ಈ ರಾಶಿಯವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ

Published : Nov 05, 2018, 10:05 AM IST
ಈ ರಾಶಿಯವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ

ಸಾರಾಂಶ

 ಈ ರಾಶಿಯವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ

ಮೇಷ ರಾಶಿ : ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು, ನಿಮ್ಮ ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಯ, ಸಂಗಾತಿಯಿಂದ ಸಹಾಯ, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ನಿರೀಕ್ಷೆಯ ಫಲ ಸಿಗದು. 
ದೋಷಪರಿಹಾರ : ಆರೋಗ್ಯ ವೃದ್ಧಿಗಾಗಿ ಸೂರ್ಯೋಪಾಸನೆ ಮಾಡಿ

ವೃಷಭ : ನಿಮ್ಮ ಆರೋಗ್ಯ ವ್ಯತ್ಯಯವಾಗಬಹುದು, ನಂಬಿದವರಿಂದ ವ್ಯಾಪಾರದಲ್ಲಿ ಅನುಕೂಲತೆಗಳು, ಸ್ನೇಹಿತರಿಂದ, ಸಂಗಾತಿಯಿಂದ ಸಹಾಯದ ದಿನ, ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಸಮಾಧಾನದ ಫಲಗಳು.  
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ

ಮಿಥುನ : ದಾಂಪತ್ಯ ಕಲಹ, ವ್ಯಾಪಾರದಲ್ಲೂ ನಷ್ಟ, ಕಳ್ಳಕಾಕರರ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಸ್ವೀಕರಿಸಿ, ಮಕ್ಕಳಿಂದ ಸ್ವಲ್ಪ ಅಸಮಧಾನ.  

ದೋಷ ಪರಿಹಾರ : ವಿಷ್ಣುಸಹಸ್ರನಾಮ ಪಠಿಸಿ

ಕಟಕ : ದೇಹದಲ್ಲಿ ಸ್ವಲ್ಪ ತೊಂದರೆ ಸಂಭವ, ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಮನೆಯಲ್ಲಿ ಸ್ವಲ್ಪ ತೊಂದರೆ ಆದರೆ ಅನುಕೂಲವೂ ಇದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ, ಕಾಲಿನ ಭಾಗಕ್ಕೆ ಪೆಟ್ಟಾಗಬಹುದು. ಓಡಾಡುವಾಗ ಎಚ್ಚರವಾಗಿರಿ.
  
ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ 

ಸಿಂಹ : ಅಗ್ನಿ ಅವಘಡ ಸಂಭವ, ಆದಷ್ಟು ಜಾಗ್ರತೆ ಇರಲಿ, ಸ್ತ್ರೀ ಮೂಲಕ ಧನಾಗಮನ, ಸಹೋದರ ಸಹೋದರಿಯರಿಂದ ಅನುಕೂಲ, ಗೃಹ ಹಾಗೂ ವಾಹನ ಲಾಭ, ಮಕ್ಕಳಿಂದ ಸ್ವಲ್ಪ ಮನಸ್ಸಿಗೆ ಬೇಸರ.  

ದೋಷ ಪರಿಹಾರ : ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ : ಮನಸ್ಸಿಗೆ ಸಮಾಧಾನ, ಲಾಭದ ದಿನವಾಗಿರಲಿದೆ, ತಂದೆಯಲ್ಲಿ ಅಸಮಧಾನ, ವಾಹನದಲ್ಲಿ ತೊಂದರೆ, ಓಡಾಡುವಾಗ ಎಚ್ಚರ ಬೇಕು, ನಿಮ್ಮ ಆರೋಗ್ಯದಲ್ಲಿ ವ್ಯತ್ಯವೂ ಇದೆ, ಸುಬ್ರಹ್ಮಣ್ಯ ದರ್ಶನದಿಂದ ಮನಸ್ಸಿಗೆ ಸಮಾಧಾನ. 
  
ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಮಾಡಿ

ತುಲಾ :  ಮನಸ್ಸಿಗೆ ಅಸಮಧಾನ, ದಾಂಪತ್ಯ ಕಲಹ, ಕೋಟ್ರು ಕಚೇರಿಯಲ್ಲಿ ಸಮಸ್ಯೆಗಳು, ಭೂಮಿ ಖರೀದಿಯಲ್ಲಿ ತೊಂದರೆಯಾಗಬಹುದು, ಧನಲಾಭವಿದೆ. ಅವರೆ ಕಾಳು ದಾನ ಮಾಡಿ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ 

ವೃಶ್ಚಿಕ :  ಆರೋಗ್ಯ ವೃದ್ಧಿ, ಕಾರ್ಯ ಸಾಧನೆ, ಹಣ ಕಳೆದುಹೋಗುವ ಸಾಧ್ಯತೆ ಇದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆ ಹಾಗೂ ತೊಂದರೆಯಾಗುವ ಸಾಧ್ಯತೆ ಇದೆ. ಮಾತು ಕಡಿಮೆ ಮಾಡಿ. 

ದೋಷ ಪರಿಹಾರ : ನಾಗ ದೇವರಿಗೆ ಕ್ಷೀರಾಭಿಷೇಕ ಮಾಡಿಸಿ  

ಧನಸ್ಸು :  ಆರೋಗ್ಯದಲ್ಲಿ ವ್ಯತ್ಯಯ, ಧನ ಸ್ಥಾನದ ಕುಜ ಹಾಗೂ ಕೇತು ಮಾಂದಿಯರು ಸಾಹಸ ಕಾರ್ಯದಲ್ಲಿ ತೊಡಕು, ವ್ಯವಹಾರಲ್ಲೂ ತೊಡಕು ಮಾಡುತ್ತದೆ, ಅಷ್ಟಮದ ರಾಹು ಆರೋಗ್ಯದಲ್ಲಿ ತೀವ್ರ ತೊಂದರೆ ಉಂಟುಮಾಡಬಹುದು.

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ.

ಮಕರ :  ಸಪ್ತಮದ ರಾಹು ವ್ಯಾಪಾರದಲ್ಲಿ , ದಾಂಪತ್ಯದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ, ಭಾಗ್ಯ ಸ್ಥಾನದ ಚಂದ್ರ ಅದೃಷ್ಟಕ್ಕೆ ಕತ್ತರಿ ಹಾಕುತ್ತಾನೆ. ಉದ್ಯೋಗದಲ್ಲಿ ಯಶಸ್ಸು. ಉತ್ತಮ ಸಹಕಾರ. 
  
ದೋಷ ಪರಿಹಾರ : ನಾಗ ಪ್ರಾರ್ಥನೆ ಮಾಡಿ 

ಕುಂಭ :   ಅತ್ಯುತ್ತಮ ದಿನ, ಉದ್ಯೋಗ ವೃದ್ಧಿ, ಅಧಿಕಾರದಲ್ಲಿ ಯಶಸ್ಸು, ಲಾಭದಾಯಕ ದಿನವೂ ಆಗಿದೆ. ವಸ್ತ್ರ ವ್ಯಾಪಾರಿಗಳಿಗೆ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭದ ದಿನವಾಗಿರಲಿದೆ.   

ದೋಷ ಪರಿಹಾರ : ಶುಕ್ರಗ್ರಹ ಪ್ರಾರ್ಥನೆ ಮಾಡಿ 
  
ಮೀನ : ಅದೃಷ್ಟದ ದಿನ, ನಿಮ್ಮ ಭಾಗ್ಯದ ಬಾಗಿಲು ತೆಗೆದಂತೆಯೇ. ಸಕಲ ಕಾರ್ಯಗಳಲ್ಲೂ ಸಿದ್ಧಿ, ಕುಟುಂಬ ವೃದ್ಧಿ, ಭೂಮಿ ಲಾಭ. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ಜಾಗ್ರತೆಯಿಂದ ಮಾತನಾಡಿ.  
  
ದೋಷ ಪರಿಹಾರ : ಅರಳಿ ವೃಕ್ಷ ಪ್ರದಕ್ಷಿಣೆ ಮಾಡಿ

ವಾಞ್ಮಯೀ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