ಈ ರಾಶಿಯವರಿಂದು ಬಲು ಎಚ್ಚರಿಕೆ ವಹಿಸುವುದು ಅಗತ್ಯ

Published : Aug 10, 2018, 07:01 AM IST
ಈ ರಾಶಿಯವರಿಂದು ಬಲು ಎಚ್ಚರಿಕೆ ವಹಿಸುವುದು ಅಗತ್ಯ

ಸಾರಾಂಶ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕರ್ಕಟಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.    

ಈ ರಾಶಿಯವರಿಂದು ಬಲು ಎಚ್ಚರಿಕೆ ವಹಿಸುವುದು ಅಗತ್ಯ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕರ್ಕಟಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ಇಂದು ನಿಮ್ಮ ಸಹೋದರಿಯಿಂದ ಭಾಗ್ಯೋದಯವಾಗುತ್ತೆ. ನಿಮ್ಮ ದೇಹದಲ್ಲಿ ಉತ್ಸಾಹ ಹೊಮ್ಮಲಿದೆ. ಆದರೆ ಹೃದಯ ಭಾಗದಲ್ಲಿ ತೊಂದರೆ ಕಾಣುತ್ತದೆ. ಹೊಸ ಕಾರ್ಯಗಳನ್ನು ಮಾಡುವ ಆಲೋಚನೆ ಪ್ರಾರಂಭವಾಗಲಿದೆ. ಸ್ವಲ್ಪ ತನೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 
  
ದೋಷಪರಿಹಾರ : ಕುಜ ಆರಾಧನೆ ಮಾಡಿ

ವೃಷಭ : ಆತ್ಮೀಯರೇ  ಇಂದು ನಿಮ್ಮ ಮಿತ್ರರಿಂದ ಹಾಗೂ ನಿಮ್ಮ ಮಾತಿನ ಚಾತುರ್ಯದಿಂದ ಧನ ಲಾಭ ಬರಲಿದೆ. ನಿಮ್ಮ ಗಂಟಲಿನ ಭಾಗದಲ್ಲಿ ಸ್ವಲ್ಪ ನೋವು ಇತ್ಯಾದಿ ತೊಂದರೆ ಕಾಣಿಸಿಕೊಳ್ಳಲಿದೆ. ದುರ್ಗಾ ದೇವಸ್ಥಾನಕ್ಕೆ 5 ಪ್ರದಕ್ಷಿಣೆ ಹಾಕಿ.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳು ದಾನ ಮಾಡಿಬನ್ನಿ.

ಮಿಥುನ : ಆತ್ಮೀಯರೇ ಇಂದು ನಿಮ್ಮ ಮನಸ್ಸು ಚಂಚಲವಾಗಲಿದೆ. ಮಾತಿನಿಂದ ಕಲಹವೂ ಆಗಬಹುದು,  ಆರೋಗ್ಯವೂ ವೃದ್ಧಿಯಾಗಲಿದೆ, ಜೊತೆಗೆ ಸ್ತ್ರೀ ಮೂಲಕ ಧನಪ್ರಾಪ್ತಿ ಹಾಗೂ ಧನ ವ್ಯಯವಾಗಲಿದೆ. ನಿಮ್ಮ ಮಕ್ಕಳಿಂದ ಹಾಗೂ ವಿದೇಶಗಳಿಂದ ಶುಭ ಸುದ್ದಿ ಬರಲಿದೆ. 

ದೋಷ ಪರಿಹಾರ : ನಿಮ್ಮ ಕುಲ ದೇವರಿಗೆ ದೀಪ ಹಚ್ಚಿ.

ಕಟಕ : ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಸಂಜೆವೇಳೆಗೆ ಚೇತರಿಗೆ ಕಾಣಲಿದೆ. ನಿಮ್ಮ ತಂದೆಯಿಂದ ಸಹಾಯ ಹಾಗೂ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಉತ್ತಮರ ಭೇಟಿ ಹಾಗೂ ಸದ್ವಿಚಾರ ಚಿಂತನೆ. ಸ್ತ್ರೀಯರೊಂದಿಗೆ ವಾಗ್ವಾದಗಳಾಗುವ ಸಾಧ್ಯತೆ ಇದೆ.
  
