
ಬೆಂಗಳೂರು(ಆ.21): ಅಷ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.
"
ಬಳ್ಳಾರಿ ಜಿಲ್ಲೆ ಸಂಡೂರಿನ ತನ್ವೀನ್ ಅಬ್ದುಲ್, ಮಂಗಳೂರಿನ ಬಜ್ಪೆ ಮೂಲದ ದಿನೇಶ್ ರೈ, ಮೂಡಬಿದಿರೆಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೇವಿಡ್ ಡಿಸೋಜಾ, ಬಜೈ ಶ್ರವಣ್ ಅಂಚನ್, ಉಳ್ಳಾಲದ ಪ್ರಸಾದ್ ಆನಂದ್, ಬೆಂಗಳೂರಿನ ಮಾರತ್ಹಳ್ಳಿಯ ಹಿರಾಕ್ ದೇಬನಾಥ್ ಅವರು ಗಾಜಿಯಾಬಾದ್ ತಲುಪಿದ್ದಾರೆ. ಮಂಗಳೂರಿನ ಥೆರೇಸಾ ಕ್ರಾಸ್ಟಾಅವರು ಕಾಬೂಲ್ನಲ್ಲಿದ್ದು, ಅಲ್ಲಿಂದ ಇಟಲಿಗೆ ತೆರಳುವ ಇಚ್ಛೆಯನ್ನು ವಿದೇಶಾಂಗ ಸಚಿವಾಲಯದ ಮುಂದೆ ವ್ಯಕ್ತಪಡಿಸಿದ್ದಾರೆ.
ಇನ್ನು ಚಿಕ್ಕಮಗಳೂರಿನ ಎನ್.ಆರ್.ಪುರದ ರಾಬರ್ಟ್ ಹಾಗೂ ಮಂಗಳೂರಿನ ಜೇರೋನಾ ಸಿಕ್ವೇರಾ ಕಾಬೂಲ್ ವಿಮಾನ ನಿಲ್ದಾಣದಲ್ಲಿಯೇ ಇದ್ದಾರೆ. ಶೀಘ್ರವೇ ಅವರು ರಾಜ್ಯಕ್ಕೆ ಮರಳಲಿದ್ದಾರೆ. ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಆಪ್ಘಾನಿಸ್ತಾನದಲ್ಲಿ ಕನ್ನಡಿಗರ ರಕ್ಷಣೆ ಕಾರ್ಯಾಚರಣೆ ಸಮನ್ವಯಾಧಿಕಾರಿಯೂ ಆಗಿರುವ ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟವರು
1. ತನ್ವೀನ್ ಬಳ್ಳಾರಿ
2. ದಿನೇಶ್ ರೈ ದಕ್ಷಿಣ ಕನ್ನಡ
3. ಜಗದೀಶ್ ಪೂಜಾರಿ ದಕ್ಷಿಣ ಕನ್ನಡ
4. ಡೇವಿಡ್ ಡಿಸೋಜಾ ದಕ್ಷಿಣ ಕನ್ನಡ
5. ಶ್ರವಣ್ ಅಂಚನ್ ದಕ್ಷಿಣ ಕನ್ನಡ
6. ಆನಂದ್ ದಕ್ಷಿಣ ಕನ್ನಡ
7. ಹಿರಾಕ್ ದೇಬನಾಥ್ ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