ರಾಮಾಯಣದಲ್ಲಿ ಕುಂಭಕರ್ಣ ಎಂದರೆ ನೆನಪಾಗುವುದೇ ಆತನ ದೀರ್ಘ ನಿದ್ರೆ ಮತ್ತು ಅಪಾರ ಆಹಾರ ಸೇವನೆ. ಆದರೆ ಆತನ ನಿದ್ರೆಯ ಹಿಂದೆ ಒಂದು ದೊಡ್ಡ ರಹಸ್ಯವೇ ಅಡಗಿದೆ!
ರಾವಣ, ಕುಂಭಕರ್ಣ ಮತ್ತು ವಿಭೀಷಣ ಬ್ರಹ್ಮದೇವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು ಮಾಡಿದರು. ಇವರ ಭಕ್ತಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗಿ ವರ ಕೇಳಲು ಹೇಳಿದನು.
ಕುಂಭಕರ್ಣನ ಶಕ್ತಿ ಕಂಡು ದೇವತೆಗಳು ಬೆಚ್ಚಿಬಿದ್ದರು. ಆತ 'ಇಂದ್ರಾಸನ' (ಇಂದ್ರನ ಸಿಂಹಾಸನ) ಕೇಳಿಬಿಟ್ಟರೆ ಸ್ವರ್ಗಲೋಕವೇ ಆತನ ವಶವಾಗುತ್ತದೆ ಎಂಬ ಭಯ ಇಂದ್ರನಿಗೆ ಶುರುವಾಯ್ತು.
ಇಂದ್ರನ ಕೋರಿಕೆಯಂತೆ ವಿದ್ಯಾಧಿದೇವತೆ ಸರಸ್ವತಿಯು ಅದೃಶ್ಯವಾಗಿ ಕುಂಭಕರ್ಣನ ನಾಲಿಗೆ ಮೇಲೆ ಕುಳಿತಳು. ಆತ ವರ ಕೇಳುವ ಸಮಯದಲ್ಲಿ ಮಾತು ಹೊರಳುವಂತೆ ಮಾಡಿದಳು.
ಕುಂಭಕರ್ಣ 'ಇಂದ್ರಾಸನ' ಕೇಳಲು ಬಾಯಿ ತೆರೆದಾಗ, ಸರಸ್ವತಿಯ ಪ್ರಭಾವದಿಂದ ಆತನ ಬಾಯಿಂದ 'ನಿದ್ರಾಸನ' (ನಿದ್ರೆ) ಎಂಬ ಪದ ಹೊರಬಂತು. ಬ್ರಹ್ಮ ಕೂಡಲೇ 'ತಥಾಸ್ತು' ಎಂದೇ ಬಿಟ್ಟ!
ತಮ್ಮನಿಗೆ ಆದ ಅನ್ಯಾಯ ಕಂಡು ರಾವಣನು ಬ್ರಹ್ಮನಲ್ಲಿ ವರವನ್ನು ಹಿಂಪಡೆಯಲು ಬೇಡಿದನು. ಆದರೆ ಒಮ್ಮೆ ನೀಡಿದ ವರವನ್ನು ವಾಪಸ್ ಪಡೆಯಲು ಸಾಧ್ಯವಿರಲಿಲ್ಲ.
ಬ್ರಹ್ಮನು ವರದ ಪ್ರಭಾವ ತಗ್ಗಿಸಿ, 'ಕುಂಭಕರ್ಣನು ಆರು ತಿಂಗಳು ಮಲಗುತ್ತಾನೆ ಮತ್ತು ಕೇವಲ ಒಂದು ದಿನ ಮಾತ್ರ ಎಚ್ಚರವಿರುತ್ತಾನೆ' ಎಂದು ವರವನ್ನು ಮಾರ್ಪಡಿಸಿದನು.
ಕುಂಭಕರ್ಣ ಪ್ರತಿದಿನ ಎಚ್ಚರವಿದ್ದರೆ ಆತನ ಅಗಾಧ ಹಸಿವಿಗೆ ಇಡೀ ಸೃಷ್ಟಿಯ ಜೀವರಾಶಿಗಳೇ ಬಲಿಯಾಗುತ್ತಿದ್ದವು. ಅರಿಯದೇ ನಡೆದ ಈ ನಿದ್ರೆಯ ವರ ಲೋಕಕ್ಕೆ ಒಳ್ಳೆಯದನ್ನೇ ಮಾಡಿತು.
ಈ ದಿನಗಳಲ್ಲಿ ಕ್ಷೌರ ಮಾಡಿಸಿದರೆ ದಾರಿದ್ರ್ಯ ಗ್ಯಾರಂಟಿ; ಗುರೂಜಿಗಳಿಂದ ಎಚ್ಚರಿಕೆ!
ಈ ಕನಸು ನಿಮ್ಮ ಜೀವನದ ಹೊಸ ಆರಂಭದ ಸಂಕೇತ
Vastu Tips: ಮನೆಯ ವಾಸ್ತು ಬಾಗಿಲು ಹೇಗಿರಬೇಕು? ಸರಿಯಾದ ದಿಕ್ಕು ಯಾವುದು ಗೊತ್ತಾ
ಇವನ್ನ ತಕ್ಷಣವೇ ಮನೆಯಿಂದ ಹೊರಹಾಕಿ.. ಅದೃಷ್ಟ ರೈಲಿಗಿಂತ ವೇಗವಾಗಿ ಓಡಿ ಬರುತ್ತೆ