ರಗಳೆಯಿಂದ ಹೊರ ಬರಲಿದ್ದೀರಿ, ಸಿಹಿ ಸುದ್ದಿಯೂ ನಿಮಗಿದೆ: ದಿನ ಭವಿಷ್ಯ

Published : Sep 07, 2019, 07:20 AM ISTUpdated : Sep 07, 2019, 07:32 AM IST
ರಗಳೆಯಿಂದ ಹೊರ ಬರಲಿದ್ದೀರಿ, ಸಿಹಿ ಸುದ್ದಿಯೂ ನಿಮಗಿದೆ: ದಿನ ಭವಿಷ್ಯ

ಸಾರಾಂಶ

ಸೆಪ್ಟೆಂಬರ್ 07, 2019 ಶುಕ್ರವಾರ : ಶುಭ ಶುಕ್ರವಾರ ಯಾರಿಗೆ ಶುಭದಾಯಕ, ತಿಳಿಯಿರಿ ರಾಶಿ ಫಲದ ಮೂಲಕ

ಮೇಷ: ನಿಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸ ತುಂಬುವಲ್ಲಿ ನಿಮ್ಮ ಪಾತ್ರ ದೊಡ್ಡದು. ರಗಳೆಗಳಿಂದ ಹೊರ ಬರಲಿದ್ದೀರಿ. ಸಂತೋಷ ಹೆಚ್ಚಾಗಲಿದೆ

ವೃಷಭ: ಪದೇ ಪದೇ ಕಾಡುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತವಾದ ಪರಿಹಾರ ದೊರೆಯಲಿದೆ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೇ ಇದೆ.

ಮಿಥುನ: ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಮಾಡುವಾಗ ವ್ಯಕ್ತಿತ್ವಕ್ಕೆ ಒತ್ತು ನೀಡಿ. ಕಾಲ ಬದಲಾಗಲಿ

ಕಟಕ: ನನಗೇ ಯಾಕೆ ಇಷ್ಟೊಂದು ಕಷ್ಟ ಎಂದು ಕೊರಗುತ್ತಾ ಕೂರುವುದಕ್ಕೆ ಬದಲಾಗಿ, ಧೈರ್ಯದಿಂದ ಮುಂದೆ ಸಾಗುತ್ತಿರಿ. ಶುಭಫಲ.

ಸಿಂಹ: ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಮುಂದೆ ಸಾಗಿ. ದೊಡ್ಡ ಕಾರ್ಯಗಳು ಶುರುವಾಗುವುದು ಸಣ್ಣ ಪ್ರಯತ್ನದಿಂದಲೇ

ಕನ್ಯಾ: ಅವಸರದಲ್ಲಿ ಮಾಡಿದ ಕೆಲಸಗಳು ಪೂರ್ಣ ಫಲವನ್ನು ನೀಡುವುದಿಲ್ಲ. ಕಾಲವೇ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ತುಲಾ: ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಕಾರ್ಯರಂಗಕ್ಕೆ ಇಳಿಯಿರಿ. ಅನಿವಾರ್ಯತೆಗೆ ಸಿಲುಕಿ ಇಷ್ಟವಿಲ್ಲದ ಕೆಲಸ ಮಾಡಬೇಕಾದೀತು.

ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಿ. ತಪ್ಪನ್ನು ಖಂಡಿಸಿ, ತಪ್ಪು ಮಾಡಿದ ವ್ಯಕ್ತಿಯನ್ನಲ್ಲ. ಇಂದು ಸಿಹಿ ಸುದ್ದಿ ಕೇಳಲಿದ್ದೀರಿ.

ಧನುಸ್ಸು: ಪರರ ಸೇವೆಯಲ್ಲಿ ತೊಡಗಿಕೊಳ್ಳಲಿದ್ದೀರಿ. ಶುಭ ಸಮಾರಂಭಗಳ ಭಾಗವಾಗಿ ನೀವು ಕಾರ್ಯ ನಿರ್ವಹಿಸಲಿದ್ದೀರಿ. ಶುಭ ಫಲ

ಮಕರ: ಬೇಡವೆಂದರೂ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ವಂತ ಬುದ್ಧಿಯಿಂದ ಆಲೋಚನೆ ಮಾಡಿ.

ಕುಂಭ: ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚೆ ಮಾಡಿ. ಮನಸ್ಸಿಗೆ ಬಂದಂತೆ ಮಾತನಾಡುವುದು ಬೇಡ.

ಮೀನ: ಸರಿ ಇಲ್ಲ ಎಂದುಕೊಂಡ ಕೆಲಸವನ್ನು ಮಾಡದೇ ಇರುವುದೇ ಉತ್ತಮ. ಇಡೀ ದಿನ ಆಲಸ್ಯ ಆವರಿಸಿಕೊಳ್ಳಲಿದೆ. ಧೈರ್ಯ ಇರಲಿ

PREV
click me!

Recommended Stories

ಯಾವುದೇ ಕೆಲಸ ಕೈಗೂಡ್ತಿಲ್ವಾ? ಹಾಗಿದ್ರೆ ಮುಖ್ಯ ದ್ವಾರಕ್ಕೆ ಒಂದು ಚಿಟಿಕೆ ಅರಿಶಿನ ನೀರು ಹಾಕೋದನ್ನ ಮಿಸ್ ಮಾಡ್ಬೇಡಿ
ಸಾವಿಗೆ 10 ನಿಮಿಷಗಳ ಮೊದಲು ಏನಾಗುತ್ತೆ? ಹೃದಯ, ಮೆದುಳು ಬಳಿಕ ಕೊನೆಗೆ ನಿಲ್ಲುವ ಅಂಗ ಯಾವುದು?