ₹2 ರಿಂದ ₹3

ಟೀ ₹15 – ₹20 ₹17 – ₹22 ₹2 ರಿಂದ ₹3

ಬಾದಾಮಿ ಹಾಲು ₹20 – ₹25 ₹22 – ₹27 ₹2 ರಿಂದ ₹3

ಹಾರ್ಲಿಕ್ಸ್ ₹20 – ₹30 ₹23 – ₹33 ₹2 ರಿಂದ ₹3

ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ನೀಡುತ್ತಿರುವ ಕಾರಣಗಳೇನು?

  • ಕಳೆದ ತಿಂಗಳು ಸಕ್ಕರೆ ಮತ್ತು ಬೆಲ್ಲದ ದರದಲ್ಲಿ ಗಣನೀಯ ಏರಿಕೆಯಾಗಿದೆ.
  • ಹಾಲಿನ ದರ, ಕಮರ್ಷಿಯಲ್ ಸಿಲಿಂಡರ್ ಬೆಲೆ, ಕಟ್ಟಡದ ಬಾಡಿಗೆ ಹಾಗೂ ಕಾರ್ಮಿಕರ ವೇತನ ಹೆಚ್ಚಳದಿಂದ ನಿರ್ವಹಣಾ ವೆಚ್ಚ ದುಬಾರಿಯಾಗಿದೆ.
  • ಈವರೆಗೆ ನಷ್ಟದಲ್ಲೇ ಹೋಟೆಲ್ ನಡೆಸಲಾಗುತ್ತಿದ್ದು, ಇನ್ನು ಮುಂದೆ ಬೆಲೆ ಏರಿಸದೇ ಬೇರೆ ದಾರಿಯಿಲ್ಲ ಎಂಬುದು ಮಾಲೀಕರ ವಾದ.
  • ಮುಂದಿನ ದಿನಗಳಲ್ಲಿ ಸಿಹಿ ತಿಂಡಿ, ಸಿಹಿ ಅಡುಗೆಗಳ ದರಗಳನ್ನೂ ಹೆಚ್ಚಿಸುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಸಿದ್ದಾರೆ.

‘ಬೆಲೆ ಇಳಿದಾಗ ಏಕೆ ಕಡಿಮೆ ಮಾಡಲ್ಲ?’: ಗ್ರಾಹಕರ ತೀವ್ರ ಆಕ್ರೋಶ

ಹೋಟೆಲ್ ಮಾಲೀಕರ ಈ ದಿಢೀರ್ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕಮರ್ಷಿಯಲ್ ಸಿಲಿಂಡರ್, ಹಾಲು ಅಥವಾ ತರಕಾರಿ ಬೆಲೆ ಸ್ವಲ್ಪ ಜಾಸ್ತಿಯಾದರೂ ಹೋಟೆಲ್‌ನವರು ತಕ್ಷಣವೇ ದರ ಹೆಚ್ಚಿಸುತ್ತಾರೆ. ಆದರೆ, ಅದೇ ಸಿಲಿಂಡರ್ ಅಥವಾ ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆಯಾದಾಗ ಯಾವ ಹೋಟೆಲ್‌ನವರೂ ಬೆಲೆಯನ್ನು ಏಕೆ ಕಡಿಮೆ ಮಾಡುವುದಿಲ್ಲ? ಒಮ್ಮೆ ಹೆಚ್ಚಿಸಿದ ದರವನ್ನು ಶಾಶ್ವತವಾಗಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸರಿ?' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

PREV
Read more Articles on
click me!

Recommended Stories

ಬಿಡಿಎ ಅಕ್ರಮ ಮನೆಗಳು ಸಕ್ರಮ: ಸರ್ಕಾರದ ಶೇ.50 ಶುಲ್ಕ ಕಡಿತ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಅಂಕಿತ!
ಜೈಲಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್‌ಗೆ ಬಂತು ಮತ್ತೊಂದು ಕೋರ್ಟ್‌ ಸಮನ್ಸ್‌, ನಿಂತಲ್ಲೇ ನಡುಗಿದ ದಾಸ