ಈ ವಾರ ನಿಮ್ಮ ಭವಿಷ್ಯ ಹೇಗಿದೆ, ಯಾರಿಗೆ ಯಾವ ಫಲ..?

By Web DeskFirst Published Sep 16, 2018, 7:13 AM IST
Highlights

ಈ ವಾರ ನಿಮ್ಮ ಭವಿಷ್ಯ ಹೇಗಿದೆ, ಯಾರಿಗೆ ಯಾವ ಫಲ..?

ಮೇಷ

ಮಕ್ಕಳ ಉತ್ಸಾಹ ಹಿಮ್ಮಡಿಗೊಳ್ಳಿದೆ. ಆದಾಯದಲ್ಲಿ
ಕೊಂಚ ಏರಿಕೆ. ಜಮೀನು ಕೊಳ್ಳುವ ಯೋಚನೆಯನ್ನು
ಮುಂದೂಡುವುದು ಒಳಿತು. ವಿದ್ಯುತ್
ಉಪಕರಣಗಳಿಂದ ತೊಂದರೆಯಾಗುವ ಸಾಧ್ಯತೆ. ಮನೆಯಲ್ಲಿ
ಸಂತೋಷ ಇರಲಿದೆ. ನಾಲ್ಕು ಜನರಿಗೆ ಉಪಯೋಗವಾಗುಂತಹ
ಕಾರ್ಯ ಮಾಡುವಿರಿ. ವೃತ್ತಿಯಲ್ಲಿ ಹೆಚ್ಚು ಪರಿಣತಿ ಸಾಧಿಸುವಿರಿ. 

ವೃಷಭ

ಣ್ಣಿನ ಆರೋಗ್ಯದಲ್ಲಿ ಸುಧಾರಣೆ. ಹೊಸ ವ್ಯಕ್ತಿಗಳ
ಪರಿಚಯದಿಂದ ನೂತನ ಅವಕಾಶಗಳ ಬಾಗಿಲು
ತೆರೆಯಲಿದೆ. ಕುಂಟುಂಬದೊಂದಿಗೆ ಪ್ರವಾಸ ಮಾಡುವ
ಭಾಗ್ಯವಿದೆ. ಯಾವುದೇ ನಿರ್ಧಾರಕ್ಕೆ ಬರುವುದಾದರೂ
ಹಿರಿಯರೊಂದಿಗೆ ಚರ್ಚಿಸಿ. ಆದಾಯದಲ್ಲಿ ಏರಿಕೆ. ಹೆಚ್ಚು ನಿದ್ದೆ
ಮಾಡುವ ಅಭ್ಯಾಸದಿಂದ ಹೊರಗೆ ಬನ್ನಿ.

ಮಿಥುನ

ಲೋಕ ನಿಂದನೆಗೆ ಹೆಚ್ಚು ಗಮನ ನೀಡುವುದು
ಬೇಡ. ಅಸಮಾನ್ಯ ವ್ಯಕ್ತಿಗಳ ಭೇಟಿ. ನಿರಂತರ
ಅಧ್ಯಯನದಲ್ಲಿ ತೊಡಗಿಕೊಳ್ಳುವಿರಿ. ದಾಂಪತ್ಯದಲ್ಲಿ
ಸುಖ. ಮನೆಯಲ್ಲಿ ಶುಭಕಾರ್ಯಗಳು ನೆರವೇರಲಿವೆ.
ತಂದೆ-ತಾಯಿಗಳ ಬೆಂಬಲದಿಂದ ನೂತನ ಉದ್ಯಮವನ್ನು
ಆರಂಭಮಾಡುವಿರಿ. ಸ್ನೇಹಿತರೊಂದಿಗೆ ವ್ಯವಹಾರ ಬೇಡ. 

