Kannada

ಡಿಜಿಟಲ್ ಅರೆಸ್ಟ್ ಹಗರಣ ತಪ್ಪಿಸಲು ಸಲಹೆಗಳು

ಡಿಜಿಟಲ್ ಅರೆಸ್ಟ್‌ ಹಗರಣ ಗುರುತಿಸುವುದು ಹೇಗೆ ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಬಗ್ಗೆ ಇಲ್ಲಿದೆ 8 ಮಾರ್ಗಗಳು

Kannada

ಡಿಜಿಟಲ್ ಅರೆಸ್ಟ್ ಹಗರಣ

ಡಿಜಿಟಲ್ ಬಂಧನ ಹಗರಣವು ಜನರನ್ನು ಕಾನೂನು ಕ್ರಮದ ಭಯದಿಂದ ಹಣ ವರ್ಗಾವಣೆ ಮಾಡುವಂತೆ ಬೆದರಿಸುವ ಹೊಸ ಸೈಬರ್ ಅಪರಾಧವಾಗಿದೆ. ಇದರಿಂದ ಪಾರಾಗೋದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Kannada

ಮಹಾನಗರಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಗರಣ

ಡಿಜಿಟಲ್ ಬಂಧನ ಹಗರಣವು ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಿ ಹೆಚ್ಚಾಗಿದೆ. ಇದು ಒಂದು ಹೊಸ ರೀತಿಯ ಸೈಬರ್ ವಂಚನೆಯಾಗಿದ್ದು, ಇದರಲ್ಲಿ ಜನರಿಗೆ ಕಾನೂನು ಕ್ರಮದ ಭಯವನ್ನು ತೋರಿಸಿ ಹಣ ವಸೂಲಿ ಮಾಡಲಾಗುತ್ತದೆ.

Kannada

ವಂಚನೆ ಹೇಗೆ ಮಾಡುತ್ತಾರೆ?

ಈ ವಂಚನೆಯಲ್ಲಿ 1 ಫೋನ್ ಕರೆ, ಇಮೇಲ್ ಅಥವಾ ಸಂದೇಶ ಬರುತ್ತದೆ, ಇದರಲ್ಲಿ ಅವರು ನೀವು ಅಕ್ರಮ ಚಟುವಟಿ, ಹಣ ವರ್ಗಾವಣೆಯಂತಹ ಅಪರಾಧಗಳ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ ಎಂದು ಸುಳ್ಳು ಹೇಳಿ ಬೆದರಿಸುತ್ತಾರೆ.

Kannada

ಬಂಧನದ ಬೆದರಿಕೆ ಹಾಕಿ ಲಕ್ಷಾಂತರ ರೂ.ವಸೂಲಿ

ವಂಚಕರು ತಾವು ಅಧಿಕಾರಿಗಳೆಂದು ಹೇಳಿ ಒತ್ತಡ ಹೇರುತ್ತಾರೆ, ತಕ್ಷಣ ಪ್ರತಿಕ್ರಿಯಿಸದಿದ್ದರೆ ಬಂಧಿಸಲಾಗುತ್ತದೆ, ಕಾನೂನು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸುತ್ತಾರೆ. ಇದರಿಂದ ಸಂತ್ರಸ್ತರು ಭಯಪಡುತ್ತಾರೆ

Kannada

ನೀವೇನು ಮಾಡಬೇಕು?

ತಮ್ಮನ್ನು ಅಧಿಕಾರಿಗಳೆಂದು ಹೇಳಿಕೊಂಡು ಕರೆ, ಇಮೇಲ್ ಅಥವಾ ಸಂದೇಶಗಳು ಬಂದರೆ ಎಚ್ಚರವಾಗಿರಿ.

Kannada

ಇದನ್ನು ಗಮನದಲ್ಲಿಡಿ

ನಿಜವಾದ ಕಾನೂನು ಜಾರಿ ಅಧಿಕಾರಿಗಳು ನಿಮ್ಮ ಬ್ಯಾಂಕಿಂಗ್ ಮಾಹಿತಿ ಅಥವಾ ಪಾವತಿಯನ್ನು ಎಂದಿಗೂ ಕೇಳುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

Kannada

ಅಪರಿಚಿತರ ಕರೆಯಿಂದ ಗಾಬರಿಯಾಗಬೇಡಿ

ಸೈಬರ್ ಅಪರಾಧಿಗಳು ಆಗಾಗ ತಕ್ಷಣದ ಪ್ರತಿಕ್ರಿಯೆಗಾಗಿ ಬೆದರಿಸಲು ಭಯಾನಕ ಭಾಷೆ ಬಳಸುತ್ತಾರೆ. ಇದರಿಂದ ಹೆದರಬೇಡಿ. 

Kannada

ಆತುರದ ನಿರ್ಧಾರಗಳನ್ನು ತಪ್ಪಿಸಿ

ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಯಾವುದೇ ಕರೆಯ ಬಗ್ಗೆ ನಿಮಗೆ ಸಂದೇಹವಿದ್ದರೆ, ನೇರವಾಗಿ ಆ ಸಂಸ್ಥೆಯನ್ನು ಸಂಪರ್ಕಿಸಿ ಅವರ ಗುರುತನ್ನು ಪರಿಶೀಲಿಸಿ.

Kannada

ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ

ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ ಮತ್ತು ಅಪರಿಚಿತ ಸಂಖ್ಯೆಗಳಿಗೆ ಸೂಕ್ಷ್ಮ ವಿವರಗಳನ್ನು ನೀಡಬೇಡಿ. ಸರ್ಕಾರಿ ಸಂಸ್ಥೆಗಳು WhatsApp ಅಥವಾ Skype ಮೂಲಕ ಅಧಿಕೃತ ಸಂವಹನ ನಡೆಸುವುದಿಲ್ಲ.

Kannada

ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿ

ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ನೀವು ಭಾವಿಸಿದರೆ, ತಕ್ಷಣ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಅಪರಾಧ ವಿಭಾಗಕ್ಕೆ ತಿಳಿಸಿ.

ಇರಾನ್ ದಾಳಿಗೆ ಪ್ರತಿಕಾರ ತೀರಿಸಿಕೊಂಡ ಇಸ್ರೇಲ್! ಸೇನಾ ನೆಲೆಗಳ ಮೇಲೆ ಐಡಿಎಫ್ ದಾಳಿ

ಕೃಷ್ಣಮೃಗ ಬೇಟೆ ಪ್ರಕರಣ; ಲಾರೆನ್ಸ್ ಬಿಷ್ಣೋಯ್ ಸೋದರ ಸಂಬಂಧ ಸ್ಫೋಟಕ ಹೇಳಿಕೆ!

ರೈಲಿನಲ್ಲಿ ಪ್ರಯಾಣಿಸುವವರಿಗೆ ಇಷ್ಟೆಲ್ಲಾ ಉಚಿತ ಸೌಲಭ್ಯಗಳು ಸಿಗುತ್ತವೆಯಂತೆ!

ಅಮಿತ್ ಶಾ ಬಗ್ಗೆ ಗೊತ್ತಿರದ 10 ಸಂಗತಿಗಳು