ದೋಷ ಪರಿಹಾರ : ಮನಸ್ಸಿನಲ್ಲಿ 108 ಬಾರಿ ಮಹಾಲಕ್ಷ್ಮೀ ಜಪ ಮಾಡಿ.

ಸಿಂಹ : ಆತ್ಮೀಯರೇ, ಇಂದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ವ್ಯಯವಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮ ಸ್ಥೈರ್ಯ ಸ್ವಲ್ಪ ಮಟ್ಟಿಗೆ ಕುಗ್ಗಲಿದೆ. ಅಂದುಕೊಂಡ ಕಾರ್ಯಗಳು ಸ್ವಲ್ಪ ವಿಳಂಬವಾಗಿ ನಡೆಯಲಿವೆ. ನಿಮ್ಮ ಸಹಾಯಕ್ಕೆ ನಿಮ್ಮ ಅಕ್ಕಪಕ್ಕದವರು ಬರುತ್ತಾರೆ ಎಂದು ನಿರೀಕ್ಷಿಸದಿರುವುದು ಒಳಿತು.

ದೋಷ ಪರಿಹಾರ : ಸೂರ್ಯನಾರಾಯಣ ದರ್ಶನ ಮಾಡಿ

ಕನ್ಯಾ : ಆತ್ಮೀಯರೇ ನಿಮ್ಮ ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ಹಾಗಾಗಿ ಲಾಭದ ದಿನ ಅಷ್ಟೇ ಅಲ್ಲ ಅಲ್ಲಿ ವ್ಯಯಾಧಿಪತಿಯೂ ಇದ್ದಾನೆ ಹಾಗಾಗಿ ಬಂದ ಲಾಭ ಹಾಗೇ ವ್ಯಯವೂ ಆಗಲಿದೆ. ಸ್ತ್ರೀ ಮೂಲಕ ಧನ ವ್ಯಯ, ಅಂದುಕೊಂಡ ಕಾರ್ಯಗಳು ಸ್ಥಗಿತ.
  
ದೋಷ ಪರಿಹಾರ : ಶ್ರೀನಿವಾಸ ಕಲ್ಯಾಣದಂಥ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ.

ತುಲಾ :  ಆತ್ಮೀಯರೇ ನಿಮ್ಮ ಆರೋಗ್ಯ ಚೇತರಿಕೆಯಾಗಲಿದೆ. ನಿಮ್ಮ ಧನ ಸಮೃದ್ಧವಾಗಲಿದೆ. ಉತ್ತಮರ ಸಹಕಾರ. ಆತ್ಮೀಯ ಸ್ನೇಹಿತರ ಭೇಟಿ. ದಾಂಪತ್ಯದಲ್ಲಿ ಹೊಂದಾಣಿಕೆ ದೂರದ ಊರಿಗೆ ಪ್ರಯಾಣ ಹೊರಡುವ ಚಿಂತನೆ ನಡೆಸಿದ್ದೀರಿ. ಶುಭವಾಗಲಿದೆ. 

ದೋಷ ಪರಿಹಾರ : ಔದುಂಬರ ವೃಕ್ಷಕ್ಕೆ 5 ಪ್ರದಕ್ಷಿಣೆ ಹಾಕಿ.

ವೃಶ್ಚಿಕ : ಆತ್ಮೀಯರೇ,  ನಿಮ್ಮ ಸಹೋದರರು ನಿಮ್ಮ ಸಹಾಯಕ್ಕೆ ಬರುವುದರ ಜೊತೆಗೆ ನಿಮ್ಮ ಪಾಲುದಾರಿಕೆಯಲ್ಲಿ ಭಾಗಿಯಾಗುತ್ತಾರೆ. ಸ್ವಲ್ಪ ಗೊಂದಲವೂ ಇದೆ. ಯಾವುದೇ ಕಾರ್ಯ ಮಾಡುವ ಮುನ್ನ ಗುರು ದರ್ಶನ ಹಾಗೂ ಗುರು ಮಾರ್ಗದರ್ಶನ ಪಡೆಯುವುದು ಉತ್ತಮ.  