ಕಟಕ

ದೀರ್ಘ ಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.
ಭೂ ವ್ಯಾಜ್ಯಗಳಲ್ಲಿ ಜಯವಾಗಲಿದೆ. ಬರಹ
ಗಾರರಿಗೆ ಮೆಚ್ಚುಗೆಗಳ ಮಹಾಪೂರ. ಹೊಸ ಕಾರು
ಕೊಳ್ಳುವ ಯೋಗವಿದೆ. ಕಚೇರಿಯಲ್ಲಿ ಉಲ್ಲಾಸ. ಮಾಡುವ
ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ದಾಖಲಾಗಲಿದೆ. ಕಲಾವಿದರಿಗೆ
ಅವಕಾಶ. ಚಿನ್ನಾಭರಣ ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ. 

ಸಿಂಹ

ಹೊಸ ವಸ್ತುಗಳನ್ನು ಕೊಳ್ಳುವಾಗ ಅಗತ್ಯ ಪರಿಶೀಲನೆ
ನಡೆಸಿ. ದೂರದ ಸಂಬಂಧಿಗಳ ಜೊತೆಗೆ ದೊಡ್ಡ
ಮಟ್ಟದ ವ್ಯವಹಾರ ಏರ್ಪಡಲಿದೆ. ಸಂಬಂಧಗಳ
ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಸೂಕ್ಷ್ಮ ವಿಚಾರಗಳ ಬಗ್ಗೆ ಮೊಂಡು
ತನದಿಂದ ವರ್ತಿಸುವುದು ಬೇಡ. ಕಾಯಕದಲ್ಲಿ ಆಸಕ್ತಿ ಕಡಿಮೆ
ಮಾಡಿಕೊಳ್ಳಬೇಡಿ. ದೀರ್ಘ ಕಾಲದ ವ್ಯಾಧಿಯಿಂದ ಮುಕ್ತಿ. 

ಕನ್ಯಾ

ಬಾಲ ಪ್ರತಿಭೆಗಳಿಗೆ ದೊಡ್ಡ ಮಟ್ಟದಲ್ಲಿ ಅವಕಾಶಗಳು
ಒದಗಿಬರಲಿವೆ. ಅನಿರೀಕ್ಷಿತವಾಗಿ ಬರುವ
ಘಟನೆಗಳನ್ನು ಸಮರ್ಥವಾಗಿ ನಿಭಾಯಿಸುವಿರಿ.
ಬ್ಯಾಂಕ್ ವಹಿವಾಟುಗಳಲ್ಲಿ ಜಾಗೃತೆ ಅಗತ್ಯ. ತೆರಿಗೆ ಪಾವತಿ
ಯಲ್ಲಿ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು
ಮುಂದುವರೆಯಿರಿ. ಆರೋಗ್ಯದಲ್ಲಿ ವೃದ್ಧಿ. 

ತುಲಾ

ಚಿತ್ರಕಲಾವಿದರಿಗೆ ಜೀವಮಾನದಲ್ಲಿಯೇ ದೊಡ್ಡ
ಗೌರವ ದೊರೆಯಲಿದೆ. ಹಿಡಿದ ಕೆಲಸವನ್ನು ಛಲ
ಬಿಡದೇ ಮುಗಿಸುವಿರಿ. ವೈದ್ಯರಿಗೆ ಕೆಲಸದ ಒತ್ತಡ
ಹೆಚ್ಚು. ಸರಕಾರದಿಂದ ಬರಬೇಕಾದ ಅನುದಾನಗಳು ಬರಲಿವೆ.
ರಾಜಕಾರಣಿಗಳಿಗೆ ಪೂರ್ಣ ಪ್ರಮಾಣದ ಬೆಂಬಲ ಸಿಗಲಿದೆ.
ಹಿಂದಿನ ಆರ್ಥಿಕ ನಷ್ಟಗಳಿಂದ ಹೊರಗೆ ಬರುವಿರಿ. 

