ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವು ಒಂದು ಪ್ರಮುಖ ಭಾಗ. ಆದರೆ ವಾಸ್ತು ಪ್ರಕಾರ, ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು. ಏಕೆ?
Kannada
ಬಡತನಕ್ಕೆ ದಾರಿ ಮಾಡಿಕೊಡುತ್ತದೆ
ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿದರೆ ನೀವು ಬಡತನವನ್ನು ಎದುರಿಸಬೇಕಾಗುತ್ತದೆ. ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದು.
Kannada
ಲಕ್ಷ್ಮೀದೇವಿ ದೂರವಾಗುತ್ತಾಳೆ
ನೀವು ಪ್ರತಿದಿನ ಹಾಸಿಗೆಯ ಮೇಲೆ ಕುಳಿತು ಊಟ ಮಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಹಣದ ಕೊರತೆ ಉಂಟಾಗಬಹುದು. ವಾಸ್ತು ಪ್ರಕಾರ, ಮಲಗುವ ಕೋಣೆ ಇರುವುದು ಕೇವಲ ಮಲಗಲು ಮಾತ್ರ.
Kannada
ಮನೆಯಲ್ಲಿ ಅಶಾಂತಿ
ಹಾಸಿಗೆಯ ಮೇಲೆ ತಿಂದರೆ ನಿಮ್ಮ ಮನೆಯಲ್ಲಿ ಶಾಂತಿ ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಅಭ್ಯಾಸ ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ.
Kannada
ಸಾಲದ ಹೊರೆ ಹೆಚ್ಚಾಗುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ತಿನ್ನುವವರು ವಿಪರೀತವಾಗಿ ಸಾಲ ಮಾಡುತ್ತಾರೆ. ಇವರಿಗೆ ಯಾವಾಗಲೂ ಸಾಲದ ಸಮಸ್ಯೆ ಇರುತ್ತದೆ. ಇದು ಬಹಳ ದುಃಖಕ್ಕೆ ಕಾರಣವಾಗುತ್ತದೆ.
Kannada
ನಿದ್ರಾಹೀನತೆ
ಮಲಗುವ ಕೋಣೆಯಲ್ಲಿ ತಿನ್ನುವವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅಷ್ಟೇ ಅಲ್ಲ ಕೆಲವೊಮ್ಮೆ ಆಹಾರದ ವಾಸನೆಗೆ ಮನೆಯೊಳಗೆ ಕೀಟಗಳು ಬರುತ್ತವೆ.
Kannada
ಆಹಾರ
ಶುಚಿಯಾದ ಸ್ಥಳದಲ್ಲಿ ಊಟ ಮಡೋದರಿಂದ ಅನ್ನಪೂರ್ಣ ದೇವಿಯನ್ನು ಗೌರವಿಸಿದಂತಾಗುತ್ತದೆ. ಇದರಿಂದ ಮನೆಯಲ್ಲಿನ ದಾಸ್ತಾನು ಕಡಿಮೆಯಾಗುವುದಿಲ್ಲ.