
ಬೆಂಗಳೂರು: ಶ್ರೀಕೃಷ್ಣನ ಜನ್ಮದಿನ ಅಂದರೆ ಜನ್ಮಾಷ್ಟಮಿಯನ್ನು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. 2026ರಲ್ಲಿ ಸೆಪ್ಟೆಂಬರ್ 4 ರಂದು ಜನ್ಮಾಷ್ಟಮಿ ಬಂದಿದೆ. ಹಬ್ಬದ ದಿನದಂದು ದೇವಸ್ಥಾನಗಳಿಗೆ ಹೋಗಲು ಅಥವಾ ಮೆರವಣಿಗೆ ನೋಡಲು ನೀವು ಪ್ಲಾನ್ ಮಾಡಿದ್ದರೆ, ಮೊದಲು ನಿಮ್ಮ ನಗರದ ಹವಾಮಾನ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಉತ್ತರ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ 4, 2026 ರಂದು ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಇರಲಿದೆ. ಅಂದು ರೋಹಿಣಿ ನಕ್ಷತ್ರದ ಸಂಯೋಗವೂ ಇರುವುದರಿಂದ ಇದು ಕೃಷ್ಣನ ಜನ್ಮದಿನದ ವಿಶೇಷ ಮುಹೂರ್ತವಾಗಿದೆ. ಅಷ್ಟಮಿ ತಿಥಿ ಆರಂಭವು ಸೆಪ್ಟೆಂಬರ್ 4 ರಂದು ಬೆಳಗಿನ ಜಾವ 2:25ಕ್ಕೆ ಆಗಲಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 4 ರ ಬೆಳಗಿನ ಜಾವ 12:29 ರಿಂದ ರಾತ್ರಿ 11:04 ರವರೆಗೆ ಇರಲಿದೆ.
ಅಂದರೆ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 4 ರಂದು ಚಂದ್ರನು ವೃಷಭ ರಾಶಿಯಲ್ಲಿ ಮತ್ತು ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ಚಂದ್ರನು ಜಲತತ್ವದ ಕಾರಕನಾಗಿದ್ದು, ರೋಹಿಣಿ ನಕ್ಷತ್ರದಲ್ಲಿ ಚಂದ್ರ ಬಲಶಾಲಿಯಾಗಿರುವುದರಿಂದ ಇದು ಮಳೆಯ ಮುನ್ಸೂಚನೆಯನ್ನು ನೀಡುತ್ತಿದೆ. ಜೊತೆಗೆ ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಮೀನ ರಾಶಿಯಲ್ಲಿ ಶನಿ ಇರುವುದರಿಂದ ಜಲರಾಶಿಗಳ ಪ್ರಭಾವದಿಂದಾಗಿ ಮಳೆ ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಹವಾಮಾನ ಇಲಾಖೆಯ ಪ್ರಕಾರ.. ಸೆಪ್ಟೆಂಬರ್ 3 ರಿಂದ 5 ರ ನಡುವೆ ಈ ಕೆಳಗಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು. ಮಧ್ಯಪ್ರದೇಶದಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ-NCR, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಬಹುದು. ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.
ನೀವು ದೇವಸ್ಥಾನಗಳಿಗೆ ಅಥವಾ ದಹಿ-ಹಂಡಿ ಕಾರ್ಯಕ್ರಮಗಳಿಗೆ ಹೋಗುವುದಾದರೆ ಮಳೆಯಿಂದ ರಕ್ಷಿಸಿಕೊಳ್ಳಲು ಸಿದ್ಧರಾಗಿರಿ. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಬಹುದು, ಸ್ವಲ್ಪ ಬೇಗನೆ ಮನೆಯಿಂದ ಹೊರಡುವುದು ಉತ್ತಮ. ಮಳೆ ಮತ್ತು ಗುಡುಗು ಇರುವಾಗ ವಿದ್ಯುತ್ ಕಂಬಗಳು ಅಥವಾ ಮರಗಳ ಕೆಳಗೆ ನಿಲ್ಲಬೇಡಿ. ಮನೆಯಿಂದ ಹೊರಡುವ ಮುನ್ನ ನಿಮ್ಮ ನಗರದ ಲೇಟೆಸ್ಟ್ ಹವಾಮಾನ ವರದಿಯನ್ನು ಒಮ್ಮೆ ಪರಿಶೀಲಿಸಿ. ಒಟ್ಟಾರೆಯಾಗಿ, 2026ರ ಜನ್ಮಾಷ್ಟಮಿಯಂದು ಭಕ್ತರು ಕೃಷ್ಣನ ಭಕ್ತಿಯ ಜೊತೆಗೆ ಮಳೆರಾಯನ ಸ್ವಾಗತಕ್ಕೂ ಸಿದ್ಧರಾಗಬೇಕಿದೆ.