ವೃಶ್ಚಿಕ

ತಿರುಗಾಟದಲ್ಲಿ ಆಸಕ್ತಿ ಹೆಚ್ಚಲಿದೆ. ಹಿರಿಯರಿಂದ
ಗೌರವ ಪ್ರಶಂಸೆ. ತಂದೆ, ತಾಯಿ ಜೊತೆಗೆ ಸಂತೋಷ
ಹಂಚಿಕೊಳ್ಳುವಿರಿ. ಒಡಹುಟ್ಟಿದವರ ಕಷ್ಟಕ್ಕೆ ಸ್ಪಂದನೆ.
ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ.
ಕಾಟಾಚಾರಕ್ಕೆ ಕೆಲಸ ಮಾಡುವ ಪ್ರವೃತ್ತಿ ಕಡಿಮೆ ಮಾಡಿಕೊಳ್ಳು
ವುದು ಉತ್ತಮ. ವಾರಾಂತ್ಯದಲ್ಲಿ ಆರೋಗ್ಯದಲ್ಲಿ ಏರುಪೇರು. 

ಧನಸ್ಸು

ಸರಕಾರಿ ನೌಕರರಿಗೆ ಕೆಲಸದಲ್ಲಿ ಒತ್ತಡ. ಸ್ನೇಹಿತರ
ಮೇಲೆ ನಂಬಿಕೆ ಹೆಚ್ಚಾಗಲಿದೆ. ಸಾಫ್ಟ್‌ವೇರ್
ಕ್ಷೇತ್ರದಲ್ಲಿ ದುಡಿಯುವವರ ಪಾಲಿಗೆ ಶುಭ ಫಲ.
ರೈತರಿಗೆ ಒಳ್ಳೆಯ ಫಲ ದೊರೆಯಲಿದೆ. ಸಂಗೀತಗಾರರಿಗೆ ಹೆಚ್ಚಿನ
ಅವಕಾಶಗಳು ಬಾಗಿಲು ತೆರೆಯಲಿವೆ.

ಮಕರ

ಶುಭ ಕಾರ್ಯಗಳು ಮುಂದೂಡಲ್ಪಡುತ್ತವೆ.
ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ವಾಹನ
ಚಾಲಕರಿಗೆ ಹೆಚ್ಚಿನ ಕೆಲಸದ ಅವಕಾಶಗಳು
ದೊರೆಯ ಲಿವೆ. ಅಂದುಕೊಂಡು ಕೆಲಸಗಳಲ್ಲಿ ಸಮಾಧಾರನಕರ
ಯಶಸ್ಸು. ಎರಡು ದೋಣಿಯ ಮೇಲಿನ ಪ್ರಯಾಣ ಬೇಡ.

ಕುಂಭ

ಪತ್ರಕರ್ತರಿಗೆ ಕಠಿಣ ದಿನಗಳು. ಆತ್ಮೀಯ ಗೆಳೆಯರ
ಕಷ್ಟಕ್ಕೆ ನೆರ ವಾಗುವಿರಿ. ಆಹಾರ ಸೇವನೆಯಲ್ಲಿ ಮಿತಿ
ಕಾಯ್ದುಕೊಳ್ಳಿ. ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ
ಅನಿರೀಕ್ಷಿತವಾಗಿ ಒದಗಲಿದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು
ಹೆಚ್ಚಾಗಲಿವೆ. ವರಮಾನದಲ್ಲಿ ಏರಿಕೆ. ಛಾಯಾಚಿತ್ರಗಾಹಕರಿಗೆ
ಲಾಭದ ದಿನಗಳಿವು. ಪುಸ್ತಕ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮೀನ

ವೈಚಾರಿಕ ಚಿಂತನೆಗಳು ಹೆಚ್ಚಾಗಲಿವೆ. ಅಂದುಕೊಂಡ
ಕಾರ್ಯಕ್ಕೆ ನೂರಾರು ವಿಘ್ನಗಳು ಎದುರಾಗಲಿವೆ.
ದಾಪಂತ್ಯದಲಿ ಕಲಹ ಅಂತ್ಯವಾಗಲಿದೆ.
ಆರ್ಥಿಕವಾಗಿ ಲಾಭದಾಯಕ ದಿನಗಳ ಆರಂಭ. ಸಣ್ಣ
ವ್ಯಾಪಾರಿಗಳು ಬಂಡವಾಳ ಹೂಡಿಕೆಗೆ ಮುಂದಾ ಗುವಿರಿ. 

click me!