Student Death: ಸಾರಿ ಪಾಪಾ; ಕಾಲೇಜಿಗೇ ಟಾಪರ್ ಆಗಿದ್ದ ಮಗ ಉದ್ಯೋಗದ ಒತ್ತಡಕ್ಕೆ ಬಲಿ; ಕೊನೆಯ ಮಾತು ಕೇಳಿ ಕರಗಿದ ಹೆತ್ತ ಒಡಲು

Published : Jul 19, 2026, 07:16 PM IST
b.tech student Death

ಸಾರಾಂಶ

ಬಿಟೆಕ್‌ನಲ್ಲಿ ಚಿನ್ನದ ಪದಕ ಗೆದ್ದ 23 ವರ್ಷದ ಯುವಕ, ಸುಮಾರು 50 ಬಾರಿ ಪ್ರಯತ್ನಿಸಿದರೂ ಸರ್ಕಾರಿ ಉದ್ಯೋಗ ಸಿಗದ ಕಾರಣ ತೀವ್ರ ಖಿನ್ನತೆಗೆ ಒಳಗಾಗಿದ್ದ. 'ಕ್ಷಮಿಸಿ ಅಪ್ಪಾ' ಎಂದು ಡೆತ್‌ನೋಟ್ ಬರೆದಿಟ್ಟು, ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಎಷ್ಟೇ ಓದಿದರೂ, ಕಾಲೇಜಿಗೇ ಚಿನ್ನದ ಪದಕ ಗೆದ್ದರೂ ಒಂದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ನೋವು ಆ 23 ವರ್ಷದ ಯುವಕನನ್ನು ಜೀವಂತವಾಗಿ ದಹಿಸಿತ್ತು. ಹೆತ್ತವರ ಕನಸನ್ನು ನನಸು ಮಾಡಲಾಗದ ಅಪರಾಧ ಪ್ರಜ್ಞೆಯಿಂದ ನೊಂದ ಆ ಬಿಟೆಕ್ ಟಾಪರ್, ಕೊನೆಗೆ ಕ್ಷಮಿಸಿಬಿಡಿ ಅಪ್ಪ, ಎಂದು ಡೆತ್‌ನೋಟ್ ಬರೆದಿಟ್ಟು ತನ್ನದೇ ಮನೆಯಲ್ಲಿ ಬದುಕಿಗೆ ಶರಣಾಗಿದ್ದಾನೆ. ಕಡು ಬಡತನದಲ್ಲೂ ಮಗನನ್ನು ಓದಿಸಿ ಬಂಗಾರದ ಪದಕ ತಂದಾಗ ಸಂಭ್ರಮಿಸಿದ್ದ ಆ ತಂದೆಯ ಒಡಲಲ್ಲಿ ಈಗ ಕೇವಲ ಆಕ್ರಂದನ ಮಾತ್ರ ಉಳಿದಿದೆ.

ಚಿನ್ನದ ಪದಕ ಪಪಡೆದಿದ್ದ ಆನಂದ!

ಮೃತ ಆನಂದ್ 2024 ರಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜು ಪಿಎಸ್ಐಟಿಯಲ್ಲಿ ಬಿ ಟೆಕ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಕಾರ್ಯಕ್ರಮದಲ್ಲಿ ಅಗ್ರಸ್ಥಾನ ಪಡೆದಿದ್ದರು ಮತ್ತು ಉತ್ತರ ಪ್ರದೇಶದಲ್ಲಿ ಮೂರನೇ ರ‍್ಯಾಂಕ್ ಗಳಿಸಿದ್ದರು. ಆಗಸ್ಟ್ 13, 2024 ರಂದು ಕಾಲೇಜು ಸಮಾರಂಭದಲ್ಲಿ ಅವರಿಗೆ ಚಿನ್ನದ ಪದಕ ನೀಡಲಾಯಿತು.

ಪೊಲೀಸರು ಹೇಳಿದ್ದೇನು?

ಗೋವಿಂದ್ ನಗರದ ಗುಜೈನಿ ಪ್ರದೇಶದಲ್ಲಿರುವ ತನ್ನ ಮೂರು ಅಂತಸ್ತಿನ ಮನೆಯಲ್ಲಿ ಆನಂದ್ ಅವರ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯ ಸಹಾಯಕರು ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದಾಗ ಪದೇ ಪದೇ ಬಾಗಿಲು ತಟ್ಟಿದಾಗ ಉತ್ತರಿಸಲಾಗಲಿಲ್ಲ.

