ವೀರು'ಗೆ ಪ್ರಮುಖ ಜವಾಬ್ದಾರಿ ವಹಿಸಿದ ಕೇಂದ್ರ ಸರ್ಕಾರ

Published : Jul 27, 2017, 08:55 PM ISTUpdated : Apr 11, 2018, 12:36 PM IST
ವೀರು'ಗೆ ಪ್ರಮುಖ ಜವಾಬ್ದಾರಿ ವಹಿಸಿದ ಕೇಂದ್ರ ಸರ್ಕಾರ

ಸಾರಾಂಶ

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದು, ಈ ಸಮಿತಿಯಲ್ಲಿನ ಸದಸ್ಯರು ಆಗಸ್ಟ್ 3 ರಂದು ಸಭೆ ಸೇರಲಿದ್ದು, ಈ ವರ್ಷದ ಕ್ರೀಡಾ ಸಾಧಕರನ್ನು ಆರಿಸಲಿದೆ.

ನವದೆಹಲಿ(ಜು.27): ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಮಾಜಿ ಅಥ್ಲೀಟ್ ಪಿ.ಟಿ. ಉಷಾ ಅವರು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ನೀಡುವ ಸಮಿತಿಗೆ ನೇಮಕವಾಗಿದ್ದಾರೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದು, ಈ ಸಮಿತಿಯಲ್ಲಿನ ಸದಸ್ಯರು ಆಗಸ್ಟ್ 3 ರಂದು ಸಭೆ ಸೇರಲಿದ್ದು, ಈ ವರ್ಷದ ಕ್ರೀಡಾ ಸಾಧಕರನ್ನು ಆರಿಸಲಿದೆ.

ಸಮಿತಿಯ ಇತರೆ ಸದಸ್ಯರು

ಮುಕುಂದ್ ಖೇಲ್ಕರ್ (ಬಾಕ್ಸಿಂಗ್), ಸುನೀಲ್ ದಬ್ಬಾಸ್ (ಕಬಡ್ಡಿ), ಎಂ.ಆರ್. ಮಿಶ್ರಾ (ಪತ್ರಕರ್ತ), ಎಸ್. ಖನ್ನಾ (ಪತ್ರಕರ್ತ), ಸಂಜೀವ್ ಕುಮಾರ್ (ಪತ್ರಕರ್ತ), ಲತಾ ಮಾದೇವಿ (ಪ್ಯಾರಾ ಅಥ್ಲೀಟ್), ಅನಿಲ್ ಖನ್ನಾ (ಕ್ರೀಡಾ ಆಡಳಿತ ಮಂಡಳಿ), ಇಂಜಿತ್ ಶ್ರೀವಾಸ್ತವ್ (ಡಿಜಿ, ಸಾಯ್) ಮತ್ತು ರಾಜ್ವೀರ್ ಸಿಂಗ್ (ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿ) ಸಮಿತಿಯಲ್ಲಿನ ಇತರೆ ಸದಸ್ಯರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!