ಸಾರಾಂಶ
ಮೀರತ್ನಲ್ಲಿ ನೌಕಾಧಿಕಾರಿ ಸೌರಭ್ ಕುಮಾರ್ರನ್ನು ಪತ್ನಿ ಮುಸ್ಕಾನ್ ರಸ್ತೋಗಿ ಪ್ರಿಯಕರ ಸಾಹಿಲ್ ಜೊತೆಗೂಡಿ ಕೊ*ಲೆಗೈದಳು. ಮಗಳ ಹುಟ್ಟುಹಬ್ಬಕ್ಕೆ ಬಂದಿದ್ದ ಸೌರಭ್ಗೆ ನಿದ್ದೆ ಮಾತ್ರೆ ನೀಡಿ ಕೊಂದು, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ನಲ್ಲಿ ಸಿಮೆಂಟ್ ಹಾಕಿ ಮುಚ್ಚಿದರು. ಮುಸ್ಕಾನ್ ತಾಯಿ ಪೊಲೀಸರಿಗೆ ತಿಳಿಸಿದ್ದರಿಂದ ಕೃತ್ಯ ಬಯಲಾಯಿತು. ಇಬ್ಬರನ್ನೂ ಬಂಧಿಸಲಾಗಿದೆ.
ಇದು ನಡೆದದ್ದು ಕಳೆದ ಮಾರ್ಚ್ನಲ್ಲಿ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯಿದು. ಅತ್ತ ಶ್ರದ್ಧಾ ವಾಕರ್ಳನ್ನು ತುಂಡರಿಸಿ, ಫ್ರಿಜ್ನಲ್ಲಿ ಇಟ್ಟುದ್ದು ಅಫ್ತಾಬ್ ಅಮೀನ್ ಆದರೆ, ಇಲ್ಲಿ ನೌಕಾಧಿಕಾರಿ ಸೌರಭ್ ಕುಮಾರ್ ಅವರನ್ನು ತುಂಡರಿಸಿ ಡ್ರಮ್ನಲ್ಲಿ ಇಟ್ಟದ್ದು, ಮುಸ್ಕಾನ್ ರಸ್ತೋಗಿ, ಈಕೆಗೆ ನೆರವಾಗಿದ್ದು ಇವಳ ಲವರ್ ಸಾಹಿಲ್! ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಈ ಘಟನೆ, ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್ಗೆ ಬಂದಿದ್ದ ಪತಿಯನ್ನು ಲವರ್ ಜೊತೆ ಸೇರಿ ಕೊ*ಲೆ ಮಾಡಿ, ದೇಹವನ್ನು ತುಂಡರಿಸಿ ಡ್ರಮ್ನಲ್ಲಿ ಇಡಲಾಗಿತ್ತು. ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಳು ಈಕೆ. ಆ ಬಳಿಕ ಏನೂ ಆಗದವರ ಹಾಗೆ ಮರುದಿನ ತನ್ನ ಲವರ್ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅದರ ವಿಡಿಯೋ ಈಗ ವೈರಲ್ ಆಗಿದೆ.
ಈಕೆಯೇ ಕೊಲೆ ಮಾಡಿದ್ದು ಎಂದು ತಿಳಿಯುವುದು ಕಷ್ಟವಾಗುತ್ತಿತ್ತೇನೋ. ಆದರೆ, ಮಗಳ ಘನಕಾರ್ಯವನ್ನು ಆಕೆಯ ತಾಯಿಯೇ ಬಹಿರಂಗ ಮಾಡಿದ್ದರು. ಆ ಮೂಲಕ ಮಗಳ ಕುಕೃತ್ಯ ಬೆಳಕಿಗೆ ಬಂದಿತ್ತು. ಭಾರತೀಯ ನೌಕಾಧಿಕಾರಿಯಾಗಿದ್ದ ಸೌರಭ್ ಕುಮಾರ್ ಅವರು ಲಂಡನ್ನಲ್ಲಿದ್ದರು. ಇವರಿಗೆ ಐದು ವರ್ಷದ ಮಗಳು ಪಿಹು ಇದ್ದಾಳೆ. ಆಕೆಯ ಹುಟ್ಟುಹಬ್ಬ ಆಚರಿಸಲು ಅವರು ಮೀರತ್ಗೆ ಬಂದಿದ್ದರು. ಆದರೆ, ಅದಾಗಲೇ ಪತ್ನಿ ಮುಸ್ಕಾನ್ ಆತನನ್ನು ಮುಗಿಸಲು ಸ್ಕೆಚ್ ರೆಡಿ ಮಾಡಿಕೊಂಡಿದ್ದಳು. ಅದಕ್ಕೆ ಪ್ರಿಯಕರ ಸಾಹಿಲ್ ಶುಕ್ಲಾ ಸಾಥ್ ಕೊಟ್ಟಿದ್ದ. ಕತ್ತು ಸೀ*ಲಿ ಸಾಯಿಸಿದ ಬಳಿಕ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್ನಲ್ಲಿ ಹಾಕಿ ಸಿಮೆಂಟ್ ತುಂಬಿ ಸೀಲ್ ಮಾಡಿದ್ದರು.
