ಸದ್ಯದ ನಿಯಮದ ಪ್ರಕಾರ ಸರ್ಕಾರವು ಕೆಲವು ಹೆಸರುಗಳನ್ನು ಒಪ್ಪಿಕೊಳ್ಳದೆ ಅಥವಾ ತಿರಸ್ಕರಿಸದೆ ಹಾಗೇ ಇಟ್ಟುಕೊಳ್ಳುತ್ತದೆ. ಇದು ದೇಶದ ಪ್ರಜಾಪ್ರಭುತ್ವದ ವಿರುದ್ಧ ಅತ್ಯಂತ ಮಾರಕ ಎಂದೂ ಅವರು ಹೇಳಿದರು.

ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಗೆ ವಿರುದ್ಧವಾಗಿರುವ ಕೊಲಿಜಿಯಂ ಪದ್ಧತಿಯನ್ನು ಅನುಸರಿಸುವುದು ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸರ್ಕಾರ ಕರ್ತವ್ಯಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ಶುಕ್ರವಾರ ಪ್ರತಿಪಾದಿಸಿದ್ದಾರೆ. ಹಾಗೂ, ಸಂವಿಧಾನ ಪೀಠವು ಪ್ರಕ್ರಿಯೆಗೆ ಗಡುವನ್ನು ನಿಗದಿಪಡಿಸುವ ಆದೇಶವನ್ನು ರವಾನಿಸುತ್ತದೆ ಎಂದೂ ಒತ್ತಾಯಿಸಿದ್ದಾರೆ. 

Add Asianetnews Kannada as a Preferred SourcegooglePreferred

ಕೊಲಿಜಿಯಂ (Collegium) ವಿಚಾರದಲ್ಲಿ ಕೇಂದ್ರ ಸರ್ಕಾರ (Central Government) ಹಾಗೂ ಸುಪ್ರೀಂಕೋರ್ಟ್‌ (Supreme Court) ನಡುವಿನ ಸಂಘರ್ಷದ ಬಗ್ಗೆ ರೋಹಿಂಟನ್‌ ಫಾಲಿ ನಾರಿಮನ್‌ (Rohinton Fali Nariman) ಪ್ರತಿಕ್ರಿಯೆ ನೀಡಿರುವುದು ಹೀಗೆ.. ಒಮ್ಮೆ ಆ ಐವರು ಅಥವಾ ಅದಕ್ಕಿಂತ ಹೆಚ್ಚು (ನ್ಯಾಯಮೂರ್ತಿಗಳು) (Judges) ಸಂವಿಧಾನವನ್ನು (Constitution) ವ್ಯಾಖ್ಯಾನಿಸಿದರೆ, ಆ ತೀರ್ಪನ್ನು ಅನುಸರಿಸುವುದು ಆರ್ಟಿಕಲ್ 144 ಅಡಿಯಲ್ಲಿ ಆಥಾರಿಟಿಯಾಗಿ (Authority) ನಿಮ್ಮ ಬದ್ಧ ಕರ್ತವ್ಯವಾಗಿದೆ. ನೀವು ಅದನ್ನು ಟೀಕಿಸಬಹುದು. ಒಬ್ಬ ನಾಗರಿಕನಾಗಿ, ನಾನೂ ಅದನ್ನು ಟೀಕಿಸಬಹುದು, ಸಮಸ್ಯೆ ಇಲ್ಲ. ಆದರೆ ಎಂದಿಗೂ ಮರೆಯಬಾರದು, ಇಂದು ಪ್ರಜೆಯಾಗಿರುವ ನನ್ನಂತಲ್ಲದೆ, ನೀವು ಆಥಾರಿಟಿ ಮತ್ತು ಆಥಾರಿಟಿಯಾಗಿ ಅದು ಸರಿಯೋ ತಪ್ಪೋ, ನೀವು ಆ ತೀರ್ಪಿಗೆ ಬದ್ಧರಾಗಿದ್ದೀರಿ ಎಂದು ಸುಪ್ರೀಂಕೋರ್ಟ್‌ ಮಾಜಿ ನ್ಯಾಯಮೂರ್ತಿ, ಏಳನೇ ಮುಖ್ಯ ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ಸ್ಮಾರಕ ಉಪನ್ಯಾಸದ ವೇಳೆ ಈ ಹೇಳಿಕೆ ನೀಡಿದ್ದಾರೆ. 

ಇದನ್ನು ಓದಿ: ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

ಕಾನೂನು ಸಚಿವ ಕಿರಣ್ ರಿಜಿಜು ಅವರು ಕೊಲಿಜಿಯಂ ವ್ಯವಸ್ಥೆಯನ್ನು ಪದೇ ಪದೇ ಟೀಕಿಸುತ್ತಿರುವ ಮತ್ತು ಸುಪ್ರೀಂಕೋರ್ಟ್ ಸಹ ಈ ಬಗ್ಗೆ ತಿರುಗೇಟು ನೀಡುತ್ತಿರುವ ಹಿನ್ನೆಲೆ ಸುಪ್ರೀಂಕೋರ್ಟ್‌ ಮಾಜಿ ನ್ಯಾಯಮೂರ್ತಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

