ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ..?
ಮೇಷ: ಮತ್ತೊಬ್ಬರ ಸಂತೋಷಕ್ಕಾಗಿ ನಿಮ್ಮ ಆಸೆಗಳನ್ನು ಬಲಿ ಕೊಡಲಿದ್ದೀರಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಬೇಡ
ವೃಷಭ: ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ಸಹಕಾರದಿಂದ ಹೊಸ ಕಾರ್ಯ ಕೈಗೊಳ್ಳಲಿದ್ದೀರಿ. ಮಾತಿನ ಮೇಲೆ ಹಿಡಿತವಿರಲಿ.
ಮಿಥುನ: ಸಂಕಟ ಬಂದಾಗ ವೆಂಕಟರಮಣ ಎನ್ನುವ ಹಾಗೆ ಕಷ್ಟ ಎದುರಾದಾಗ ಪರಿಹಾರಕ್ಕೆ ಮುಂದಾಗಲಿದ್ದೀರಿ. ಸಂತೋಷ ಹೆಚ್ಚಲಿದೆ.
ಕಟಕ: ಆತ್ಮೀಯ ಸ್ನೇಹಿತನ ಸಂತೋಷದಲ್ಲಿ ಇಡೀ ದಿನ ಭಾಗಿಯಾಗಲಿದ್ದೀರಿ. ನಿಮ್ಮದಲ್ಲದ ವಿಚಾರಗಳ ಬಗ್ಗೆಯೇ ಚಿಂತೆ ಮಾಡಲಿದ್ದೀರಿ
ಸಿಂಹ: ಆಸೆಯಿಂದ ಕೊಂಡ ವಸ್ತು ಅಗತ್ಯ ಸಮಯ ದಲ್ಲಿಯೇ ಕೈ ಕೊಡಲಿದೆ. ಚಿನ್ನಾಭರಣ ಕೊಳ್ಳುವ ಯೋಗವಿದೆ. ಖರ್ಚು ಅಧಿಕ.
ಕನ್ಯಾ: ತಾಯಿ ಮತ್ತು ಸಹೋದರಿಯರಿಂದ ಸಹಾಯವಾಗಲಿದೆ. ಸತ್ಯ ಹೇಳುವುದಕ್ಕೆ ಹಿಂಜರಿಕೆ ಬೇಡ. ಅಂದುಕೊಂಡಿದ್ದು ಆಗಲಿದೆ.
ತುಲಾ: ದಿನ ಪೂರ್ತಿ ಮಾಡಬೇಕಿದ್ದ ಕಾರ್ಯವನ್ನು ಮಧ್ಯಾಹ್ನದ ವೇಳೆಗೇ ಮಾಡಿ ಮುಗಿಸಲಿದ್ದೀರಿ. ಕಚೇರಿ ಅಲೆದಾಟ ಮುಂದುವರೆಯಲಿದೆ.
ವೃಶ್ಚಿಕ: ಆಹಾರದ ಬಗ್ಗೆ ಕಾಳಜಿ ಇರಲಿ. ದೊಡ್ಡವರನ್ನು ಭೇಟಿ ಮಾಡಲಿದ್ದೀರಿ. ಸಣ್ಣ ವ್ಯಾಪಾರಿಗಳಿಗೆ ಇಂದು ಒಳ್ಳೆಯ ವ್ಯಾಪಾರವಾಗಲಿದೆ
ಧನುಸ್ಸು: ಎರಡು ಮನಸ್ಸು ಇಟ್ಟುಕೊಂಡು ಕೆಲಸ ಮಾಡುವುದು ಬೇಡ. ಹಿರಿಯರ ಸಲಹೆ ಪಡೆದುಕೊಂಡು ಮುಂದುವರೆಯಿರಿ.
ಮಕರ: ಸಕಾರಾತ್ಮಕ ಚಿಂತನೆಗಳು ಇಡೀ ದಿನ ನಿಮ್ಮನ್ನು ಮುನ್ನಡೆಸಲಿವೆ. ದೂರದ ಪ್ರಯಾಣಕ್ಕೆ ಅಗತ್ಯ ಸಿದ್ಧತೆ ಮಾಡಿ ಮುಗಿಸಿಕೊಳ್ಳಲಿದ್ದೀರಿ.
ಕುಂಭ: ನಿಮ್ಮ ಅಹಂಗೆ ದೊಡ್ಡ ಪೆಟ್ಟು ಬೀಳಲಿದೆ. ಗೊತ್ತಿಲ್ಲದೇ ಇರುವುದನ್ನು ಕೇಳಿ ತಿಳಿಯುವುದರಲ್ಲಿ ತಪ್ಪಿಲ್ಲ. ಅಂಜಿಕೆ ಬೇಡ. ಶುಭ ಫಲ
ಮೀನ: ಸಣ್ಣ ವಿಚಾರವನ್ನು ದೊಡ್ಡದು ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳದಿರಿ. ನಿಮ್ಮ ನೋವಿಗೆ ಮಿಡಿಯುವ ಹೃದಯಗಳು ಸಿಗಲಿ