Kannada

ಖಿಚಡಿಗೆ ಹೇಳಿ ಬೈ

ಸಿಹಿ ಹಾಗೂ ಖಾರದ ಪೊಂಗಲ್ ಮಾಡುವ ಮೂಲಕ ಮಕರ ಸಂಕ್ರಾಂತಿಯನ್ನು ಸಂಭ್ರಮ ಸಡಗರದಿಂದ ನಮ್ಮ ರಾಜ್ಯದಲ್ಲಿ ಆಚರಿಸಲಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಚರ್ಮಕ್ಕೆ ತೈಲಾಂಶ ಹೆಚ್ಚಿಸುವ ಎಳ್ಳು ಬೆಲ್ಲ ಸವಿಯೋದು ವಿಶೇಷ.

Kannada

ಸಂಕ್ರಾಂತಿ ಯಾವತ್ತು?

ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೋ, 15ಕ್ಕೋ ಎಂಬ ಗೊಂದಲವಿದೆ. ಕೆಲವೆಡೆ ಕೊಟ್ಟಿರುವ ರಜೆ ನೋಡಿದರೆ ಇದು ಗೊತ್ತಾಗುತ್ತದೆ. ಆದರೆ, ಅಧಿಕ ವರ್ಷದಲ್ಲಿ ಮಾತ್ರ ಸಂಕ್ರಾಂತಿ 15ಕ್ಕೆ ಬರುತ್ತದೆ.

Image credits: Getty
Kannada

ಖಿಚಡಿ ಅಥವಾ ಪೊಂಗಲ್ ತಿನ್ನೋದೇ ಹಬ್ಬ

ಸಂಕ್ರಾಂತಿಗೆ ಸಂಬಂಧಿಸಿದ ಅನೇಕ ಸಂಪ್ರದಾಯಗಳಿವೆ, ಅವುಗಳಲ್ಲಿ ಒಂದು ಅಕ್ಕಿಯಿಂದ ಮಾಡಿದ ಖಿಚಡಿ  ಅಥವಾ ಪೊಂಗಲ್ ಸೇವಿಸುವುದು. ಉತ್ತರ ಪ್ರದೇಶದಲ್ಲಿ ಈ ಹಬ್ಬವನ್ನು ಖಿಚಡಿ ಎಂದೇ ಆಚರಿಸುತ್ತಾರೆ.

Image credits: Getty
Kannada

ಅಷ್ಟಕ್ಕೂ ಈ ಖಿಚಡಿ ತಿನ್ನೋದೇಕೆ?

ಮಕರ ಸಂಕ್ರಾಂತಿಯಂದು ಬೇಳೆ, ಅಕ್ಕಿ ಮತ್ತು ತರಕಾರಿ ಬೆರೆಸಿ ಖಿಚಡಿ ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಚಳಿಗಾಲವಿರುತ್ತದೆ. ಈ ಋತುವಿನಲ್ಲಿ ಖಿಚಡಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ.

Image credits: Getty
Kannada

ಖಿಚಡಿ ದಾನಕ್ಕೂ ಇದೆ ಮಹತ್ವ

ಮಕರ ಸಂಕ್ರಾಂತಿಯಂದು ಖಿಚಡಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಈ ದಿನ ಜನರು ಹಸಿ ಅಕ್ಕಿ ಮತ್ತು ಬೇಳೆಯನ್ನು ಬೆರೆಸಿ ಬಡವರಿಗೆ ದಾನ ಮಾಡುತ್ತಾರೆ. ಕೆಲವರು ಬೇಯಿಸಿದ ಖಿಚಡಿಯನ್ನು ಸಹ ಬಡವರಿಗೆ ನೀಡುತ್ತಾರೆ.

Image credits: Getty
Kannada

ಈ ಮಕರ ಸಂಕ್ರಾಂತಿಯಂದು ಖಿಚಡಿ ಏಕೆ ತಿನ್ನಬಾರದು?

ಈ ಬಾರಿ ಮಕರ ಸಂಕ್ರಾಂತಿಯಂದು ಷಟ್ತಿಲಾ ಏಕಾದಶಿಯ ಸಂಯೋಗವಿದೆ. ಹಿಂದೂ ನಂಬಿಕೆಗಳ ಪ್ರಕಾರ, ಏಕಾದಶಿಯಂದು ಅಕ್ಕಿಯನ್ನು ತಿನ್ನಬಾರದು, ಹಾಗೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ.

Image credits: Getty
Kannada

ಏಕಾದಶಿಯಂದು ಅಕ್ಕಿಯನ್ನೇಕೆ ತಿನ್ನುವುದಿಲ್ಲ?

ಅಕ್ಕಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಮನಸ್ಸಿನಲ್ಲಿ ಚಂಚಲತೆ ಉಂಟಾಗುತ್ತದೆ, ಇದು ಹಲವು ರೀತಿಯ ವಿಕಾರಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಏಕಾದಶಿಯಂದು ಅಕ್ಕಿ ತಿನ್ನುವುದನ್ನು ನಿಷೇಧಿಸಲಾಗಿದೆ.

Image credits: Getty

ದಿನಕ್ಕೊಂದು ತುಂಡು ಶುಂಠಿ ತಿಂದರೆ ಈ 7 ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!

Apple: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಏನೆಲ್ಲ ಲಾಭಗಳಿವೆ ಗೊತ್ತಾ?

ಎಷ್ಟು ನಿಮಿಷ ಮೊಟ್ಟೆಯನ್ನು ಬೇಯಿಸಬೇಕು, ಯಾವುದು ತಿನ್ನಲು ಯೋಗ್ಯ,ಇಲ್ಲಿದೆ ಟಿಪ್ಸ್

ಮಂಗಳೂರು ಫೇಮಸ್ ಫುಡ್ ಚಿಕನ್‌ ಘೀ ರೋಸ್ಟ್ ನ ಅಸಲಿ ರುಚಿಯ ರಹಸ್ಯವಿದು!