ರಶೀದ್ ಖಾನ್ ಸ್ಪಿನ್ ಎದುರಿಸಲು ಟೀಮ್ಇಂಡಿಯಾದ ಹೊಸ ತಂತ್ರ ಏನು?

Published : Jun 11, 2018, 02:54 PM IST
ರಶೀದ್ ಖಾನ್ ಸ್ಪಿನ್ ಎದುರಿಸಲು ಟೀಮ್ಇಂಡಿಯಾದ ಹೊಸ ತಂತ್ರ ಏನು?

ಸಾರಾಂಶ

ಭಾರತ -ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಗೊಂಡಿದೆ. ಆಫ್ಘಾನಿಸ್ತಾನ ಸ್ಪಿನ್ನರ್‌ಗಳನ್ನ ಎದುರಿಸಲು ಭಾರತ ಹೊಸ ತಂತ್ರ ರೂಪಿಸಿದೆ. ಟೀಮ್ಇಂಡಿಯಾದ ನೂತನ ಪ್ಲಾನ್ ಏನು? ಇಲ್ಲಿದೆ.

ಬೆಂಗಳೂರು(ಜೂನ್.11): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ. ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎದುರಾಗೋ ಸವಾಲುಗಳನ್ನ ಎದುರಿಸಲು ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡ ಭರ್ಜರಿ ತಯಾರಿ ನಡೆಸುತ್ತಿದೆ.

ಐಪಿಎಲ್ ಹಾಗೂ ಇತ್ತೀಚೆಗಿನ ಟಿ-ಟ್ವೆಂಟಿ ಟೂರ್ನಿಯಲ್ಲಿ ಮಾರಕ ಸ್ಪಿನ್ ದಾಳಿ ನಡೆಸಿ ಎದುರಾಳಿಗಳಿಗೆ ಶಾಕ್ ನೀಡಿರುವ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಎದುರಿಸೋದು ಭಾರತ ತಂಡಕ್ಕಿರೋ ಸವಾಲು. ಇದಕ್ಕಾಗಿ ಭಾರತ ತನ್ನ ಅಭ್ಯಾಸಕ್ಕಾಗಿ ಇಬ್ಬರು ಸ್ಪಿನ್ನರ್‌ಗಳನ್ನ ಸೇರಿಸಿಕೊಂಡಿದೆ. 

ಟೀಮ್ಇಂಡಿಯಾ ನಿಗಧಿತ ಓವರ್‌ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿರುವ ಸ್ಪಿನ್ನರ್ ಯಜುವೇಂದ್ರ ಚೆಹಾಲ್ ಹಾಗೂ ಕರ್ನಾಟಕ ಸ್ಪಿನ್ನರ್ ಶಿವಿಲ್ ಕೌಶಿಕ್ ಸದ್ಯ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ನಡೆಸುತ್ತಿದ್ದಾರೆ. ಈ ಮೂಲಕ ಅಫ್ಘಾನ್ ಸ್ಪಿನ್ನರ್‌ಗಳನ್ನ ಎದುರಿಸಲು ರಹಾನೆ ಸೈನ್ಯ ಸಜ್ಜಾಗುತ್ತಿದೆ. ಜೂನ್ 14 ರಿಂದ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL: ಕೊನೇ 4 ಎಸೆತದಲ್ಲಿ 20 ರನ್‌ ಸಿಡಿಸಿ ಸ್ಮೃತಿ ಮಂಧನಾ ಆರ್‌ಸಿಬಿಗೆ ಮಹಾ ಗೆಲುವು ತಂದ ನಡಿನ್‌ ಡಿ ಕ್ಲರ್ಕ್‌!
ಪಂದ್ಯ ಆಡುವಾಗಲೇ ಕುಸಿದು ಬಿದ್ದು ಭಾರತೀಯ ಕ್ರಿಕೆಟಿಗನ ದಾರುಣ ಸಾವು, ಬಿಸಿಸಿಐ ಸಂತಾಪ!