ಸಾಡೇಸಾತಿ ಶನಿ ಬಂದ್ರೆ ಕಾರಣವೇ ಇಲ್ಲದೆ ಪ್ರೀತಿಸಿದೋರು ದೂರ ದೂರ! ಆಗ ಏನು ಮಾಡಬೇಕು?

Published : Apr 01, 2025, 04:56 PM ISTUpdated : Apr 01, 2025, 05:25 PM IST
ಸಾಡೇಸಾತಿ ಶನಿ ಬಂದ್ರೆ ಕಾರಣವೇ ಇಲ್ಲದೆ ಪ್ರೀತಿಸಿದೋರು ದೂರ ದೂರ! ಆಗ ಏನು ಮಾಡಬೇಕು?

ಸಾರಾಂಶ

ಸಾಡೇಸಾತಿ ಶನಿ ಪ್ರೀತಿಸುವವರನ್ನು ದೂರ ಮಾಡತ್ತೆ. ಆಗ ಏನು ಮಾಡಬೇಕು? 

ಸಾಡೇಸಾತಿ ಎನ್ನೋದು ಎಂಥವನನ್ನೂ ಒಮ್ಮೆ ನಡುಗಿಸುತ್ತದೆ ಅಂತ ಹೇಳ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಶನಿ ನಮ್ಮ ಜನ್ಮ ರಾಶಿಗೆ ಬರುತ್ತಾನೆ. ಇದರಲ್ಲಿ ಸಾಕಷ್ಟು ವಿಧಗಳಿವೆ. ಪಂಚಮ ಶನಿ, ಅಷ್ಟಮ ಶನಿ ಎಂದು ಹೇಳುತ್ತಾರೆ. ಸಾಡೇಸಾತಿ ಎಂದರೆ ಜನ್ಮ ರಾಶಿಯಲ್ಲಿ ಏಳೂವರೆ ವರ್ಷಗಳ ಕಾಲ ಶನಿ ಇರುತ್ತಾನೆ. ಈ ಟೈಮ್‌ನಲ್ಲಿ ಶನಿ ಸಿಕ್ಕಾಪಟ್ಟೆ ಪಾಠ ಕಲಿಸುತ್ತಾನೆ ಎನ್ನುತ್ತಾರೆ. ಆಚಾರ್ಯ ಅರುಣ್‌ ಪ್ರಕಾಶ್‌ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

2036 ರ ವರೆಗೆ ಶನಿ ಸಾಡೇಸಾತಿ ಯಾವ ರಾಶಿಯ ಮೇಲಿದೆ, ಯಾವ ರಾಶಿಗೆ ಶನಿ ಆಶೀರ್ವಾದ ಇದೆ

ಪ್ರೀತಿಸಿದವರನ್ನೇ ದೂರ ಮಾಡ್ತಾನೆ! 
"ಸಾಧ್ಯ ಆದಷ್ಟು ಸಂದೇಹ ಪಡದೆ, ಅರ್ಥಮಾಡಿಕೊಳ್ಳದೆ ದೂರ ಆಗ್ತಾರೆ. ನಮಗೆ ಹತ್ತಿರ ಆದವರನ್ನು ಕಳೆದುಕೊಂಡಿರುತ್ತೇವೆ. ಹಿಂದೆ ತಿರುಗಿ ನೋಡಿದಾಗ ಅದರ ಹಿಂದೆ ದೊಡ್ಡ ಘಟನೆ ಆಗಿರೋದಿಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳೋದಿಕ್ಕೆ ಇಗೋವನ್ನು ಬದಿಗಿಟ್ಟು ಬದುಕಬೇಕು. ಸರಿಯಾದ ವಿಷಯಗಳನ್ನು ಉಳಿಸಿಕೊಳ್ಳಲು ನಾವೇ ಸರಿ ಎನ್ನೋದನ್ನು ಬಿಟ್ಟು ಬದುಕಬೇಕು. ಯಾರಿಗೆ ಜಾಸ್ತಿ ಇಗೋ ಇರುತ್ತದೆಯೋ ಅಂಥವರಿಗೆ ಸಂಬಂಧಗಳನ್ನು, ಸಂಪತ್ತನ್ನು ದೂರ ಮಾಡಿ, ಹೊಡೆದು ಬಡೆದು ಹೇಳಿಕೊಟ್ಟು ಶನಿ ಹೋಗ್ತಾನೆ. ಆದರೆ ಆಗ ಸಮಯ ಮೀರಿರುತ್ತದೆ. ಕ್ಷುಲ್ಲಕ ಕಾರಣಕ್ಕೆ ನಾವು ದೂರ ಹೋದರೂ ಕೂಡ ಮತ್ತೆ ಒಂದಾಗದೆ ಇರೋವಷ್ಟರ ಮಟ್ಟಿಗೆ ದೂರ ಹೋಗಿರುತ್ತೇವೆ" ಎಂದು ಅರುಣ್‌ ಪ್ರಕಾಶ್‌ ಹೇಳಿದ್ದಾರೆ. 

