Small Screen

ರಂಜನಿ ರಾಘವನ್

ಕನ್ನಡತಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದ ನಟಿ ರಂಜನಿ ರಾಘವನ್ ಇದೀಗ ಉಜ್ಜಯಿನಿಯಲ್ಲಿ  ಮಹಾಕಾಲೇಶ್ವರ ದರ್ಶನ ಮಾಡುತ್ತಿದ್ದಾರೆ. ಈ ಕುರಿತಂತೆ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿದ್ದಾರೆ.

Image credits: social media

ಉಜ್ಜಯಿನಿಯಲ್ಲಿ ರಂಜನಿ

ಈ ಕುರಿತು ಫೋಟೋ ಶೇರ್ ಮಾಡಿದ ರಂಜನಿ ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿ, ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ ಎಂದು ಬರೆದು ಕೊಂಡಿದ್ದಾರೆ. 
 

Image credits: social media

ಮೇಘಧೂತ ಕಾವ್ಯ

ಅಲ್ಲದೇ  ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರೋ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!  

Image credits: social media

ಮಹಾಕಾಲೇಶ್ವರ ದರ್ಶನ

ಮಹಾಕಾಲೇಶ್ವರ ದರ್ಶನ ಮಾಡಿ, ನದಿಯಲ್ಲಿ ಆರತಿ ಬೆಳಗುವ ಮೂಲಕ ದೈವಿಕ ಅನುಭವ ಪಡೆದಿದ್ದಾರೆ. 

Image credits: social media

ಥ್ಯಾಂಕ್ಸ್ ಎಂದ ಫ್ಯಾನ್ಸ್

ರಂಜನಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಾವಿರಾರು ಜನ ಲೈಕ್ ಮಾಡಿದ್ದು, ನಿಮ್ಮ ಜೊತೆಗೆ ನಮಗೂ ಉಜ್ಜಯಿನಿ ದರ್ಶನ ಮಾಡಿಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

Image credits: social media

ಬಹುಮುಖ ಪ್ರತಿಭೆ

ಇನ್ನು ರಂಜನಿ ರಾಘವನ್  ನಟಿ ಜೊತೆಗೆ ಗಾಯಕಿಯೂ ಆಗಿದ್ದು,  ಜೊತೆಗೆ ಸಾಹಿತ್ಯದ ಕಡೆಗೂ ಒಲವು ತೋರಿಸಿದ್ದು, ಈಗಾಗಲೇ ಎರಡು ಪುಸ್ತಕಗಳನ್ನು  ಬರೆದಿದ್ದಾರೆ. 

Image credits: social media

ಮತ್ತೆ ಸೀರಿಯಲ್‌ಗೆ?

ಸದ್ಯ ತಮ್ಮ ಬರವಣಿಗೆ ಮತ್ತು ನಟನೆಯಿಂದ ದೂರ ಉಳಿದಿರುವ ರಂಜನಿಯವರನ್ನು ಅಭಿಮಾನಿಗಳು ಮತ್ತೆ ಬೇಗ ಸೀರಿಯಲ್‌ಗಳಲ್ಲಿ ಕಾಣಿಸುವಂತೆ, ಜೊತೆಗೆ ಮತ್ತೆ ಪುಸ್ತಕ ಬರೆಯುವಂತೆ ಕೇಳಿಕೊಂಡಿದ್ದಾರೆ. 

Image credits: our own
Find Next One