
ನವದೆಹಲಿ(ಜು.19): ಉಗ್ರರ ಮೂಲಕ ಭಾರತದಲ್ಲಿ ದುಷ್ಕೃತ್ಯ ನಡೆಸುವ ಪಾಕಿಸ್ತಾನ, ಇದೀಗ ಆಷ್ಘಾನಿಸ್ತಾನ ಮರುನಿರ್ಮಾಣದ ನಿಟ್ಟಿನಲ್ಲಿ ಭಾರತ ನಿರ್ಮಿಸಿ ಕೊಟ್ಟಿದ್ದ ಹಲವು ಕಟ್ಟಡಗಳು, ಆಸ್ತಿಗಳ ವಿನಾಶಕ್ಕೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.
ಅಮೆರಿಕ ಸೇನೆ ಜಾಗ ತೆರವು ಮಾಡಿದ ಬಳಿಕ ಆಷ್ಘಾನಿಸ್ತಾನದ ಒಂದೊಂದೇ ತಾಣಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್ ಇದೀಗ ದೇಶದ ಬಹುತೇಕ ಜಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮತ್ತೊಂದೆಡೆ ಪಾಕಿಸ್ತಾನ ಕನಿಷ್ಠ 10000 ಜಿಹಾದಿಗಳು ಕೂಡಾ ಕಳೆದ ಕೆಲ ತಿಂಗಳಿನಿಂದ ಆಷ್ಘಾನಿಸ್ತಾನ ಪ್ರವೇಶಿಸುವ ಮೂಲಕ ತಾಲಿಬಾನಿಗಳ ಜೊತೆ ಕೈ ಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಮ್ಮ ವಶದಲ್ಲಿರುವ ಪ್ರದೇಶಗಳಲ್ಲಿ, ಭಾರತ ನಿರ್ಮಿಸಿದ ಕಟ್ಟಡಗಳನ್ನು ಮೊದಲು ಧ್ವಂಸಗೊಳಿಸಿ ಎಂದು ಪಾಕಿಸ್ತಾನದ ಕಡೆಯಿಂದ ಜಿಹಾದಿಗಳಿಗೆ ಮತ್ತು ತಾಲಿಬಾನಿ ಉಗ್ರರಿಗೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಸಂಘರ್ಷಕ್ಕೆ ತುತ್ತಾಗಿದ್ದ ಆಷ್ಘಾನಿಸ್ತಾನವನ್ನು ಮರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ಭಾರತ ಸರ್ಕಾರ, ಆ ದೇಶದಲ್ಲಿ ಸಂಸತ್, ಕ್ರಿಕೆಟ್ ಸ್ಟೇಡಿಯಂ, ಜಲವಿದ್ಯುದಾಗಾರ, ಹೆದ್ದಾರಿ ಸೇರಿದಂತೆ ನಾನಾ ರೀತಿಯ ಕಾಮಗಾರಿಗಳನ್ನು ನೆರವಿನ ರೂಪದಲ್ಲಿ ಮಾಡಿಕೊಟ್ಟಿದೆ. ಇದು ಅಲ್ಲಿನ ಜನರ ಜೀವನ ಸುಧಾರಿಸುವಲ್ಲಿ ಭಾರೀ ಪ್ರಮುಖ ಪಾತ್ರ ವಹಿಸಿದೆ. 20 ವರ್ಷಗಳಲ್ಲಿ ಭಾರತ ಕನಿಷ್ಠ 22000 ಕೋಟಿ ರು. ಮೌಲ್ಯದ ನೆರವನ್ನು ಆಷ್ಘಾನಿಸ್ತಾನಕ್ಕೆ ಕಲ್ಪಿಸಿದೆ.
ಹೀಗಾಗಿ ಇಂಥ ಆಸ್ತಿಗಳನ್ನೇ ಮೊದಲು ಗುರಿ ಮಾಡಿ ನಾಶ ಮಾಡುವಂತೆ ಉಗ್ರರಿಗೆ ಸಂದೇಶ ರವಾನಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