ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಭಾರತ: 5ನೇ ದಿನ ಗೆಲುವಿಗಾಗಿ ಕಾದಾಟ

Published : Nov 20, 2016, 07:34 AM ISTUpdated : Apr 11, 2018, 01:03 PM IST
ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಭಾರತ: 5ನೇ ದಿನ ಗೆಲುವಿಗಾಗಿ ಕಾದಾಟ

ಸಾರಾಂಶ

5ನೇ ದಿನದಾಟದಲ್ಲಿ ಆಂಗ್ಲರ ಗೆಲುವಿಗೆ 318 ರನ್ ಅಗತ್ಯವಿದೆ.ಭಾರತದ ಗೆಲುವಿಗೆ 8 ವಿಕೆಟ್ ಕೀಳುವ ಅಗತ್ಯವಿದೆ. ಭಾರತೀಯ ಬೌಲರ್`ಗಳು ಚುರುಕಿನ ದಾಳಿ ನಡೆಸಬೇಕಿದೆ. ಹೀಗಾಗಿ, 5ನೇ ದಿನದ ಆಟ ಭಾರೀ ಕುತೂಹಲ ಕೆರಳಿಸಿದೆ.

ವಿಶಾಖಪಟ್ಟಣ(ನ.20): ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. 2ನೇ ಇನ್ನಿಂಗ್ಸ್`ನಲ್ಲಿ ಭಾರತ ನೀಡಿದ 405 ರನ್`ಗಳ ಗೆಲುವಿನ ಗುರಿ ಬೆನ್ನತ್ತಿರುವ ಆಂಗ್ಲರು ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದರಾದರೂ ಬಳಿಕ 2 ವಿಕೆಟ್ ಕಳೆದುಕೊಂಡಿದ್ಧಾರೆ,

ಭಾರತದ ಸ್ಪಿನ್ ಮತ್ತು ವೇಗದ ದಾಳಿಯನ್ನ ಯಶಸ್ವಿಯಾಗಿ ಎದುರಿಸಿದ ನಾಯಕ ಕುಕ್ ಮತ್ತು ಹಮೀದ್ ಜೋಡಿ 74 ರನ್`ಗಳ ಜೊತೆಯಾಟವಾಡಿದರು. ಈ ಇಬ್ಬರ ಬ್ಯಾಟಿಂಗ್ ಶೈಲಿ ಅಕ್ಷರಶಃ ಭಾರತ ತಂಡದಲ್ಲಿ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಬಳಿಕ ಅಶ್ವಿನ್ ಹಮೀದ್`ಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ಆಂಗ್ಲರ ಪತನಕ್ಕೆ ನಾಂದಿ ಹಾಡಿದರು. ಕುಕ್ ಸಹ ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. 4ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ. ಆಂಗ್ಲರ ಗೆಲುವಿಗೆ 318 ರನ್ ಅಗತ್ಯವಿದೆ.ಭಾರತದ ಗೆಲುವಿಗೆ 8 ವಿಕೆಟ್ ಕೀಳುವ ಅಗತ್ಯವಿದೆ. ನಾಳೆ ಕೊನೆಯ ದಿನವಾಗಿದ್ದು ಭಾರತೀಯ ಬೌಲರ್`ಗಳು ಚುರುಕಿನ ದಾಳಿ ನಡೆಸಬೇಕಿದೆ. ಹೀಗಾಗಿ, 5ನೇ ದಿನದ ಆಟ ಭಾರೀ ಕುತೂಹಲ ಕೆರಳಿಸಿದೆ.

ಸಂಕ್ಷಿಪ್ತ ಸ್ಕೋರ್:

- ಭಾರತ - 455 ಮತ್ತು 204

- ಇಂಗ್ಲೆಂಡ್ : 255 ಮತ್ತು 4ನೇ ದಿನದಾಟದಂತ್ಯಕ್ಕೆ 87/2

- 318 ರನ್ ಹಿನ್ನಡೆಯಲ್ಲಿ ಇಂಗ್ಲೆಂಡ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!