By Web DeskFirst Published Sep 22, 2018, 3:57 PM IST
Highlights
ಭಾರತೀಯ ವಾಸ್ತು ವಿಜ್ಞಾನದಲ್ಲಿ ಹೇಳಿದ ಕೆಲವು ಸರಳ ಟಿಪ್ಸ್ ಇಲ್ಲಿವೆ.
ಮುಖ್ಯ ದ್ವಾರದ ಮೇಲೆ ನೇಮ್ ಪ್ಲೇಟ್ ಇರಲಿ. ಇದರಿಂದ ನಿಮ್ಮನ್ನು ಹುಡುಕಿಕೊಂಡು ಬಂದವರಿಗೆ ಗೊತ್ತಾಗುತ್ತದೆ.
ಬೆಂಕಿಗೆ ನೆಗಟಿವ್ ಎನರ್ಜಿಯನ್ನು ಓಡಿಸುವ ಶಕ್ತಿ ಇದೆ. ಅದಕ್ಕಾಗಿಯೇ ಸದಾ ಹಣತೆಯಲ್ಲಿ ದೀಪ ಉರಿಯುತ್ತಿರಲಿ. ಬೆಳಗ್ಗೆ ಮತ್ತು ಸಂಜೆ ಊದುಬತ್ತಿಗಳನ್ನು ಹಚ್ಚಿಡಿ.
ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯಿದ್ದರೆ ಒಳ್ಳೆಯದು. ಅಕಸ್ಮಾತ್ ಅದಾಗಲಿಲ್ಲವೆಂದರೆ ಒಲೆಯಾದರೂ ಆ ದಿಕ್ಕಿನಲ್ಲಿಡಿ.
ಗಾಜಿನ ಲೋಟದಲ್ಲಿ ನೀರು, ಲಿಂಬೆ ಹಣ್ಣಿಡಿ. ಅದನ್ನು ಪ್ರತಿ ಶನಿವಾರವೂ ಬದಲಾಯಿಸಿ. ಇದು ಋಣಾತ್ಮಕ ಶಕ್ತಿಯನ್ನು ಓಡಿಸುತ್ತದೆ.
ಅಡುಗೆ ಮನೆಯಲ್ಲಿ ಔಷಧಿಗಳನ್ನಿಡಬಾರದು. ಇದು ನೆಗಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ.
ದಿನಕ್ಕೊಮ್ಮೆ ಧ್ಯಾನ ಮಾಡಿ, ಮನೆಯ ಸುತ್ತವೇ ಪಾಸಿಟಿವ್ ಶಕ್ತಿಯೊಂದನ್ನು ಸೃಷ್ಟಿಸುವ ಶಕ್ತಿಯಿದೆ.
ಮಲಗುವ ಕೊಠಡಿಯಲ್ಲಿ ಕನ್ನಡಿ ಇರದಿದ್ದರೆ ಒಳ್ಳೆಯದು. ಅಕಸ್ಮಾತ್ ಇರಬೇಕೆಂದರೆ ಮಲಗುವಾಗ ಅದನ್ನು ಮುಚ್ಚಿಡಿ. ಅದರ ಪ್ರತಿಫಲನದಿಂದ ಆರೋಗ್ಯ ಕೆಡಬಹುದು ಅಥವಾ ಸಂಸಾರದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ.
ಮುಚ್ಚಿಗೆ(ಮೇಲ್ ಮಾಹಡಿ) ಇರುವ ಕತ್ತಲ ಜಾಗದಲ್ಲಿ ತೀರ್ಥವನ್ನಿಡಿ. ಅದನ್ನು ವಾರಕ್ಕೊಮ್ಮೆ ಬದಲಾಯಿಸಿ.
ಮನೆಯ ಬಾಗಿಲಲ್ಲಿ ಸ್ವಸ್ತಿಕ್ ಹಾಗೂ ಓಂಕಾರದ ಚಿಹ್ನೆ ಇರಲಿ.
ಮನೆಯನ್ನು ಪ್ರವೇಶಿಸುವ ಜಾಗದಲ್ಲಿ ಲೋಹದ ಗಂಟೆ ನೇತುಹಾಕಿ. ಗಾಳಿಗೆ ಇದು ಹೊಡೆದು ಕೊಂಡು ಶಬ್ದ ಸೃಷ್ಟಿಯಾದಾಗ ಮನೆಯನ್ನು ಪ್ರವೇಶಿಸುವ ನೆಗಟಿವ್ ಶಕ್ತಿ ದೂರವಾಗುತ್ತದೆ.
ಮನೆ ಮೂಲೆ ಮೂಲೆಯಲ್ಲೂ ಬಟ್ಟಲಲ್ಲಿ ಉಪ್ಪಿಡಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಉಪ್ಪಿಗೆ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ಇರುತ್ತದೆ.
ಮೂರು ವರ್ಷಗಳಿಗೊಮ್ಮೆ ಯಾದರೂ ಗಣೇಶ ಪೂಜೆ ಹಾಗೂ ನವಗ್ರಹ ಹೋಮ ಮಾಡುವುದರಿಂದ ಮನೆಯ ವಾಸ್ತು ದೋಷವನ್ನ ಹೋಗಲಾಡಿಸಬಹುದು.
ಮನೆಯಲ್ಲಿ ಅಳುತ್ತಿರುವ ಚಿತ್ರ, ಸಿಟ್ಟಾಗಿರುವ ಮನುಷ್ಯ, ಗೂಬೆ ಅಥವಾ ಹದ್ದಿನ ಚಿತ್ರಗಳನ್ನು ಅಶುಭ ಎನ್ನಲಾಗುತ್ತದೆ. ಇಂಥ ಚಿತ್ರಗಳಿದ್ದರೆ ಕೂಡಲೇ ತೆಗೆದು ಹಾಕಿ.