
ದೊಡ್ಡಬಳ್ಳಾಪುರ [ಅ.23]: ವೃದ್ಧರೋರ್ವರು ತಮ್ಮ ಚಿತೆಯನ್ನು ತಾವೇ ಸಿದ್ಧ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಗನ ಅಕಾಲಿಕ ಮರಣದಿಂದ ಮನನೊಂದ ದೊಡ್ಡಬಳ್ಳಾಪುರದ ತಿಪ್ಪೂರು ಗ್ರಾಮದ ಅಜ್ಜಪ್ಪ ಎಂಬ 80 ವರ್ಷದ ವೃದ್ಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಆರು ತಿಂಗಳ ಹಿಂದೆ ಅಜ್ಜಪ್ಪ ಅವರ ಪುತ್ರ ಸಿದ್ದಪ್ಪ [54] ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗನ ಸಾವಿನಿಂದ ಮನನೊಂದು ಸಾಕಷ್ಟು ಹತಾಶೆಗೆ ಒಳಗಾಗಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಭಾನುವಾರ ಕಾಡಿಗೆ ತೆರಳಿದ ವೃದ್ಧ ಅಜ್ಜಪ್ಪ ಎರಡು ಮರಗಳ ನಡುವೆ ಚಿತೆ ಸಿದ್ಧಮಾಡಿಕೊಂಡು ಮರಕ್ಕೆ ತಮ್ಮ ದೇವನ್ನು ಬಿಗಿದುಕೊಂಡು ಜೀವಂತವಾಗಿ ಚಿತೆಗೆ ಏರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.