ಬಿಹಾರಿಗೆ ಪಯಣ ಬೆಳೆಸಿದ್ದ ಕುಟುಂಬ!

ಅವರ ಕುಟುಂಬವು ಅವರ ಅಣ್ಣನ ಮದುವೆಯನ್ನು ಅಂತಿಮಗೊಳಿಸಲು ಬಿಹಾರಕ್ಕೆ ಪ್ರಯಾಣ ಬೆಳೆಸಿತ್ತು. ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಮೃತದೇಹದ ಜೊತೆಗೆ ಕೈಬರಹದ ಐದು ಸಾಲುಗಳ ಚೀಟಿಯೂ ಸಿಕ್ಕಿತು. ಕ್ಷಮಿಸಿ ಅಪ್ಪಾ, ನಾನು ಸರ್ಕಾರಿ ಕೆಲಸ ಪಡೆಯಲು ಸುಮಾರು 50 ಬಾರಿ ಪ್ರಯತ್ನಿಸಿದೆ, ಆದರೆ ನಾನು ಯಶಸ್ವಿಯಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಅಂತ್ಯಕ್ರಿಯೆ!

ಮರಣೋತ್ತರ ಪರೀಕ್ಷೆಯ ನಂತರ ಶನಿವಾರ ಸಂಜೆ ಭೈರವ ಘಾಟ್‌ನಲ್ಲಿ ಆನಂದ್ ಅವರ ಅಂತ್ಯಕ್ರಿಯೆ ನೆರವೇರಿತು. ಬಿಹಾರ ಮೂಲದ ನಿವೃತ್ತ ಉದ್ಯೋಗಿ ಹಾಗೂ ಆನಂದ್ ಅವರ ತಂದೆ ರಾಜ್‌ಕುಮಾರ್ ಘಟನೆ ಕುರಿತು ಮಾತನಾಡಿದ್ದಾರೆ. ಮಗ ಬಿಟೆಕ್ ಪದವಿ ಮುಗಿಸಿದ ನಂತರ, ಪವರ್ ಗ್ರಿಡ್‌ನಲ್ಲಿ ಒಂದು ವರ್ಷದ ತರಬೇತಿ (ಅಪ್ರೆಂಟಿಸ್‌ಶಿಪ್) ಪೂರ್ಣಗೊಳಿಸಿದ್ದನು. ಆ ಬಳಿಕ ಉತ್ತಮ ಉದ್ಯೋಗಕ್ಕಾಗಿ ಸತತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದನು ಎಂದು ತಂದೆ ಕಣ್ಣೀರು ಹಾಕುತ್ತಾ ತಿಳಿಸಿದ್ದಾರೆ.

ಹಲವು ಪರೀಕ್ಷೆ ಬರೆದಿದ್ದ ಯುವಕ!

ರೈಲ್ವೆ, ಎಸ್‌ಎಸ್‌ಸಿ, ಬ್ಯಾಂಕ್ ಹಾಗೂ ಶಿಕ್ಷಣ ಇಲಾಖೆಯ ಪರೀಕ್ಷೆ ಬರೆದಿದ್ದರೂ ಆನಂದ್‌ಗೆ ಯಶಸ್ಸು ಸಿಕ್ಕಿರಲಿಲ್ಲ. ಇದರಿಂದ ಅವರು ಕಳೆದ ಕೆಲವು ತಿಂಗಳುಗಳಿಂದ ತೀವ್ರ ಒತ್ತಡದಲ್ಲಿದ್ದರು ಎಂದು ತಂದೆ ರಾಜ್‌ಕುಮಾರ್ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸರ್ಕಾರಿ ಕೆಲಸ ಸಿಗದ ಕಾರಣ ಆನಂದ್ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

(ಈ ಸ್ಟೋರಿ ಸುವರ್ಣ ನ್ಯೂಸ್ ಸಂಪಾದಿಸಿಲ್ಲ, ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

PREV
Read more Articles on
click me!

Recommended Stories

3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ
Rakul Preet Singh: 'ಇದು ಕೇವಲ ಸಿನಿಮಾ ಅಲ್ಲ'.. 'ಶೂರ್ಪನಖಿ' ಪಾತ್ರಧಾರಿ ರಾಮಾಯಣ ಚಿತ್ರದ ಬಗ್ಗೆ ಹೇಳಿರೋ ಮಾತೀಗ ವೈರಲ್!