ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

By Web DeskFirst Published Sep 8, 2019, 8:15 PM IST
Highlights

ದೇಶದೆಲ್ಲೆಡೆ ನೂತನ ಟ್ರಾಫಿಕ್ ನಿಯಮ ಜಾರಿಯಾಗಿದೆ. ಟ್ರಾಫಿಕ್ ನಿಯಮ ಹಾಗೂ ದಂಡದ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗೆ ಜಾಗೃತಿ ಮೂಡಿಸುತ್ತಿದ್ದ MLAಗೆ ದಂಡ ಹಾಕಲಾಗಿದೆ.

ಭುಬನೇಶ್ವರ್(ಸೆ.08): ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದ್ದು, ಪೊಲೀಸರು ದುಬಾರಿ ದಂಡದ ಜೊತೆಗೆ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಇದೇ ರೀತಿ ಹೊಸ ಟ್ರಾಫಿಕ್ ನಿಯಮ ರೂಲ್ಸ್  ಕುರಿತು ಜಾಗೃತಿ ಮೂಡಿಸಲು ಆಗಮಿಸಿದ MLAಗೆ ದಂಡ ಹಾಕಲಾಗಿದೆ. ಈ ಪ್ರಕರಣ ಇದೀಗ ಇಡೀ ದೇಶದ ಗಮನಸೆಳೆದಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್ ಜಾರಿ; 51 ಪೊಲೀಸರಿಂದ ನಿಯಮ ಉಲ್ಲಂಘನೆ!

ಒಡಿಶಾ ಭುಬನೇಶ್ವರದಲ್ಲಿ ಪೊಲೀಸ್ ಕಮಿಶನರ್ ನೂತನ ಟ್ರಾಫಿಕ್ ನಿಯಮದ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬಿಜೆಡಿ ಶಾಸಕ ಅನಂತ್ ನಾರಾಯಣ ಜೇನ ಅವರನ್ನೂ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೂ ಪೊಲೀಸರು ದಂಡ  ಹಾಕಿದ್ದಾರೆ. ಕಾರಣ ನೋ ಪಾರ್ಕಿಂಗ್ ಏರಿಯಾದಲ್ಲಿ ಅನಂತ್ ನಾರಾಯಣ ಕಾರು ನಿಲ್ಲಿಸಲಾಗಿತ್ತು.. 

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಅನಂತ ನಾರಾಯಣ ಕಾರು ಡ್ರೈವರ್ ಕಾರನ್ನು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ಹೀಗಾಗಿ ಪೊಲೀಸರು MLA ಕಾರಿಗೆ ದಂಡ ಹಾಕಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಂತ ನಾರಾಯಣ, ನಿಯಮ ಎಲ್ಲರಿಗೂ ಒಂದೇ. ನನ್ನ ಕಾರಿಗೆ ದಂಡ ಹಾಕಲಾಗಿದೆ. ಡ್ರೈವರ್ ತಿಳಿಯದೇ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ನೋ ಪಾರ್ಕಿಂಗ್‌ಗಾಗಿ 500 ರೂಪಾಯಿ ದಂಡ ಕಟ್ಟಿದ್ದೇನೆ ಎಂದಿದ್ದಾರೆ.
 

click me!