Food
ಬಿಸಿ ಆಹಾರವನ್ನು ತಮೋಗುಣಿಗೆ ಹೋಲಿಸಲಾಗುತ್ತದೆ. ಆದ್ದರಿಂದ ಬಿಸಿ ಆಹಾರ ದೇವರಿಗೆ ನೈವೇದ್ಯ ಮಾಡಿ, ಅದನ್ನು ಪ್ರಸಾದದ ರೂಪದಲ್ಲಿ ಜನರು ಸೇವಿಸಬೇಕು ಎಂದು ಪ್ರೇಮಾನಂದ ಗುರೂಜಿ ಹೇಳಿದ್ದಾರೆ.
‘ಹೊಗೆ ಬರುತ್ತಿರುವ ಬಿಸಿ-ಬಿಸಿಯಾದ ಆಹಾರವನ್ನು ತಿನ್ನಬಾರದು ಏಕೆಂದರೆ ಅಂತಹ ಆಹಾರವನ್ನು ತಮೋಗುಣಿ ಎನ್ನುತ್ತಾರೆ. ತಮೋಗುಣಿ ಎಂದರೆ ಕತ್ತಲೆ, ಅಜ್ಞಾನ, ಜಡತ್ವ ಮತ್ತು ಮಂದತೆಯ ಗುಣ ಎಂಬರ್ಥ ಬರುತ್ತದೆ.
‘ಆಹಾರ ತಯಾರಾದ ನಂತರ ಮೊದಲು ಅದನ್ನು ದೇವರಿಗೆ ಅರ್ಪಿಸಿ. ಸ್ವಲ್ಪ ಸಮಯದ ನಂತರ ಅದನ್ನು ಪ್ರಸಾದವೆಂದು ತಿಳಿದು ಸೇವಿಸಿ. ಹೀಗೆ ಮಾಡುವುದರಿಂದ ದೇವತೆಗಳ ಕೃಪೆಯೂ ನಿಮ್ಮ ಮೇಲೆ ಇರುತ್ತದೆ.
ಬಿಸಿ ಆಹಾರ ಸೇವನೆಯಿಂದ ವೈಜ್ಞಾನಿಕವಾಗಿ ಜೀರ್ಣಕ್ರಿಯೆ ಸಮಸ್ಯೆ, ವಿಟಮಿನ್ಸ್ ಮತ್ತು ಖನಿಜಗಳ ಕೊರತೆ, ರೋಗ ನಿರೋಧಕ ಶಕ್ತಿ ಕುಂದುವುದು ಹಾಗೂ ಮಾನಸಿಕ ಅನಾರೋಗ್ಯ ಕಾಡುತ್ತದೆ.
ಆಹಾರದಲ್ಲಿ ಮೆಣಸಿನಕಾಯಿ, ಹುಳಿ, ಸಿಹಿ ಆಹಾರವನ್ನು ತಿನ್ನಬಾರದು. ಜೊತೆಗೆ ಎಣ್ಣೆಯಲ್ಲಿ ಕರಿದ ಆಹಾರ ಸೇವಿಸಬಾರದು. ಇಂತಹ ಆಹಾರವನ್ನು ತಿನ್ನುವುದರಿಂದ ಮನಸ್ಸಿನಲ್ಲಿ ತಪ್ಪು ಆಲೋಚನೆಗಳು ಬರಬಹುದು.
ನೀವು ಸಾಧ್ಯವಾದರೆ ಹೊಟ್ಟೆ ತುಂಬಾ ಊಟ ಮಾಡಬೇಡಿ. 1 ರೊಟ್ಟಿ ತಿನ್ನುವಷ್ಟು ಹೊಟ್ಟೆ ಖಾಲಿ ಇದ್ದಾಗಲೇ ಊಟ ಮುಗಿಸಿ. ವಾರದಲ್ಲಿ ಒಮ್ಮೆಯಾದರೂ ಉಪವಾಸ ಮಾಡಲು ಪ್ರಯತ್ನಿಸಿ.