Kannada

ಕೇದಾರನಾಥ

ಉತ್ತರಾಖಂಡದ ಪವಿತ್ರವಾದ ದೇವಾಲಯಗಳಲ್ಲಿ ಕೇದಾರನಾಥ ಕೂಡ ಒಂದು. ಇದು ಹಿಂದೂಗಳ ಪುಣ್ಯಕ್ಷೇತ್ರ. ಇಲ್ಲಿ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದು, 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾಗಿದೆ.
 

Kannada

ಬದರಿನಾಥ್‌

ಉತ್ತರಾಖಂಡದ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಬದರಿನಾಥ್‌ ಕೂಡ ಒಂದು. ಇಲ್ಲಿ ಮಹಾವಿಷ್ಣುವನ್ನು ಆರಾಧಿಸಲಾಗುತ್ತದೆ. ಇದು ಪ್ರಮುಖ ಚಾರ್ ಧಾಮ್‌ ಯಾತ್ರೆ ಅಥವಾ ಚೋಟಾ ಚಾರ್ ಧಾಮ್‌ ಯಾತ್ರೆಗಳಲ್ಲಿ ಒಂದು.

Image credits: social media
Kannada

ಜಾಗೇಶ್ವರ ಧಾಮ್

ಇದು ಒಂದು ರಮಣೀಯ ಮತ್ತು ಶಾಂತ ಸ್ಥಳವಾಗಿದೆ. ಈ ಸ್ಥಳವು ಸುಮಾರು 124 ಹಿಂದೂ ದೇವಾಲಯಗಳ ಗುಂಪಿಗೆ ಜನಪ್ರಿಯವಾಗಿದೆ. ಇದು 1870 ಮೀಟರ್ ಎತ್ತರದಲ್ಲಿ ಇದೆ.
 

Image credits: social media
Kannada

ಗಂಗೋತ್ರಿ ಧಾಮ್

ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದ ನಾಲ್ಕು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾಗೀರಥಿ ನದಿಯ ದಡದಲ್ಲಿದೆ ಮತ್ತು ಇದು ಭಾರತದ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದು.

Image credits: social media
Kannada

ಯಮುನೋತ್ರಿ ಧಾಮ್

ಯಮುನಾ ನದಿಯ ಮೂಲ ಎಂದು ಕರೆಯಲ್ಪಡುವ ಯಮುನೋತ್ರಿ ಧಾಮ್‌ನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ಇದು ಉತ್ತರಕಾಶಿಯಿಂದ ಕೇವಲ 129 ಕಿಮೀ ದೂರದಲ್ಲಿದೆ.

Image credits: social media
Kannada

ತುಂಗನಾಥ್ ಧಾಮ್

ಇದು ಹಿಂದೂ ಧರ್ಮದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇದು 3,680 ಮೀಟರ್ ಎತ್ತರದಲ್ಲಿದೆ. ಈ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ ಕೇದಾರ ದೇವಾಲಯಗಳಲ್ಲಿ ಅತಿ ಎತ್ತರದ ದೇವಾಲಯವಾಗಿದೆ.

Image credits: social media
Kannada

ನೀಲಕಂಠ ಮಹಾದೇವ ದೇವಾಲಯ

ಇದು ಶಿವನ ಅಂಶವಾದ ನೀಲಕಂಠನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಋಷಿಕೇಶದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. 

Image credits: social media
Kannada

ಧರಿದೇವಿ ಮಾತಾ ದೇವಸ್ಥಾನ

ಈ ದೇವಾಲಯವು ಶ್ರೀನಗರ ಮತ್ತು ರುದ್ರಪ್ರಯಾಗ ನಡುವೆ ಅಲಕನಂದಾ ನದಿಯ ದಡದಲ್ಲಿದೆ. ಈ ದೇವಿಯನ್ನು ಉತ್ತರಾಖಂಡದಲ್ಲಿರುವ ಚಾರ್ ಧಾಮ್‌ಗಳ ರಕ್ಷಕಿ ಎಂದು ಪರಿಗಣಿಸಲಾಗಿದೆ.

Image credits: social media
Kannada

ಗಿರಿಜಾ ದೇವಿ ಮಂದಿರ

ಇದು ಉತ್ತರಾಖಂಡದ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಇದು ಅತ್ಯಂತ ಪವಿತ್ರ ಸ್ಥಳವಾಗಿದೆ. ಗಿರಿಜಾ ದೇವಿಯು ಹಿಮಾಲಯ ದೇವನ ಮಗಳು ಮತ್ತು ಶಿವನ ಪತ್ನಿಯಾಗಿದ್ದು, ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ.

Image credits: social media
Kannada

ಚಿತಾಯ್ ಗೋಲು ದೇವತಾ ಮಂದಿರ

ಉತ್ತರ ಖಂಡದ ಪ್ರಮುಖ ದೇವಾಲಯಗಳಲ್ಲಿ ಚಿತಾಯ್ ಗೋಲು ದೇವತಾ ಮಂದಿರ ಕೂಡ ಒಂದು. ಸ್ಥಳೀಯರು ಗೋಲು ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿಗೆ ಅನೇಕ ಭಕ್ತರು ಭೇಟಿ ನೀಡುತ್ತಾರೆ.

Image credits: social media

ಸಾವಿಗೂ ಮುಂಚೆ ಸಿಗುತ್ತೆ ಮುನ್ಸೂಚನೆ; ಈ 6 ಲಕ್ಷ್ಮಣಗಳು ಕಂಡರೆ 6 ತಿಂಗಳಲ್ಲಿ ಮರಣ

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

ಈ 5 ದೇವಾಲಯಗಳಲ್ಲಿ ಪುರುಷರಿಗೆ ನೋ ಎಂಟ್ರಿ; ಕಾರಣ ಏನು?

ಇಸ್ಲಾಮಿಕ್‌ ದೇಶಗಳಲ್ಲಿವೆ 5 ಪ್ರಸಿದ್ಧ ಶಿವನ ಪುರಾತನ ದೇವಾಲಯಗಳು