ಸಂಬಂಧದ ವಿಷಯದಲ್ಲಿ ಒಬ್ಬರಿಗೆ ಇನ್ನೊಬ್ಬರು ಅರ್ಥ ಆಗೋದಿಕ್ಕೆ ತಿಕ್ಕಾಟಗಳು ಅಗತ್ಯವಿದೆ. ಚಿನ್ನ ಎಷ್ಟು ಕುದಿಯುತ್ತದೆಯೋ ಅಷ್ಟು ಗಟ್ಟಿ ಆಗುವುದು. ಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಇರುವವರು ಮಾತ್ರ ಮುಂದೆ ಹೋಗುತ್ತಾರೆ. 

ಶನಿ ಮೀನ ರಾಶಿಯಲ್ಲಿ, ಮಾರ್ಚ್ 29ರಿಂದ ಈ ರಾಶಿಗೆ ಅದೃಷ್ಟ, ಈ ರಾಶಿಗೆ ಶನಿ ಸಾಡೇಸಾತಿ ಆರಂಭ

ಏನು ಮಾಡಬೇಕು? 

  • ಸಾಧನಾ ದೀಕ್ಷೆ ತೆಗೆದುಕೊಂಡು ಸೂರ್ಯ ಉದಯಕ್ಕಿಂತ ಮುಂಚೆ ಏಳಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಂತ್ರ ಹೇಳಿ. 
  • ಹನುಮಂತನ ಉಪಾಸನೆ ಮಾಡಿ. ಹನುಮಾನ್‌ ಚಾಲೀಸ ಓದುವುದು ತುಂಬ ಉಪಕಾರಿ.
  • ಶನೈಶ್ಚರಕೃತ ನರಸಿಂಹ ಸ್ತುತಿ. ಸುಂದರಕಾಂಡ, ಭಾಗವತದ ಪ್ರವಚನ ಕೇಳೋದರಿಂದ ಓದೋದರಿಂದ ಬಹುತೇಕ ಸಮಸ್ಯೆಗಳು ಚಿಕ್ಕದಾಗಿ ಹೋಗತ್ತೆ.
  • ವಾರಕ್ಕೆ ಒಮ್ಮೆ ಹನುಮಾನ್‌ ದೇವಸ್ಥಾನಕ್ಕೆ ಹೋಗಿ
  • ಕುಲದೇವತೆ, ಗ್ರಾಮದೇವತೆಯ ಮೊರೆ ಹೋಗಿ
  • ವಿನಮ್ರವಾಗಿ ಬದುಕುವುದು
  • ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ
  • ಶೌಚಾಲಯ ಕ್ಲೀನ್‌ ಮಾಡಿ, ಹಿರಿಯ ಪಾದ ಸೇವೆ ಮಾಡಿ
  • ಮಠ, ದೇವಸ್ಥಾನಗಳಲ್ಲಿ ಸೇವಾ ಕಾರ್ಯ ಮಾಡಿ
  • ಪಾಂಡಿಚೇರಿಯಲ್ಲಿ ನಳತೀರ್ಥದಲ್ಲಿ ಸ್ನಾನ ಮಾಡಿ, ದರ್ಭಾ ಅರಣ್ಯೇಶ್ವರ ದೇವಸ್ಥಾನದಲ್ಲಿ ಉಳಿದುಕೊಂಡು ದೇವರ ದರ್ಶನ ಮಾಡಿ. ಇದರಿಂದ ಸಾಕಷ್ಟು ಸಮಸ್ಯೆಗಳು ಬಹುತೇಕವಾಗಿ ಚಿಕ್ಕದಾಗಿ ಬಂದು ಹೋಗುತ್ತವೆ. 

 

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 7 ಅಪರೂಪದ ಚತುರ್ಗ್ರಹಿ ಯೋಗ, ಐದು ರಾಶಿಗೆ ಅದೃಷ್ಟ, ಹೆಚ್ಚಿನ ಲಾಭ
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