ರಾಥೋಡ್ ಒತ್ತಾಯಕ್ಕೆ ನಾಡಾಗೆ ಸೇರ್ಪಡೆಗೊಂಡೆ: ವೀರೂ

Published : Aug 01, 2018, 12:53 PM IST
ರಾಥೋಡ್ ಒತ್ತಾಯಕ್ಕೆ ನಾಡಾಗೆ ಸೇರ್ಪಡೆಗೊಂಡೆ: ವೀರೂ

ಸಾರಾಂಶ

2 ದಿನಗಳ ಹಿಂದೆಯಷ್ಟೇ ಸೆಹ್ವಾಗ್ ನಾಡಾ ಸಮಿತಿಯ ಸಭೆಗಳಿಗೆ ಒಮ್ಮೆಯೂ ಹಾಜರಾಗಿಲ್ಲ ಎನ್ನುವ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವೀರೂ, ‘ನಾನು ಬಿಸಿಸಿಐ ಜತೆ ಇದ್ದಿದ್ದರಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು ಕಡಿಮೆ. ಡೋಪಿಂಗ್ ಕುರಿತು ನನಗೆ ಹೆಚ್ಚೇನು ತಿಳಿದಿಲ್ಲ. ಅದನ್ನು ಹೇಳಿಕೊಳ್ಳಲು ನನಗೆ ಹಿಂಜರಿಕೆಯೂ ಇಲ್ಲ. ನಾಡಾ ಸಮಿತಿಯಲ್ಲಿ ಕ್ರಿಕೆಟರ್‌ಗಳಿಗಿಂತ ಒಲಿಂಪಿಯನ್‌ಗಳು ಇದ್ದರೆ ಸೂಕ್ತ’ ಎಂದಿದ್ದಾರೆ.

ನವದೆಹಲಿ(ಆ.01]: ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ‘ನಾಡಾ ಸಮಿತಿ ಸದಸ್ಯನಾಗಲು ಇಷ್ಟವಿರಲಿಲ್ಲ. ಆದರೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಒತ್ತಾಯಿಸಿದ್ದರಿಂದ ಸೇರ್ಪಡೆಗೊಂಡೆ’ ಎಂದು ಹೇಳಿದ್ದಾರೆ. 

2 ದಿನಗಳ ಹಿಂದೆಯಷ್ಟೇ ಸೆಹ್ವಾಗ್ ನಾಡಾ ಸಮಿತಿಯ ಸಭೆಗಳಿಗೆ ಒಮ್ಮೆಯೂ ಹಾಜರಾಗಿಲ್ಲ ಎನ್ನುವ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವೀರೂ, ‘ನಾನು ಬಿಸಿಸಿಐ ಜತೆ ಇದ್ದಿದ್ದರಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು ಕಡಿಮೆ. ಡೋಪಿಂಗ್ ಕುರಿತು ನನಗೆ ಹೆಚ್ಚೇನು ತಿಳಿದಿಲ್ಲ. ಅದನ್ನು ಹೇಳಿಕೊಳ್ಳಲು ನನಗೆ ಹಿಂಜರಿಕೆಯೂ ಇಲ್ಲ. ನಾಡಾ ಸಮಿತಿಯಲ್ಲಿ ಕ್ರಿಕೆಟರ್‌ಗಳಿಗಿಂತ ಒಲಿಂಪಿಯನ್‌ಗಳು ಇದ್ದರೆ ಸೂಕ್ತ’ ಎಂದಿದ್ದಾರೆ.

ನನಗೆ ಮೊದಲೆರಡು ನಾಡಾ ಸಮಿತಿ ಸಭೆ ನಡೆಯುವ ಬಗ್ಗೆ ಮಾಹಿತಿ ಇರಲಿಲ್ಲ. ಇನ್ನು ಮೂರನೇ ಸಭೆಯ ಬಗ್ಗೆ ಮಾಹಿತಿಯಿತ್ತು. ಆದರೆ ನನ್ನ ಮಗನ ಆರೋಗ್ಯದ ಸಮಸ್ಯೆ ಇದ್ದಿದ್ದರಿಂದ ಆ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಸೆಹ್ವಾಗ್ ಸ್ಪಷ್ಟನೆ ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