
ದುಬೈ(ಫೆ.05): ಅಂಡರ್-19 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಐಸಿಸಿ ಭಾನುವಾರ ವಿಶ್ವಕಪ್ನ ಕನಸಿನ ತಂಡ ಪ್ರಕಟಿಸಿತು. ತಂಡದಲ್ಲಿ ಪೃಥ್ವಿ ಶಾ ಸೇರಿದಂತೆ ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಪಂದ್ಯಾವಳಿ ಯಲ್ಲಿ ಭಾರತ ಎಷ್ಟರ ಮಟ್ಟಿಗೆ ಪ್ರಾಬಲ್ಯ ಮೆರೆಯಿತು ಎಂಬುದಕ್ಕೆ ಈ ತಂಡವೇ ಸಾಕ್ಷಿ.
ದಕ್ಷಿಣ ಆಫ್ರಿಕಾದ ನಾಯಕ ರೇನಾರ್ಡ್ ವಾನ್ ಟೊಂಡರ್ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾದ ಓರ್ವ ಆಟಗಾರನಿಗೂ ಸ್ಥಾನ ಲಭಿಸಿಲ್ಲ. ಐವರು ಸದಸ್ಯರ ಸಮಿತಿ ತಂಡವನ್ನು ಆಯ್ಕೆ ಮಾಡಿತು.
ತಂಡದ ವಿವರ: ಪೃಥ್ವಿ ಶಾ (ಭಾರತ), ಮನ್ಜೋತ್ ಕಾಲ್ರಾ (ಭಾರತ), ಶುಭ್ಮನ್ ಗಿಲ್ (ಭಾರತ), ಫಿನ್ ಆಲೆನ್ (ನ್ಯೂಜಿಲೆಂಡ್) ರೇನಾರ್ಡ್ ವಾನ್ (ದ. ಆಫ್ರಿಕಾ, ನಾಯಕ), ವ್ಯಾಂಡಿಲೆ ಮಕ್ವೆಟು (ದ.ಆಫ್ರಿಕಾ), ಅನುಕೂಲ್ ರಾಯ್ (ಭಾರತ), ಕಮ್ಲೇಶ್ ನಾಗರಕೋಟಿ (ಭಾರತ), ಗೆರಾಲ್ಡ್ ಕೊಟ್ಜೆ (ದ.ಆಫ್ರಿಕಾ), ಕಾಯ್ಸ್ ಅಹ್ಮದ್ (ಆಫ್ಘಾನಿಸ್ತಾನ), ಶಹೀನ್ ಅಫ್ರಿದಿ (ಪಾಕಿಸ್ತಾನ), ಅಲಿಕ್ ಅತನಾಜೆ (ವಿಂಡೀಸ್, 12ನೇ ಆಟಗಾರ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.