Kannada

ತರಕಾರಿ ಹಾಕಿರೋ ತಾಲಿಪಟ್ಟು ಅಥವಾ ಒಡಪೆ ಎಂಥವ್ರ ಬಾಯಲ್ಲೂ ನೀರು ತರಿಸುತ್ತೆ!

Kannada

ತರಕಾರಿ ಹಾಕಿದ ತಿಂಡಿ

ಮಕ್ಕಳು ತರಕಾರಿ ತಿನ್ನೋದಿಲ್ಲ ಎನ್ನುವ ದೂರು ಇದ್ದೇ ಇರುತ್ತದೆ. ಆದರೆ ಎಲ್ಲ ತರಕಾರಿ ಹಾಕಿದ ಈ ತಿಂಡಿ ಮಾತ್ರ ಎಂಥವರಿಗೂ ಕೂಡ ರುಚಿ ಆಗುವುದು.

Image credits: Our own
Kannada

ಏನು ಬೇಕು?

ತಾಳಿಪೀಟ್‌ ಅಥವಾ ಒಡಪೆ, ತಾಲಿಪಟ್ಟು ಎಂದು ಕರೆಯುವ ಈ ತಿಂಡಿಗೆ ತರಕಾರಿ ಹಾಗೂ ಅಕ್ಕಿ ಹಿಟ್ಟು, ಮೊಸರು ಬೇಕು.

Image credits: Our own
Kannada

ಸಣ್ಣದಾಗಿ ಹೆಚ್ಚಿದ ತರಕಾರಿ

ಕುತ್ತುಂಬರಿ ಸೊಪ್ಪು, ಈರುಳ್ಳಿ, ಸವತೆಕಾಯಿ, ಹಸಿಮೆಣಸು, ಟೊಮ್ಯಾಟೋವನ್ನು ಸಣ್ಣದಾಗಿ ಪಲ್ಯಕ್ಕೆ ಹಾಕೋ ಥರ ಕಟ್‌ ಮಾಡ್ಕೊಳ್ಳಿ.

Image credits: Our own
Kannada

ಎಲ್ಲವನ್ನು ಮಿಕ್ಸ್‌ ಮಾಡಿ

ಕಟ್‌ ಮಾಡ್ಕೊಂಡ ಈ ತರಕಾರಿಗೆ ಸ್ವಲ್ಪ ಉಪ್ಪು, ಅರಿಷಿಣ, ಸ್ವಲ್ಪ ಖಾರದಪುಡಿ, ಮೊಸರು ಹಾಕಿ, ಅಕ್ಕಿ ಬೇಕಾದಷ್ಟು ಹಿಟ್ಟು ಹಾಕಿ ಕಲಸಿಕೊಳ್ಳಿ. ಇದಕ್ಕೆ ನೀರು ಹಾಕುವುದು ಬೇಡ.

Image credits: Our own
Kannada

ನೀರು ಬೇಡ

ಸವತೆಕಾಯಿಯಲ್ಲೂ ನಿರು ಇರುವುದು. ಹೀಗಾಗಿ ಎಕ್ಸ್ಟ್ರಾ ನೀರು ಬೇಡ. ಇವುಗಳೆಲ್ಲವನ್ನು ಮಿಕ್ಸ್‌ ಮಾಡಿ ಹದವಾಗಿ ಕಲಸಿ, ಹಿಟ್ಟು ಗಟ್ಟಿ ಇರಬೇಕು.

Image credits: Our own
Kannada

ಎಷ್ಟು ಸಮಯ ಬೇಕು?

ಈ ಹಿಟ್ಟು ಕಲಸಿ ಅರ್ಧ ದಿನ ಅಥವಾ ಒಂದು ರಾತ್ರಿ ಕಳೆದರೆ ತುಂಬ ಚೆನ್ನ. ಆಮೇಲೆ ಬಾಳೆಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ ಅದರ ಮೇಲೆ ರೊಟ್ಟಿ ತಟ್ಟುವ ಹಾಗೆ ಈ ಹಿಟ್ಟನ್ನು ತಟ್ಟಿ. ಪ್ಲೇಟ್‌ ಮೇಲೆಯೂ ಇದನ್ನು ಮಾಡಬಹುದು.

Image credits: meta ai
Kannada

ರೊಟ್ಟಿ ಥರ ತಟ್ಟಿ!

ರೊಟ್ಟಿ ಅಷ್ಟು ತೆಳ್ಳಗೆ ಆಗೋದು ಬೇಡ, ಆದರೆ ತುಂಬ ದಪ್ಪವೂ ಬೇಡ. ಬೇಯಲು ಅನುಕೂಲ ಆಗುವಂತೆ ವೃತ್ತಾಕಾರದಲ್ಲಿ ಹಚ್ಚಿ, ಅದರ ಮಧ್ಯೆ ಸಣ್ಣದಾಗಿ ಮೂರು ಕಡೆ ತೂತು ಮಾಡಿ

Image credits: meta ai
Kannada

ಒಪಡೆ ರೆಡಿ!

ಕಾವಲಿ ಮೇಲೆ ತಾಲಿಪಟ್ಟು ಹಾಕಿ, ಅದಕ್ಕೆ ಎಣ್ಣೆ ಅಥವಾ ಬೆಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿದರೆ ಸವಿ ಸವಿಯಾಗಿ ತಿನ್ನಲು ತಾಳಿಪೀಟು ರೆಡಿ.

Image credits: meta ai
Kannada

ಚಟ್ನಿ ಬೇಕು

ತಾಲಿಪಟ್ಟುಗೆ ಚಟ್ನಿ ಅಥವಾ ಬೆಲ್ಲ ಇದ್ದರೆ ತುಂಬ ರುಚಿಯಾಗಿರುತ್ತದೆ. 

Image credits: meta ai

ಒಂದೇ ವಾರದಲ್ಲಿ ಕುಂಡದಲ್ಲಿ ಕರಿಬೇವಿನ ಗಿಡ ಬೆಳೆಸುವುದು ಹೇಗೆ? ಇಷ್ಟು ಮಾಡಿ ಸಾಕು!

ಚಿಯಾ ಬೀಜ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಅತಿಯಾದ್ರೆ ಈ ಸಮಸ್ಯೆಗಳು ಪಕ್ಕಾ!

ಪುರಿ, ಚಪಾತಿ, ದೋಸೆಗೆ ತಯಾರಿಸಿ ಬಾಯಲ್ಲಿ ನೀರೂರಿಸುವ ಕೆಂಪು ಚಟ್ನಿ!

ಹಣ್ಣು ತರಕಾರಿಗಳು ಹೆಚ್ಚು ದಿನ ತಾಜಾ ಇರಲು ಇಲ್ಲಿದೆ ಟಿಪ್ಸ್, ಈ ರೀತಿಯಾಗಿ ಇಡಿ