ದೋಷ ಪರಿಹಾರ : ಶೃಂಗೇರಿ ಗುರುಗಳ ದರ್ಶನ ಮಾಡಿ.

ಧನಸ್ಸು : ಆತ್ಮೀಯರೇ ನಿಮ್ಮ ಮನಸ್ಸಿಗೆ ಇಂದು ಅಶಾಂತಿ ಯಾವ ಕಾರ್ಯವೂ ಪೂರ್ಣವಾಗಲಿಲ್ಲ ಎಂಬ ಚಿಂತೆ. ನಿಮ್ಮ ದೇಹ ಸ್ವಲ್ಪ ಕೃಷವಾಗಲಿದೆ. ಧನ ಲಾಭದ ಜೊತೆ ಸ್ವಲ್ಪ ವ್ಯಯವೂ ಇದೆ. ವೃಥಾ ಖರ್ಚು ಮಾಡುವ ಸಂದರ್ಭ ಒದಗಬಹುದು.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದಾನ ಮಾಡಿ. 

ಮಕರ :  ಆತ್ಮೀಯರೇ ಇಂದು ನಿಮ್ಮ ಯೋಚನೆಯಲ್ಲಿ ದ್ವಂದ್ವ ಭಾವ ಮೂಡುವ ಸಾಧ್ಯತೆ ಇದೆ. ಶುಭ ಕಾರ್ಯಗಳಲ್ಲಿ ಅಥವಾ ಸ್ನೇಹಿತರೊಂದಿಗೆ ಕಲಾಪಗಳಲ್ಲಿ ಭಾಗಿಯಾಗುವ ದಿನವಾಗಿದೆ. ನಿಮ್ಮ ಮನಸ್ಸು ಪ್ರಶಾಂತವಾಗಲಿಕ್ಕೆ ಸೂರ್ಯೋಪಾಸನೆ ಮಾಡಿ.
  
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಭಸ್ಮ ದಾನ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ಇಷ್ಟದವರೇ ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ. ಮಾನಸಿಕವಾಗಿ ಸ್ವಲ್ಪ ಖಿನ್ನರಾಗುತ್ತೀರಿ. ಅಂದುಕೊಂಡ ಕಾರ್ಯಗಳು ಸಫಲವಾಗುವುದಿಲ್ಲ. ನಿಮ್ಮ ಸ್ನೇಹಿತರ ಸಲಹೆ, ಮಾರ್ಗದರ್ಶನ ಪಡೆಯಿರಿ.

ದೋಷ ಪರಿಹಾರ :  ಓಂ ಭವಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ
  
ಮೀನ : ಮಿತ್ರರೇ ಇಂದು ನಿಮ್ಮ ತಾಯಿ ನಿಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ. ನಿಮ್ಮ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಸ್ವಲ್ಪ ಮಟ್ಟಿಗೆ ಧನಲಾಭವೂ ಇದೆ. ಹೆಂಡತಿಯಿಂದ ಸಹಕಾರ ದೊರೆಯುತ್ತದೆ. ಸಂಗಾತಿಯಲ್ಲಿ ಆಡಿದ ಮಾತು ನಿಮ್ಮ ಮನಸ್ಸಿಗೆ ಹೊಸದಾರಿ ಎಂದೆನಿಸುತ್ತದೆ.
  
ದೋಷ ಪರಿಹಾರ : ಅರಳಿ ವೃಕ್ಷ ದರ್ಶನ, ಪ್ರದಕ್ಷಿಣೆ ಮಾಡಿ

ಗೀತಾಸುತ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