ವಾಸ್ತು ಹಾಗೂ ಜ್ಯೋತಿಷ್ಯದಲ್ಲಿ ಪ್ರತಿಯೊಂದು ಮರ ಮತ್ತು ಗಿಡಕ್ಕೂ ಪ್ರತ್ಯೇಕ ಮಹತ್ವವಿದೆ. ಈ ಸಸ್ಯದ ರೂಪ, ಬಣ್ಣ, ಪರಿಮಳ, ಹಣ್ಣುಗಳು ಮತ್ತು ಹೂವುಗಳು ವಿವಿಧ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ.
Kannada
ಶನಿಯ ಶಮಿ ಗಿಡ
ಗ್ರಹಗಳ ಶಾಂತಿಗಾಗಿ ಹಲವು ವಿಶೇಷ ಗಿಡಗಳನ್ನು ಮನೆಯಲ್ಲಿ ಬೆಳೆಸುತ್ತಾರೆ. ಇದರಲ್ಲಿ ಶಮಿ ಗಿಡವೂ ಒಂದು, ಇದನ್ನು ಶನಿ ದೇವರ ಅನುಗ್ರಹ ಪಡೆಯಲು ಬೆಳೆಸಲಾಗುತ್ತದೆ.
Kannada
ಮನೆಯಲ್ಲಿ ಶಮಿ ಗಿಡ ಬೇಡ
ವಾಸ್ತು ಪ್ರಕಾರ, ಶಮಿ ಗಿಡ ಮನೆಯಲ್ಲಿಟ್ಟರೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿನ ಹಣದ ಸಮಸ್ಯೆ, ಶನಿಕಾಟವೂ ನಿವಾರಣೆಯಾಗುತ್ತೆ.
Kannada
ದೇವಸ್ಥಾನದಲ್ಲಿ ಶಮಿ ಗಿಡ ನೆಡಿ
ಜ್ಯೋತಿಷಿ ಪಂಡಿತ್ ತಿವೇದಿಯವರ ಪ್ರಕಾರ, ಶಮಿ ಗಿಡ ಶನಿ ದೇವರಿಗೆ ಪ್ರಿಯವಾದರೂ, ಅದನ್ನು ಮನೆಯಲ್ಲಿ ಬೆಳೆಸುವ ಬದಲು ಯಾವುದಾದರೂ ದೇವಸ್ಥಾನದಲ್ಲಿ ಬೆಳೆಸಿದರೆ, ಒಳ್ಳೆಯ ಫಲ ಸಿಗುತ್ತದೆ.
Kannada
ಶಮಿ ಎಲೆಗಳನ್ನು ಶನಿಗೆ ಅರ್ಪಿಸಿ
ನಿಮ್ಮ ಹತ್ತಿರದ ಯಾವುದಾದರೂ ದೇವಸ್ಥಾನದಲ್ಲಿ ಶಮಿ ಗಿಡ ಬೆಳೆಸಿ, ಪ್ರತಿದಿನ ಅದಕ್ಕೆ ನೀರು ಹಾಕಬೇಕು. ಅದರಲ್ಲಿ ಎಲೆಗಳು ಬಂದಾಗ, ಅವುಗಳನ್ನು ಕಿತ್ತು ಶನಿ ದೇವರಿಗೆ ಅರ್ಪಿಸಬೇಕು.
Kannada
ಸಮಸ್ಯೆಗಳಿಂದ ಮುಕ್ತಿ
ಹತ್ತಿರದಲ್ಲಿ ಶನಿ ದೇವಸ್ಥಾನವಿಲ್ಲದಿದ್ದರೆ, ಶಿವನಿಗೂ ಶಮಿ ಎಲೆಗಳನ್ನು ಅರ್ಪಿಸಬಹುದು, ಇದರಿಂದ ಶನಿ ದೇವರ ಅನುಗ್ರಹ ನಿಮ್ಮ ಮೇಲಿರುತ್ತದೆ, ಸಮಸ್ಯೆಗಳಿಂದ ಮುಕ್ತರಾಗುವಿರಿ.
Kannada
ಇವುಗಳನ್ನು ಗಮನದಲ್ಲಿಡಿ
ಮನೆಯಲ್ಲಿ ಶಮಿ ಗಿಡ ಬೆಳೆಸಲು ಹಲವು ನಿಯಮಗಳನ್ನು ಪಾಲಿಸಬೇಕು, ಸಾಮಾನ್ಯ ಜನರಿಂದ ಅವುಗಳನ್ನು ಮಾಡಲು ಸಾಧ್ಯವಿಲ್ಲ, ಪರಿಣಾಮವಾಗಿ ಅಶುಭ ಫಲಗಳನ್ನು ಅನುಭವಿಸಬೇಕಾಗಬಹುದು.