ಮೂರು ವರ್ಷದ ವರ್ಚುವಲ್ ಪ್ರಣಯದ ಪಾರಾಕಾಷ್ಠೆ ಇದು. ಇನ್ಸ್ಟಗ್ರಾಮ್ನಲ್ಲಿ ಪರಿಚಯವಾದವಳೊಂದಿಗೆ ಪ್ರೀತಿ ಪ್ರೇಮ ನಂಬಿ. ಮದುವೆಗೆ ಬಂದಿದ್ದ ದುಬೈ ವರನಿಗೆ ಶಾಕ್ ಕಾದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಪ್ರೇಮ, ಮದುವೆಯವರೆಗೂ ಬಂದು ನಿಂತಿತ್ತು. ಆದರೆ, ವರ ಬಂದಾಗ ವಧುವಿನ ಕುಟುಂಬವೇ ನಾಪತ್ತೆಯಾಗಿತ್ತು.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಜಲಂಧರ್ನ ದೀಪಕ್ಗೆ ಸಾಮಾಜಿಕ ಜಾಲತಾಣದಲ್ಲಿ ಮೋಗಾದ ಮನಪ್ರೀತ್ ಕೌರ್ ಪರಿಚಯವಾಗಿ ಪ್ರೇಮಾಂಕುರವಾಯಿತು.
ಮೂರು ವರ್ಷಗಳ ಕಾಲ ಇಬ್ಬರೂ ಫೋನ್ನಲ್ಲಿ ಮಾತನಾಡುತ್ತಿದ್ದರು. ಆದರೆ, ಮನಪ್ರೀತ್ ತನ್ನ ಫೋಟೋವನ್ನು ದೀಪಕ್ಗೆ ತೋರಿಸಿರಲಿಲ್ಲ.
ದೀಪಕ್ ಮದುವೆಗೆಂದು ಮೋಗಾಕ್ಕೆ ಬಂದಾಗ ವಧು ಮತ್ತು ಮದುವೆ ಮಂಟಪವೇ ಇರಲಿಲ್ಲ.
ದೀಪಕ್ ಜೊತೆ ಬಂದವರೆಲ್ಲರೂ ಮೋಸ ಹೋದಂತೆ ಭಾಸವಾಯಿತು. ಮದುವೆ ನಿಶ್ಚಯವಾಗಿದ್ದ ಮದುವೆ ಮಂಟಪವೇ ಅಲ್ಲಿರಲಿಲ್ಲ.
ದೀಪಕ್ ಫೋನ್ ಮಾಡಿದಾಗ ಮನಪ್ರೀತ್ ನಾವು ಬರುತ್ತೇವೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದಳು.
ದೀಪಕ್ ಮತ್ತು ಮನಪ್ರೀತ್ ಮದುವೆಗೆ ಒಪ್ಪಿಕೊಂಡಿದ್ದರು. ಮದುವೆಯ ದಿನ ಯುವತಿ ಮತ್ತು ಆಕೆಯ ಕುಟುಂಬ ನಾಪತ್ತೆಯಾಯಿತು.
ಮದುವೆಗೆ ಯುವತಿಯೇ ಒಪ್ಪಿಕೊಂಡಿದ್ದಳು. ನಾವು ಬಹಳ ಖರ್ಚು ಮಾಡಿದ್ದೇವೆ, ನಮಗೆ ನ್ಯಾಯ ಬೇಕು ಎಂದು ದೀಪಕ್ ತಂದೆ ಹೇಳಿದ್ದಾರೆ.
ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯುವತಿಯ ಫೋನ್ ಸಂಖ್ಯೆಯನ್ನು ಪತ್ತೆ ಹಚ್ಚುತ್ತಿದ್ದಾರೆ.
ಧರ್ಮಗ್ರಂಥಗಳ ಪ್ರಕಾರ ಈ ಮೂರು ದಿನಗಳು ಪತಿಯಿಂದ ದೂರವಿರಬೇಕು, ಮಾತನಾಡಬಾರದು ಏಕೆ?
Vidit Gujrathi: ಚದುರಂಗದ ಸಿಪಾಯಿಯ ಬಾಳಿಗೆ ಜೊತೆಯಾದ ವೈದ್ಯೆ!
ಇಲ್ಲಿ ಪುರುಷರಿಗೆ ಎರಡು ಮದ್ವೆ ಕಡ್ಡಾಯ: ತಪ್ಪಿದ್ರೆ ಜೀವಾವಧಿ ಶಿಕ್ಷೆ ಪಕ್ಕಾ
ಬ್ರೇಕಪ್ನಿಂದ ಹೊರಬರಲು ಬ್ರೇಕಪ್ ಆದವರೇ ನೀಡಿದ ಬೆಸ್ಟ್ ಸಲಹೆಗಳಿವು