ಇನ್ನು, ಮಾಜಿ ನ್ಯಾಯಮೂರ್ತಿ ನಾರಿಮನ್ ಅವರು ಕೊಲಿಜಿಯಂನ ಶಿಫಾರಸಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಗಡುವನ್ನು ನಿಗದಿಪಡಿಸುವ ಮೂಲಕ ನ್ಯಾಯಮೂರ್ತಿಗಳನ್ನು ನೇಮಿಸುವ ಪ್ರಸ್ತುತ ವ್ಯವಸ್ಥೆಯಲ್ಲಿನ ಲೋಪವನ್ನು ತುಂಬಲು ಸುಪ್ರೀಂಕೋರ್ಟ್ ಮತ್ತೊಂದು ಸಾಂವಿಧಾನಿಕ ಪೀಠವನ್ನು ಹೊಂದಿರಬೇಕು ಎಂದು ಹೇಳಿದರು. ಸಾಂವಿಧಾನಿಕ ನ್ಯಾಯಾಲಯಗಳಿಗೆ ನೇಮಕಾತಿಗಳನ್ನು ಮಾರ್ಗದರ್ಶನ ಮಾಡಲು 1999 ರಲ್ಲಿ ರಚಿಸಲಾದ ಕಾರ್ಯವಿಧಾನದ ಮೆಮೊರಾಂಡಮ್ (MoP), ಒಪ್ಪಂದದ ಸಂದರ್ಭದಲ್ಲಿ ಕೊಲಿಜಿಯಂಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಹೊಂದಿದ್ದರೆ ಅಥವಾ ನೇಮಕಾತಿಗಳನ್ನು ಸೂಚಿಸಲು ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸಮಯಾವಧಿಯನ್ನು ಹೊಂದಿಲ್ಲ.

ಇದನ್ನು ಓದಿ: ಮತ್ತೆ ಸುಪ್ರೀಂ- ಕೇಂದ್ರ ಜಟಾಪಟಿ : ಕೇಂದ್ರ ತಿರಸ್ಕರಿಸಿದ್ದ 2 ಹೆಸರು ಮತ್ತೆ ಶಿಫಾರಸು ಮಾಡಿದ ಕೊಲಿಜಿಯಂ

ಮತ್ತು ಆ ಸಂವಿಧಾನ ಪೀಠವು, ನನ್ನ ವಿನಮ್ರ ಅಭಿಪ್ರಾಯದಲ್ಲಿ, ಒಮ್ಮೆ ಕೊಲಿಜಿಯಂನಿಂದ ಸರ್ಕಾರಕ್ಕೆ ಹೆಸರನ್ನು ಕಳುಹಿಸಿದರೆ, ಒಂದು ಅವಧಿಯೊಳಗೆ ಸರ್ಕಾರವು ಏನನ್ನೂ ಹೇಳದಿದ್ದರೆ, (30 ದಿನಗಳು ಎಂದು ಹೇಳೋಣ) ಸರ್ಕಾರಕ್ಕೆ ಹೇಳಲು ಏನೂ ಇಲ್ಲ ಎಂದು ನಿರ್ಧರಿಸಬೇಕು ಎಂದು 7 ವರ್ಷಗಳ ಅವಧಿಯ ನಂತರ ಆಗಸ್ಟ್ 2021 ರಲ್ಲಿ ನಿವೃತ್ತರಾದ ಮಾಜಿ ನ್ಯಾಯಮೂರ್ತಿಗಳು ಹೇಳಿದರು.

ಅಲ್ಲದೆ, ಸದ್ಯದ ನಿಯಮದ ಪ್ರಕಾರ ಸರ್ಕಾರವು ಕೆಲವು ಹೆಸರುಗಳನ್ನು ಒಪ್ಪಿಕೊಳ್ಳದೆ ಅಥವಾ ತಿರಸ್ಕರಿಸದೆ ಹಾಗೇ ಇಟ್ಟುಕೊಳ್ಳುತ್ತದೆ. ಇದು ದೇಶದ ಪ್ರಜಾಪ್ರಭುತ್ವದ ವಿರುದ್ಧ ಅತ್ಯಂತ ಮಾರಕ ಎಂದೂ ಅವರು ಹೇಳಿದರು.

ಇದನ್ನೂ ಓದಿ: ನನ್ನ ಹೆಗಲ ಮೇಲೆ ಗನ್‌ ಇಟ್ಟು ಶೂಟ್‌ ಮಾಡಬೇಡಿ: ಕೇಂದ್ರ ಸಚಿವ ರಿಜಿಜುಗೆ ನಿವೃತ್ತ ನ್ಯಾಯಮೂರ್ತಿ ಸೋಧಿ ಕೋರಿಕೆ

ಅಲ್ಲದೆ, ಸರ್ಕಾರದ ಆಕ್ಷೇಪಣೆಗಳನ್ನು ತಿರಸ್ಕರಿಸಿದ ನಂತರ ಹಿಂದಕ್ಕೆ ಕಳುಹಿಸಲಾದ ಶಿಫಾರಸುಗಳಿಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾಲಮಿತಿಯೊಂದಿಗೆ ಒಪ್ಪಿಗೆ ನೀಡಲು ಹೇಳಬೇಕು. ನೀವು ಸ್ವತಂತ್ರ ಮತ್ತು ನಿರ್ಭೀತ ನ್ಯಾಯಮೂರ್ತಿಗಳನ್ನು ಹೊಂದಿಲ್ಲದಿದ್ದರೆ, ವಿದಾಯ ಹೇಳಿ. ಇನ್ನೇನೂ ಉಳಿದಿಲ್ಲ ಎಂದೂ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ಫಾಲಿ ನಾರಿಮನ್‌ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