
ಕಠ್ಮಂಡು: ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಕರುಣಾಜನಕ ಘಟನೆಯೊಂದು ನೇಪಾಳದಲ್ಲಿ ನಡೆದಿದೆ. "ಧುರ್ಬೆ" ಎಂದು ಕರೆಯಲ್ಪಡುವ ಕುಖ್ಯಾತ ಕಾಡು ಆನೆಯೊಂದು, ಕಳೆದ 14 ವರ್ಷಗಳ ಅವಧಿಯಲ್ಲಿ ಒಂದೇ ಕುಟುಂಬವನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ಧ್ವಂಸಗೊಳಿಸಿದೆ. ಆನೆಯ ಕಾಟಕ್ಕೆ ಹೆದರಿ ಮೈಲುಗಳಷ್ಟು ದೂರ ಓಡಿಹೋಗಿ ಹೊಸ ಬದುಕು ಕಟ್ಟಿಕೊಂಡಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಇತ್ತೀಚೆಗೆ ಮತ್ತಿಬ್ಬರನ್ನು ಬಲಿಪಡೆದಿದೆ.
ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಸಮೀಪ ವಾಸಿಸುವ ಶನಿಚಾರ ಬೋಟೆ ಎಂಬುವವರ ಕುಟುಂಬವೇ ಈ ಕ್ರೂರ ದುರಂತಕ್ಕೆ ಬಲಿಯಾಗಿದೆ. ಆವಾಸಸ್ಥಾನಗಳ ಛಿದ್ರೀಕರಣವೇ ಆನೆಯ ಈ ಹಿಂಸಾಚಾರಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದರೂ, ಬೋಟೆ ಕುಟುಂಬಕ್ಕೆ ಮಾತ್ರ ಇದು ಮುಗಿಯದ ದುಃಸ್ವಪ್ನವಾಗಿ ಕಾಡುತ್ತಿದೆ.
ದುರಂತದ ಭೀಕರ ಟೈಮ್ಲೈನ್:
ನೇಪಾಳದ ಮೋಸ್ಟ್ ವಾಂಟೆಡ್ ಆನೆ!
ನೇಪಾಳದ ಇತಿಹಾಸದಲ್ಲೇ ಧುರ್ಬೆಯನ್ನು ಅತ್ಯಂತ ಅಪಾಯಕಾರಿ ಆನೆ ಎಂದು ಪರಿಗಣಿಸಲಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ, 2010 ರಿಂದ ಇದುವರೆಗೆ ಈ ರಾಕ್ಷಸ ಆನೆ ಬರೋಬ್ಬರಿ 25 ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, ನೂರಾರು ಮನೆಗಳನ್ನು ನಾಶಪಡಿಸಿದೆ. 2012 ರಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಈ ಆನೆಯನ್ನು ಕೊಲ್ಲಲು ಪ್ರಯತ್ನಿಸಿದಾಗ ಇದು ತೀವ್ರವಾಗಿ ಗಾಯಗೊಂಡರೂ ಬದುಕುಳಿದಿತ್ತು. ಉದ್ಯಾನವನದ ಅಧಿಕಾರಿಗಳು ಇದಕ್ಕೆ ಸ್ಯಾಟಲೈಟ್ ಟ್ರ್ಯಾಕಿಂಗ್ ಕಾಲರ್ಗಳನ್ನು ಅಳವಡಿಸಿದ್ದರೂ, ಸೂಕ್ತ ಮೇಲ್ವಿಚಾರಣೆಯ ಕೊರತೆಯಿಂದಾಗಿ ಅಮಾಯಕ ಕುಟುಂಬಗಳು ಬಲಿಯಾಗುತ್ತಲೇ ಇವೆ.