ಬುರ್ಖಾ ಕೇ ಪೀಚೆ ಕ್ಯಾ ಹೈ? ಬಟ್ಟೆ ಬಿಚ್ಚಿ ಬಿಚ್ಚಿ ಸುಸ್ತಾದ ಪೊಲೀಸ್ರು- ಸೊಂಟದಲ್ಲಿತ್ತು ಗ'ಮ್ಮತ್ತು'
ಅಷ್ಟಕ್ಕೂ, ಪತಿಯನ್ನು ಮುಗಿಸಲು ಆಕೆ ಆಯ್ಕೆ ಮಾಡಿಕೊಂಡಿದ್ದು, ನಿದ್ದೆ ಮಾತ್ರೆ. ಸೌರಭ್ ಅವರು ಸೇವಿಸುತ್ತಿದ್ದ ಮಾತ್ರೆಯ ಜಾಗದಲ್ಲಿ ನಿದ್ದೆ ಮಾತ್ರೆ ಇಟ್ಟಿದ್ದಳು. ಪತ್ನಿಯ ಕುತಂತ್ರ ಅರಿವು ಇಲ್ಲದೇ ಅವರು ಅದನ್ನು ಸೇವಿಸಿದ್ದರು. ಕೊನೆಗೆ ದೇಹವನ್ನು ತುಂಡರಿಸಲಾಗಿತ್ತು. ತನಿಖೆಯ ಭಾಗವಾಗಿ ಮೆಡಿಕಲ್ ಸ್ಟೋರ್ನಿಂದ ಮುಸ್ಕಾನ್ ಮಾತ್ರೆಗಳನ್ನು ಖರೀದಿಸಿರುವುದು ತಿಳಿದಿತ್ತು. ಮಾರ್ಚ್ 4 ರಂದು ಅಪರಾಧ ಮಾಡಿದ ನಂತರ, ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲ ಪ್ರದೇಶಕ್ಕೆ ರಜೆಯ ಮೇಲೆ ಹೋಗಿದ್ದರು. ಆದರೆ ಸೌರಭ್ ಅವರ ಫೋನ್ನಿಂದ ಮೆಸೇಜ್ ಮಾಡುವ ಮೂಲಕ ತಾವಿಬ್ಬರೂ ಅಲ್ಲಿಗೆ ಹೋಗಿರುವ ರೀತಿ ತಿಳಿಸಲಾಗಿತ್ತು. ಆದ್ದರಿಂದ ಸೌರಭ್ ಮನೆಯವರಿಗೂ ಯಾವುದೇ ಸಂದೇಹ ಬಂದಿರಲಿಲ್ಲ.
ಆದರೆ, ಮಾರ್ಚ್ 18 ರಂದು ಮುಸ್ಕಾನ್ ತನ್ನ ತಾಯಿ ಬಳಿ ಹೇಳಿಕೊಂಡಾಗ ವಿಷಯ ಬೆಳಕಿಗೆ ಬಂತು. ಮುಸ್ಕಾನ್ ತಾಯಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ನಂತರ ಬಂಧಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸೌರಭ್ ಅವರ ಹೃದಯಕ್ಕೆ ತೀವ್ರ ಬಲದಿಂದ ಮೂರು ಬಾರಿ ಇರಿದಿದ್ದಾರೆ ಎಂದು ವರದಿ ಮಾಡಿದ್ದರು. ಸೌರಭ್ ಅವರ ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು. ಎರಡೂ ಕೈಗಳನ್ನು ಮಣಿಕಟ್ಟಿನಿಂದ ಕತ್ತರಿಸಲಾಗಿತ್ತು, ಅವರ ಕಾಲುಗಳನ್ನು ಬಗ್ಗಿಸಿ ಡ್ರಮ್ನಲ್ಲಿ ಹಾಕಲಾಗಿತ್ತು. ಆಘಾತ ಮತ್ತು ಅತಿಯಾದ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು. ಅಷ್ಟಕ್ಕೂ, ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು, ಸಂಬಂಧದ ನಂತರ ಮತ್ತು ಅವರಿಗೆ ಆರು ವರ್ಷದ ಮಗಳು ಇದ್ದಳು. ಮುಸ್ಕಾನ್ ಮತ್ತು ಸಾಹಿಲ್ ಶಾಲಾ ಕಾಲದಿಂದಲೂ ಪರಸ್ಪರ ಪರಿಚಿತರಾಗಿದ್ದರು ಮತ್ತು 2019 ರಲ್ಲಿ ವಾಟ್ಸಾಪ್ ಗುಂಪಿನ ಮೂಲಕ ಮತ್ತೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹಿಲ್ನ ಬಲೆಗೆ ಬಿದ್ದ 12 ಬಾಲೆಯರು ಕೊನೆಗೆ ಕಂಡದ್ದು ಪೋ* ವೆಬ್ಸೈಟ್ನಲ್ಲಿ! ಪೊಲೀಸರು ಗಪ್ಚುಪ್?