
ಬೆಂಗಳೂರು: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 'ಕಾಕ್ರೋಚ್' (Cockroach) ಪ್ರತಿಭಟನೆಯು ಈಗ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬೆಳವಣಿಗೆಯ ನಡುವೆಯೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಪ್ರತಿಭಟನೆಯನ್ನು 'ಉತ್ತರ ಭಾರತದ ಹಿಂದಿಯನ್ ಮನುವಾದಿಗಳ ಚಳವಳಿ' ಎಂದು ಕರೆದಿರುವ ಅವರು, ಕರ್ನಾಟಕವು ಈ ವಿಚಾರದಲ್ಲಿ ಮುನ್ನಡೆ ವಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸಾ, ಕಾಕ್ರೋಚ್ ಎನ್ನುವುದು ಉತ್ತರ ಭಾರತದ, ಹಿಂದಿಯನ್ ಮನುವಾದಿಗಳ ಚಳವಳಿಯಾಗಿದೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಹಿಂದಿ ಹೇರಿಕೆ ಮತ್ತು ಉತ್ತರ ಭಾರತದ ಮೇಲ್ವರ್ಗದ ಸಿದ್ಧಾಂತಗಳ ಪ್ರಭಾವವಿದೆ ಎಂಬರ್ಥದಲ್ಲಿ ಚೇತನ್ ಮಾತುಗಳನ್ನಾಡಿದ್ದಾರೆ.
ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನು (BIMARU) ಗುರಿಯಾಗಿಸಿಕೊಂಡು ಮಾತನಾಡಿರುವ ಅವರು, ರಾಜ್ಯಗಳ ಹಕ್ಕುಗಳು ಮತ್ತು ನಿಜವಾದ ಒಕ್ಕೂಟ ವ್ಯವಸ್ಥೆಯ ಮುಖಾಂತರ ಪರಿವರ್ತನೆ ಬಯಸುವ ನಾವು, ಬಿಮಾರು ರಾಜ್ಯಗಳ ನಿರಂತರ ದಾಳಿಯನ್ನು ವಿರೋಧಿಸಲೇಬೇಕು ಎಂದು ಕರೆ ನೀಡಿದ್ದಾರೆ. ದಕ್ಷಿಣದ ರಾಜ್ಯಗಳ ಮೇಲೆ ಉತ್ತರ ಭಾರತದ ರಾಜ್ಯಗಳು ತಮ್ಮ ಸಿದ್ಧಾಂತಗಳನ್ನು ಹೇರುತ್ತಿವೆ ಎನ್ನುವುದು ಚೇತನ್ ಅವರ ವಾದವಾಗಿದೆ.
ಭಾರತದ ಸರ್ವಾಂಗೀಣ ಬೆಳವಣಿಗೆಗೆ ಯಾವ ಸಿದ್ಧಾಂತ ಪೂರಕ ಎಂಬ ಬಗ್ಗೆಯೂ ಚೇತನ್ ಬೆಳಕು ಚೆಲ್ಲಿದ್ದಾರೆ. ಭಾರತದ ಬೆಳವಣಿಗೆಗೆ ದ್ರಾವಿಡ-ಸಮಾನತಾವಾದ ಸಿದ್ಧಾಂತದ ಮೂಲಕವೇ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದ್ರಾವಿಡ ಸಂಸ್ಕೃತಿ ಮತ್ತು ಸಮಾನತೆಯ ತತ್ವಗಳು ದೇಶದ ಪ್ರಗತಿಗೆ ಅಡಿಪಾಯವಾಗಬೇಕು ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಮತ್ತು ಕ್ರಾಂತಿಗಳ ಕೇಂದ್ರಬಿಂದು ದೆಹಲಿಯಾಗಬಾರದು ಎಂದು ಹೇಳಿರುವ ಚೇತನ್, ನ್ಯಾಯ ಮತ್ತು ಸಂವಿಧಾನಕ್ಕಾಗಿ ನಡೆಯುವ ಕ್ರಾಂತಿಯನ್ನು ದೆಹಲಿಯಲ್ಲ, ಕರ್ನಾಟಕವೇ ಮುನ್ನಡೆ ವಹಿಸಬೇಕು ಎಂದು ಹೇಳುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕವು ದೇಶಕ್ಕೆ ಮಾದರಿಯಾಗಬೇಕು ಎಂಬುದು ಅವರ ಆಶಯವಾಗಿದೆ.
Cockroach is a hegemonic movement of North Hindian Manuvadis
We who advocate transformation via states’ rights & federalism must oppose continued BIMARU dominance
India can only grow via our Dravidian-Equalitarianism…
KA— not Delhi— must lead such a revolution for our JUSTICE— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) July 23, 2026