ಹಿಂದೂ ಧರ್ಮದಲ್ಲಿ ಬಾಳೆ ಮರವನ್ನು ಪೂಜಿಸುವುದರಿಂದ ಹಲವು ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಬಾಳೆ ಮರ ಪೂಜೆಯನ್ನು ಏಕೆ ಮಾಡಬೇಕು ಎಂದು ಉಜ್ಜಯಿನಿ ಜ್ಯೋತಿಷಿ ಪಂಡಿತ್ ಪ್ರವೀಣ್ ದ್ವಿವೇದಿ ಹೇಳಿದ್ದಾರೆ.
ಗುರು ಗ್ರಹಕ್ಕೆ ಕಾರಕ ಬಾಳೆ ಮರ
ಜ್ಯೋತಿಷಿ ಪಂಡಿತ್ ದ್ವಿವೇದಿ ಪ್ರಕಾರ.. ಬಾಳೆ ಮರ ಗುರು ಗ್ರಹಕ್ಕೆ ಕಾರಕ. ಯಾರ ಜಾತಕದಲ್ಲಿ ಗುರುವು ಅಶುಭ ಸ್ಥಿತಿಯಲ್ಲಿದ್ದಾನೋ, ಅವರು ಬಾಳೆ ಮರವನ್ನು ಪೂಜಿಸಬೇಕು ಎಂದು ಹೇಳಿದ್ದಾರೆ.
ವಿಷ್ಣುವಿನ ಆಶೀರ್ವಾದ
ಬಾಳೆ ಮರವನ್ನು ಪೂಜಿಸುವುದರಿಂದ ಶ್ರೀ ಮಹಾವಿಷ್ಣುವು ಕೂಡ ಪ್ರಸನ್ನನಾಗುತ್ತಾನೆ. ವಿಷ್ಣು, ಲಕ್ಷ್ಮೀದೇವಿಗೆ ಬಾಳೆ ಹಣ್ಣನ್ನು ನಿತ್ಯ ನೈವೇದ್ಯವಾಗಿ ಅರ್ಪಿಸುವುದರಿಂದ ಭಕ್ತರಿಗೆ ಅವರ ಆಶೀರ್ವಾದ ಸಿಗುತ್ತದೆ.
ಬೇಗ ಮದುವೆ ಆಗುತ್ತದೆ
ಯಾರಿಗಾದರೂ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ, ಅವರು ಬಾಳೆ ಮರವನ್ನು ಪೂಜಿಸಬೇಕು ಎಂದು ಹೇಳಿದ್ದಾರೆ. ಬಾಳೆ ಮರವನ್ನು ಪೂಜಿಸುವುದರಿಂದ ಬೇಗ ಮದುವೆ ಯೋಗ ಕೂಡಿಬರುತ್ತದೆ ಎಂದು ವಿವರಿಸಿದ್ದಾರೆ.
ಸುಖ ಜೀವನಕ್ಕಾಗಿ ಬಾಳೆ ಪೂಜೆ
ಗಂಡ ಹೆಂಡತಿಯ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಿದ್ದರೆ, ಇಬ್ಬರೂ ಸೇರಿ ಬಾಳೆ ಮರದ ಕೆಳಗೆ ಶುದ್ಧ ತುಪ್ಪದ ದೀಪವನ್ನು ಹಚ್ಚಿ, ನೀರು ಹಾಕಬೇಕು. ಇದರಿಂದ ಅವರ ಪ್ರೇಮ ಜೀವನ ಸುಖಮಯವಾಗಿರುತ್ತದೆ.
ಉತ್ತಮ ಸಂತಾನಕ್ಕಾಗಿ
ಉತ್ತಮ ಸಂತಾನಕ್ಕಾಗಿ ಪ್ರತಿ ಗುರುವಾರ ಬಾಳೆ ಮರದ ಕೆಳಗೆ ಕುಳಿತು ಗಂಡ ಹೆಂಡತಿ ಇಬ್ಬರೂ ಅಥವಾ ಅವರಲ್ಲಿ ಒಬ್ಬರು ಗುರು ಗ್ರಹ ಮಂತ್ರಗಳನ್ನು ಪಠಿಸಬೇಕು. ಇದರಿಂದ ಉತ್ತಮ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.