
ನವದೆಹಲಿ(ಜೂ.07): ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನೆಯ 15ನೇ ಡಿವಿಜನ್ ಚಿನಾರ್ ಕಾರ್ಪ್ಸ್ನ ಅಧಿಕೃತ ಖಾತೆಯನ್ನು ಟ್ವಿಟ್ಟರ್ ಡಿಲೀಟ್ ಮಾಡಿ ವಿವಾದ ಸೃಷ್ಟಿಸಿದೆ.
ಚಿನಾರ್ ಕಾರ್ಪ್ಸ್ ನ ಅಧಿಕೃತ ಖಾತೆಯನ್ನು ಡೀಲಿಟ್ ಮಾಡಿದ್ದ ಟ್ವಿಟ್ಟರ್ ಇದಕ್ಕೆ ಕಾರಣವನ್ನೂ ಕೂಡ ನೀಡಿರಲಿಲ್ಲ. ಆದರೆ ಟ್ವಿಟ್ಟರ್ ನಡೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಚಿನಾರ್ ಕಾರ್ಪ್ಸ್ ನ ಖಾತೆಯನ್ನು ಮತ್ತೆ ಟ್ವಿಟ್ಟರ್ ರಿಸ್ಟೋರ್ ಮಾಡಿದೆ.
ಟ್ವಿಟ್ಟರ್ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಟ್ವಿಟ್ಟರ್ ನ ಈ ನಡೆ ಒಪ್ಪತಕ್ಕದಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದರು.
ಇದೀಗ ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆಯನ್ನು ರಿಸ್ಟೋರ್ ಮಾಡಿರುವ ಟ್ವಿಟ್ಟರ್, ವಿವಾದವನ್ನು ಸುಖಾಂತ್ಯಗೊಳಿಸಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.